Thursday, August 01, 2019

ಆದಾಯ ಮೂಲವಿಲ್ಲದ ಮಹಿಳೆಯರು ಸಂಘದ ಕಂತು ಕಟ್ಟಡಲು ಪರದಾಡುವುದನ್ನು ಗಮಸಿಸಿದ್ದೀರಾ?


ಹಲವು  ಉದ್ಯಮಿಗಳು ಸಾಲದ ಸಂಕಷ್ಟದಲ್ಲಿ    ಸಿಲುಕಿಕೊಂಡಿರುವ  ಬಗ್ಗೆ  ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಅಲ್ಲದೆ  ಸಂಕಷ್ಟದಲ್ಲಿರುವ  ಕೆಲ ಕಂಪೆನಿಗಳ ಹೆಸರುಗಳೂ ಹರಿದಾಡುತ್ತಿದೆ. ಇದಕ್ಕೆ ಕಾರಣ ಕೆಫೆ ಕಾಫಿ ಡೇ  ಸಂಸ್ಥಾಪಕ ಸಿದ್ದರ್ಥ್   ಅವರ  ಆತ್ಮಹತ್ಯೆ   ಘಟನೆ.   ಉದ್ಯಮಿಗಳ  ಬಗ್ಗೆ ನಾನು ಹೆಚ್ಚು ವಿವರಿಸಲು ಇಲ್ಲಿ ಹೋಗುತ್ತಿಲ್ಲ , ಬಂಡವಾಳ ಹೂಡಿಕೆ ಮಾಡಿ ಉದ್ಯಮ ನಡೆಸುವವರೇ   ಇಂತ ಪರಿಸ್ಥಿತಿಯಲ್ಲಿ ಇರುವಾಗ   ಸಮರ್ಪಕ ಆದಾಯದ  ಮೂಲವಿಲ್ಲದೆ  ವಿವಿಧ  ಸ್ವಸಹಾಯ  ಸಂಘದಿಂದ ಸಾಲ ತೆಗೆದ  ಗ್ರಾಮೀಣ ಮಹಿಳೆಯರು ಸಂಘದ ಕಂತು ಕಟ್ಟಡಲು ಪರದಾಡುತ್ತಿದ್ದಾರೆ!

ಇಂದು  ಹಳ್ಳಿಗಳಲ್ಲಿ  ವಿವಿಧ ಹೆಸರಿನ  ಸ್ವಸಹಾಯ ಸಂಘಗಳು ರಚನೆಗೊಂಡು ಮಹಿಳೆಯನ್ನು   ಸ್ವಾವಲಭಿಯನ್ನಾಗಿಸಿದೆ.    ಸಾಮಾಜಿಕ , ಆರ್ಥಿಕ ಸುಧಾರಣೆಗೂ  ಕಾರಣವಾಗಿದೆ.   ಹೆಚ್ಚಿನ  ಮಹಿಳೆಯರು   ವಿವಿಧ ಸ್ವಸಹಾಯ ಸಂಘಗಳಲ್ಲಿ ಸದಸ್ಯರಾಗಿದ್ದು, ಹಣಕಾಸು ಸಂಸ್ಥೆಗಳಿಂದ   ಬಡ್ಡಿ ದರದಲ್ಲಿ    ಲಕ್ಷ ರೂಪಾಯಿ ಸಾಲ ಪಡೆದವರಿದ್ದಾರೆ. ಕೆಲ ಮಹಿಳೆಯರು ಎರಡೆರಡು ಸಂಘಗಳಲ್ಲಿ   ಸೇರಿಕೊಂಡು ಮೂಲಭೂತ  ಸೌಕರ್ಯ ಸೇರಿದಂತೆ ಮಕ್ಕಳ ಉನ್ನತ  ಓದಿಗಾಗಿ ಸಾಲ ರೂಪದಲ್ಲಿ  ಹಣವನ್ನು ಪಡೆದುಕೊಂಡಿದ್ದಾರೆ. ಆದರೆ ಕೆಲಸವೇ ಸಿಗದಿರುವುದರಿಂದ   ನಿಯಮಿತವಾಗಿ ವಾರಕ್ಕೆ ಕಟ್ಟಬೇಕಾದ ಸಾಲದ ಕಂತುಗಳನ್ನು ಕಟ್ಟಲು ಸಾಧ್ಯವಾಗದ  ಸ್ಥಿತಿ ಎದುರಾಗಿದೆ.      


 ಜನ ಸಾಮಾನ್ಯರಿಗೆ ಈ ಲಕ್ಷ ರೂಪಾಯಿಗಳ  ಸಾಲ ದೊಡ್ಡ ಮೊತ್ತವೇ ಆಗಿದೆ.  ಸಂಘದ  ಗುಂಪಿನ ಸದಸ್ಯರು ಪ್ರತಿ ವಾರವೂ ೫೦೦ ಅಥವಾ  ೧,೦೦೦  ರೂಪಾಯಿ ಕಂತು ರೂಪದಲ್ಲಿ ಕಟ್ಟಲೇಬೇಕೆನ್ನುವ   ಡೆಡ್ಲೈನ್ ಇದೆ.     ಕಡಿಮೆ ಮಜೂರಿಗೆ ಬೀಡಿ ಕಟ್ಟಿ ಅಥವಾ ದಿನಗೂಲಿ ಕೆಲಸ ಮಾಡಿ ಸಂಘದ  ಸಾಲದ ಕಂತು ಕಟ್ಟುವ  ಅನಿವಾರ್ಯತೆ  ಗ್ರಾಮೀಣ ಭಾಗದ ಬಡ ಮಹಿಳೆಯರದ್ದು.  ಕೆಲ ಸ್ವಸಹಾಯ ಸಂಘಗಳಲ್ಲಿ   ಸದಸ್ಯರು  ವಾರದ  ಸಭೆಗೆ ಹಾಜರಾಗುತ್ತಿಲ್ಲ.  ಅದಕ್ಕೆ  ವೈಯಕ್ತಿಕ ಕಾರಣಳಿದ್ದರೂ  ಹೆಚ್ಚು  ಹಣದ ಕೊರತೆಯೇ ಆಗಿದೆ ಎಂಬುದು ಸತ್ಯ.    ಗುಂಪಿನ ಎಲ್ಲಾ ಸದಸ್ಯರ ಒಪ್ಪಿಗೆ ಮೇರೆಗೆ ವಿಶ್ವಾಸದಿಂದ   ಎಲ್ಲರಿಗೂ ಸಾಲವನ್ನು ನೀಡಿದ್ದರೂ ವಾರದ ಮೀಟಿಂಗ್ ದಿನ ಹಣ ಹೊಂದಾಣಿಕೆಗೆ ಮಹಿಳೆಯರು ಪಡುವ ಸಂಕಷ್ಟ ಹೇಳತೀರದು . ಸಂಘದ ಸದಸ್ಯ ಬಾಕಿ ಮಾಡಿದರೂ   ಹಣ ಕಟ್ಟಿರುವ   ಸದಸ್ಯರು ಉಳಿಕೆ ಹಣವನ್ನು ಭರ್ತಿ ಮಾಡಲೇಬೇಕೆಂಬ ನಿಯಮ ಕೆಲ  ಸಂಘದ ಅಧಿಕಾರಿಗಳದ್ದೂ ಇದೆ.ಮಾತ್ರವಲ್ಲದೆ ಕಂತು ಕಟ್ಟದ ಸದಸ್ಯರ ಮನೆಗೆ ಗುಂಪಿನ ಸದಸ್ಯರು ಸಾಮೂಹಿಕವಾಗಿ ಹೋಗಿ ವಿಚಾರಿಸಿದ ಉದಾಹರಣೆಗಳೂ ಇವೆ  ಗುಂಪಿನ ಮುಖ್ಯಸ್ಥರು ಮತ್ತು ಸಹ ಸದಸ್ಯರ ಒತ್ತಡ  ಕಿರಿಕಿರಿಯನ್ನು ಸಹಿಸಿಕೊಂಡು ತಾಳ್ಮೆಯಿಂದ ಹೊಂದಾಣಿಕೆ ಮಾಡಿಕೊಂಡು  ಸಮಾಜದಲ್ಲಿ ಬದುಕುತ್ತಿದ್ದಾರೆ.  

ವಿಪರ್ಯಾಸವೆಂದರೆ  ಪ್ರತಿಯೊಂದು ಮನೆಯಲ್ಲಿಯೂ  ತಿನ್ನುವ ಕೈಗಗಳ ಸಂಖ್ಯೆ ಹೆಚ್ಚಾಗಿದ್ದು ,  ದುಡಿಯುವ ಕೈಗಳು ಕಡಿಮೆ.   ಕೂಲಿ ಕೆಲಸ  ಮಾಡುವ ಸಾಮಾನ್ಯ   ಜನರಿಗೆ ವಾರ ಪೂರ್ತಿ ಕೆಲಸ ಸಿಗುತ್ತಿಲ್ಲ.  ಮನೆಯ ಕೆಲ ಯುವಕರು ಕೆಲಸಕ್ಕೆ ಹೋಗುತ್ತಿಲ್ಲ. ಮನೆ ಸದಸ್ಯರು ಹಣ ಕಟ್ಟಲು ಸಹಾಯ ಮಾಡುತ್ತಿದ್ದರೂ ಕೆಲಸವಿಲ್ಲದ ಕಾರಣ ಅದೂ ಸಾಧ್ಯವಾಗುತ್ತಿಲ್ಲ.  ಹೀಗಾಗಿ ಜೀವನ ನಿರ್ವಹಣೆ ಜೊತೆಗೆ ಸಂಘದ ಕಂತುಗಳನ್ನು   ಕಟ್ಟಲು ಮಹಿಳೆಯರು   ತಮ್ಮ ಚಿನ್ನಾಭರಣವನ್ನು ಅಡವಿಡುವ ಪರಿಸ್ಥಿತಿ ಬಂದೊದಗಿದೆ.  ಸರ್ಕಾರವು  ಪ್ರತಿಯೊಂದು  ಬಡ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿಯೋ ಅರೆ ಸರ್ಕಾರಿಯೋ  ನಿತ್ಯ ಕೆಲಸ ಕೊಡಿಸಬಾರದೇಕೆ?  ಈ ಮೂಲಕ ತನ್ನ ಸಾಲವನ್ನು ಆತ್ಮವಿಶ್ವಾಸದಿಂದ ಕಟ್ಟಲು ಸಾಧ್ಯವಾಗುತ್ತದೆ ,ಜೀವನ ಮಟ್ಟವನ್ನೂ ಸುಧಾರಿಸಲು ಸಾಧ್ಯವಿದೆ ಅಲ್ವೇ?

Tuesday, July 30, 2019

ಉಡಲ್ದ ತುಡರ್ ತೆಕ್ಕ್ಂಡ್: ಬೊಳ್ಳಿ ತೋಟದ ಬಯ್ಯಮಲ್ಲಿಗೆ ಬಾಡ್ಂಡ್-ವಿ.ಕೆ ಕಡಬ

ತುಳು ರಂಗಭೂಮಿ ಬೊಕ ತುಳು ಸಿನೆಮಾ  ರಂಗೊಗು ಬೆಂದುದು  ರಂಗಕಲಾಭೂಷಣ , ತುಳು ರತ್ನಪೆರ್ಮೆದ ತುಳುವೆತುಳುಸಿರಿ’ ‘ತುಳು ಸಾಹಿತ್ಯ ರತ್ನಾಕರ’ ‘ತೌಳವ ಪ್ರಶಸ್ತಿಇಂಚಿತ್ತಿ ಮಾನದಿಗೆ ದೆತೊಂದು ನಮ್ಮೊಟ್ಟುಗಿತ್ತಿನ ತುಳು ಸಾಹಿತ್ಯ ಅಕಾಡೆಮಿದ ಮಾಜಿ ಗುರ್ಗಾರೆ ಎಂ.ಕೆ ಸೀತಾರಾಮ ಕುಲಾಲ್  ಕರಿನ ಐತಾರದಾನಿ ಪಂಡ ಜುಲೈ ೨೮ ನೇ ತಾರಿಕ್ ಕಾಂಡೆ  ಲೋಕ  ಬುಡುದು ಅಗತೆರ್.
ತುಳು  ಬಾಸೆಡ್ ಮನಸ್  ಅರಳುನಂಚಿನ  ಬೊಕ ಮೋಕೆ ಉರ್ಕುದು ಬರ್ಪಿನಂಚಿನ ಪದೊಕುಲೆನ್ ಮೊಡೆದ್ ತುಳು ಸಿನೆಮಾ  ಕ್ಷೇತ್ರೊಗು ಕೊರಿನ ಸೀತರಾಮ ಕುಲಾಲೆರ್   ಸಂಗೀತ ಪ್ರೇಮಿಲೆಗ್ ಬಾರೀ ಕೈತಲ್ ಆದಿತ್ತೆರ್.    ಜನಕ್ಲೆನ ಬಾಯಿಡ್ ಅಪಗಪಗ ಕೇಂದ್ ಬರೊಂದಿತ್ತಿನ  ಮೋಕೆದ ಸಿಂಗಾರಿ ಉಂತುದೆ ವಯ್ಯಾರಿ  ಯಾನ್ ಮೂಲೆ ಕಾತೊಂದುಲ್ಲೆ ಮರತೇ ಪೋಪನಾ ಪದ ತುಳುನಾಡ್ದೊರ್ಮೆ ಬಾರೀ ಪುಗರ್ತೆ ಪಡೆದ್ ಇತ್ತುಂಡು.ಅಂಚನೆ ಬೇತೆ ಬೇತೆ ಕೊಡಿಡ್  ನಡಪುನ ಪದಗೊಂಚಿಲ್ ಕಾರ್ಯಕ್ರಮಲೆಡ್ ಪದ ಕೇಂದ್ ಬರೊಂದು ಇತ್ತ್ಂಡ್.  ಪದೊಗು ಸುರುಕು ಸೊರ ಕೊರ್ನಾರ್ ಎಸ್. ಬಿ ಬಾಲಸುಬ್ರಹಣ್ಯಂ ,ಅಯೆರ್ದ್ ಬೊಕ್ಕ ಪೆರ್ಮೆದ ಗಾಯಕೆ  ಪುತ್ತೂರು ನರಸಿಂಹ ನಾಯಕ್ ಮೋಕೆದ ಸಿಂಗಾರಿ ಪದೊತ ಪೊಸ ಸಂಗೀತೊಡು  ಪಂತೆರ್.

ಪದ ಮಾತ್ರ ಅತ್,  ಪಕ್ಕಿಲು ಮೂಜಿ ಒಂಜೇ ಗೂಡುಡು ಬದ್ಕೊಂದುಂಡುಗೆ,  ಪರಶುರಾಮನ ಕೊಡಲಿಗ್ ಪುಟ್ಟಿನ ತುಳುನಾಡ್, ಬ್ರಹ್ಮನ ಬರವು ಮಾಜಂದೆ ಪೊಂಡಾ,  ಅಪ್ಪೆ ಮನಸ್ ಬಂಗಾರ ಅಮ್ಮ ತೆನಸು ಸಿಂಗಾರ, ಡಿಂಗಿರಿ ಮಾಮ ಡಿಂಗಿರಿ ಮಾಮ ಪೊಡಿದ್ ಪಾರಡಾ. ಇಂಚ ಜನಕ್ಲೆನ ನಲಾಯಿದ  ಕೊಡಿಟ್ ನಲಿಪುನ ಪದೊಕುಲೆನ್ ಬರೆದ್   ಸುಮಾರು 11 ತುಳು ಸಿನೆಮೊಲೆಗ್  2 5 ಜಾಸ್ತಿ ಸೂಪರ್ ಹಿಟ್  ಪದೊಕುಲೆನ್  ಬರೆತೆರ್ .  ಪದೊತ  ಮೂಲಕ ಬೇಗ ಜನಕ್ಲೆಗ್ ಗುರ್ತ ಆಯಿನ ಮಾತ್ರ ಅತ್ ಆರ್ ರಂಗಭೂಮಿಡ್ ಬೆಂದ್ ನಾರ್. ಇರ್ವೊನೆ ಒರ್ಸೊಡು ನಾಟಕ ಬರೆವರ ಪಿದಾಡಿನ ಕುಲಾಲೆರ್ ದಾಸಿ  ಪುತ್ರ ಪನ್ಪಿನ ಪುದರ್ ಡ್ ಸುರುತ ನಾಟಕ ಬರೆಯೆರ್. ಅಯೆರ್ದ್ ಬೊಕ್ಕ ತುಳು ಮಣ್ಣ್ ಬಿರ್ಸೆದಿ ಪೊಣ್ಣು ರಾಣಿ ಅಬ್ಬಕ್ಕನ ಬಗೆಟ್ ಬರೆಯ್ನ ಮಣ್ಣಿನ ಮಗಳು ನಾಟಕ ಎಡ್ಡೆ ಪುದರ್ ನ್ ಕನತ್ಂಡ್. ಇಂಚ ಕನ್ನಡೊಡು ಒಟ್ಟು ೨೦ ಸಾಮಾಜಿಕ ನಾಟ ೧೯ ಚಾರಿತ್ರಿಕ ಬೊಕ ಪೌರಾಣಿಕ ಜಾನಪದ ನಾಟಕೊನು ಬರೆಯೆರ್. ಐತ ಒಟ್ಟುಗೆ ೧೦  ತುಳು ಸಾಮಾಜಿಕ ಬೊಕ ಚಾರಿತ್ರಿಕ ನಾಟಕ ತುಳು ನಾಟಕನ್ ಕನ್ನಡಗ್ ತರ್ಜುಮೆ ರೇಡಿಯೋ ನಾಟಕ ದೃಶ್ಯ ರೂಪಕ ಬುಕ ನಾಲ್  ಗೀತ ರೂಪ ರಚನೆ ಮಲ್ದುದು ಕನ್ನಡ ಬುಕ ತುಳು ರಂಗಭೂಮಿಗ್ ಬೆಂದಿನಾರ್.


ಮಲ್ಲ ತುಳು ಚಿತ್ರ ಸಾಹಿತಿಯಾದ್ ಪುದರ್ ಪಡೆಯಿನ ಸೀತರಾಮ ಕುಲಾಲ್ ಪಗೆತ ಪುಗೆ, ಉಡಲ್ದ ತುಡರ್, ಬಯ್ಯ ಮಲ್ಲಿಗೆ ಬದ್ಕ್ ಬಿಲೆ, ನಿರೆಲ್ ಸಿನೆಮಾಗ್ ಪದೊಕುಲೆನ್ ಬರೆದ್ ಕೊರ್ದಿತ್ತೆರ್. ಮೇರ್ ಬರೆಯಿನ ಮೋಕೆದ ಸಿಂಗಾರಿ,ಪಕ್ಕಿಲು ಮೂಜಿ ಒಂಜೇ ಗೂಡುಡು, ಬ್ರಹ್ಮನ ಬರವು ಮಾಜಂದೆ ಪೋಂಡ, ಉಡಲ್ದತುಡರ್ ಗ್ ಮನಸ್ ಉರ್ಕರ್ದ್, ಸಾರ ಒರ್ಸೊಲ ಸುಕೊನೆ ಪಡೆಲ ಇಂಚಿನ ಪದೊಕುಲು ಇತ್ತೆಲಾ ಜನಕ್ಲೆನ ಉಡಲ್ ಡ್ ಉಂಡು . ರಾಮಕಿರೋಡಿಯನ್  ಬುಕ ಕೆ.ಎನ್ ಟೇಲರ್ ಸಂಜೀವ ದಂಡಕೇರಿ ಮುಲ್ಕೆನೊಟ್ಟುಗು ಸೇರೊಂದು ಕಡಲನಾಡ ಕಲಾವಿದರು ಪನ್ಪಿನ ನಾಟಕ ತಂಡೊನು ಕಟ್ಟ್ ದ್ ಬೇತೆ ಬೇತೆ ಕೋಡಿಲೆಡ್ ನಾಟಕ  ಗೊಬ್ಬುದು ಪಾಲ್ ಪಡೆದ್ ದಿಂಜ ಪ್ರಶಸ್ತಿನ್ ಪಡೆದಿತ್ತೆರ್. ಮೇರ್ ಬರೆಯಿನ ನಾಟಕ ಬೆಂಗಳೂರು, ಬೊಂಬಾಯಿ ಬುಕ ಪಿದಾಯಿ ದೇಸೊಡ್ಲಾ ಪ್ರದರ್ಶನ ಆದಿತ್ತುಂಡು.
ವೃತ್ತಿ ಬದ್ ಕ್ ಡ್ ಯುನೈಟೆಡ್ ಇನ್ಸೂರೆನ್ಸ್ ಕಂಪೆನಿಡ್ ಬೇಲೆ ಮಲ್ತೊಂದಿನ ಸೀತಾರಾಮ ಕುಲಾಲ್ ಸುರತ್ಕಲ್ ಡ್ ಹಿರಿಯ ಶಾಖಾದಿಕಾರಿಯಾದ್ ನಿವೃತ್ತಿಯಾಯೆರ್. ತುಳು ಸಾಹಿತ್ಯ ಅಕಾಡೆಮಿಡ್ ೨೦೦೫ ಡ್ದ್ ೨೦೦೮ ಮುಟ್ಟ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿದ ಗುರ್ಕಾರೆಯಾದ್ ಸೇವೆ ಮಲ್ತಿನ ಸಿತಾರಾಮ ಕುಲಾಲೆರ್ ಅಕಾಡೆಮಿದ ಜಾಗೆ ಬೊಕ ತುಳು ಭವನೊದ ನಿರ್ಮಾಣೊಗು ಕಾರಣ ಕರ್ತರೆರ್ ಅಂಚನೆ ತುಳು ಕಲ್ಪುಗ ಕಜ್ಜೊಗು ಕೈ ಜೋಡಿಸಾದ್ ಇತ್ತೆರ್. ಕುಡ್ಲದ ಬಿಜೈ ಕೈತಲ್ ಬಾಳಿಗ ಸ್ಟೋರ್ ಪನ್ಪಿನಲ್ಪ ಇಲ್ಲ್ ಮಲ್ತ್ ದ್  ಇತ್ತಿನ ಮೇರ್  ಇಂಚಿಪ ಅರೋಗ್ಯ ಸಮಸ್ಯೆದಾತ್ರ ಆಸ್ಪತ್ರೆ ಸೇರ್ದಿತ್ತೆರ್. ಮೇರ್ ಲೋಕ ಬುಡುತು ಅಗತಿನ ಸುದ್ದಿ ಕೇಂದ್ ತುಳು ರಂಗಭೂಮಿ ಬೊಕ ಸಿನೆಮಾ ಕ್ಷೇತ್ರದ ಕಲಾವಿದೆರ್ ಕಣ್ಣಿರ್ ಪಾಡ್ತೆರ್.

ತುಳು ರಂಗಭೂಮಿ ಬೊಕ ಸಿನೆಮಾ ಕ್ಷೇತ್ರಗ್ ಮಾಮಾಲ್ಲ ಸಂಪತ್ ಕೊರ್ನ ,ರಂಗಭೂಮಿದ ಬುಲೆಚ್ಚಿಲ್ಗ್  ಕಾರಣ ಆಯಿನ   ಸೀತರಾಮ ಕುಲಾಲ್  ನಮ್ಮೊಟ್ಟುಗು ಇಜ್ಜೆರ್. ಆರ್  ಬರೆಯಿನ ಭ್ರಹ್ಮನ ಬರವು ಮಾಜಿದ್ ಪೋಂಡಾ ಪದ ಕೆಬಿಟ್ ಕುಡ ಕೇಂಡಿಲೆಕ್ಕ ಆಪುಂಡು..ಉಡಲ್ದ ತುಡರ್ ತೆಕ್ಕ್ಂಡ್ ….. ಬೊಳ್ಳಿ ತೋಟದ ಬಯ್ಯಮಲ್ಲಿಗೆ ಬಾಡ್ಂಡ್

Wednesday, February 13, 2019

ನಾವು ಸಮಯ ನುಂಗದ, ಗಂಟೆಗಟ್ಟಲೆ ಕೊರೆಯದ ನಿರೂಪಕರು: ಬಾನುಲಿಯ ಬಾನಾಡಿಗಳು!


ಸಾಮಾನ್ಯವಾಗಿಆಡಿಯೋಎಂಬ ಶಬ್ದ ಹೆಚ್ಚು  ಬಳಕೆಯಾಗುವುದು ಮತ್ತು ಕೇಳಿ ಬರುವುದು ರೇಡಿಯೋ ಮಾಧ್ಯಮದ ಕಾರ್ಯಕ್ಷೇತ್ರದಲ್ಲಿ ಮಾತ್ರ .ಆದರೆ  ಪ್ರಸ್ತುತ ರಾಷ್ಟ್ರ ಮತ್ತು ರಾಜ್ಯ ರಾಜಕಾರಣದಲ್ಲಿ  ಆಡಿಯೋ ಸುದ್ದಿ ಜೋರಾಗಿ ಕೇಳಿ ಬರುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿ. ನಡುವೆ ವಿಶ್ವ ರೇಡಿಯೋ ದಿನ ಬಂದದ್ದು ಗೊತ್ತೇ ಆಗಿಲ್ಲ ನೋಡಿ!

ಸಾಮಾನ್ಯವಾಗಿ ರೇಡಿಯೋ ನಿರೂಪಕರು ಯಾವುದಾದರು  ಸಾರ್ವಜನಿಕ ಕಾರ್ಯಕ್ರಮಕ್ಕೆ ಹೋದಾಗ ಹಲವು ಜನ ಕುತೂಹಲದಿಂದ ಗಮನಿಸುವುದುಂಟು. ಸ್ವಲ್ಪ ಕಡಿಮೆ ಮಾತನಾಡಿ  ಎನ್ನುವವರೂ ಇದ್ದಾರೆ. ಒಂದು ಸಂತೋಷವೆಂದರೆ ನಾನು ಗಮನಿಸಿದ ಹಾಗೆ  ರೇಡಿಯೋ ಮಾಧ್ಯಮದಲ್ಲಿ ಕೆಲಸ ಮಾಡುವವರಿಗೆ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಭಾಷಣ ಮಾಡುವ ಅಥವಾ ಮಾತನಾಡುವ ಅವಕಾಶ ಸಿಕ್ಕಾಗ ಗಂಟೆಗಟ್ಟಲೆ ಕೊರೆಯುವುದಿಲ್ಲ, ಮತ್ತೊಬ್ಬರ ಸಮಯವನ್ನು ನುಂಗುವುದಿಲ್ಲ,  ವಿಷಯಾಂತರ ಮಾಡುವುದಿಲ್ಲ . ಇದಕ್ಕೆ ಒಂದು  ಕಾರಣವೂ ಇದೆ ಎನ್ನಬಹುದು. ಅದೇನೆಂದರೆ ನಾವು ನಮ್ಮ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ವಿಷಯ ಬರೆಯುವಾಗ ಹೆಚ್ಚಾದಾರೆ ಕತ್ತರಿ ಪ್ರಯೋಗ ಮಾಡುತ್ತೇವೆ. ಕಡಿಮೆಯಾದರೆ ಪೂರಕ ವಿಷಯ ವಿವರಣೆಯೊಂದಿಗೆ ಸಮಯಕ್ಕೆ ಸರಿಯಾಗಿ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ. ಹಾಗಾಗಿ ಮಾತಿನಲ್ಲಿಯೂ ಹಿಡಿತ ಸಾಧಿಸಲು ಪ್ರಯತ್ನಿಸುತ್ತೇವೆ.

 ನಮ್ಮ ಪ್ರತಿಯೊಂದು ಕಾರ್ಯಕ್ರಮಗಳಿಗೆ ನಿರ್ದಿಷ್ಟ  ಸಮಯದ ಮಿತಿ ಇರುವುದರಿಂದ ಅಷ್ಟೇ ಸಮಯದೊಳಗೆ ಕಾರ್ಯಕ್ರಮ ಮುಗಿಸಬೇಕಾಗುತ್ತದೆ . ಗಣ್ಯ ವ್ಯಕ್ತಿ ಇರಲಿ ,ಸಾಮಾನ್ಯ ವ್ಯಕ್ತಿ ಇರಲಿ  ನೇರ ಪ್ರಸಾರ ಅಥವಾ ಧ್ವನಿ ಮುದ್ರಿತ ಪ್ರಸಾರದಲ್ಲಿ ಹಲವು ಬಾರಿ ಮಾತುಗಳಿಗೆ ಕತ್ತರಿ ಪ್ರಯೋಗವನ್ನು ಮಾಡುವ ಮೂಲಕ ನಿಗದಿತ ಸಮಯದೊಳಗೆ ಕಾರ್ಯಕ್ರಮವನ್ನು ಬಿತ್ತರಿಸುತ್ತೆವೆ .




ಸಾಮಾಜಿಕ ಜಾಲತಾಣದಲ್ಲಿ ನಿರೂಪಕರಿಗೆ ಅಭಿಮಮಾನಿಗಳ ಬಳಗ!

 ರೇಡಿಯೋ ನಿರೂಪಕರೆಂದರೆ   ಒಂದು ಕಾಲಕ್ಕೆ ಧ್ವನಿಯಲ್ಲಿಯೇ ಪರಿಚಿತ ಹೊರತು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಿಲ್ಲ,ಜೊತೆಗೆ ಅಂತಹ ವ್ಯವಸ್ಥೆಗಳು ಸಕಾಲದಲ್ಲಿ ಇರಲಿಲ್ಲ. ಬದಲಾದ ಕಾಲಘಟ್ಟದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಯಿಂದ ರೇಡಿಯೋ ನಿರೂಪಕರು ಜನ ಸಾಮಾನ್ಯರಿಗೂ ಕಾಣಸಿಗುತ್ತಾರೆ.ಇಂದು ಫೇಸ್ ಬುಕ್ ನಲ್ಲಿ ಹಲವು ನಿರೂಪಕರು ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ.

ಇಡೀ ದಿನಾ ರೇಡಿಯೋದಲ್ಲಿ ಮಾತನಾಡುತ್ತಿರಾ?!

ರೇಡಿಯೋ ಕ್ಷೇತ್ರದ ಪರಿಚಯ ಇರುವ ಮತ್ತು ಅದರ ಬಗ್ಗೆ ತಿಳಿದಿರುವ ಹಾಗೂ ರೇಡಿಯೋ ಕೇಳುವ ಹವ್ಯಾಸ ಬೆಳೆಸಿಕೊಂಡಿರುವ , ಸದಾ ಒಟನಾಟ ಇರುವ ಜನರಿಗೆ ಇದರ ಸ್ಥೂಲ ಪರಿಚಯ ಇರುತ್ತದೆ.ಹಾಗಾಗಿ ನಮ್ಮ ಕೆಲಸ ಏನು ಎಂಬುದು ತಿಳಿದಿರುತ್ತಾರೆ. ಆದರೆ ಬಹುತೇಕರು ರೇಡಿಯೋ ಒಳಗೆ ಕೆಲಸ ಏನಿದೆ ಎಂದು ಕೇಳಿದರೆ, ಇನ್ನು ಕೆಲವರು ಇಡೀ ದಿನಾ ಮಾತನಾಡುತ್ತಿರಾ?  ಎಂದು ಕೇಳುವವರಿದ್ದಾರೆ.  ಮತ್ತೆ ಕೆಲವರು ರೇಡಿಯೋ ಕೇಳುವವರು ಈಗ ಇದ್ದಾರಾ? ಎಂದು ಪ್ರಶ್ನಿಸಿದರೆ ಮತ್ತೆ ಕೆಲವರು ಏನೆಲ್ಲ ಮಾತನಾಡುತ್ತಿರಾ ಎಂದು ಕೇಳುತ್ತಾರೆ. ಆದರೆ  ನಾವು ಪುಸ್ತಕಗಳನ್ನು ಓದುತ್ತೇವೆ, ಭಾಷಣಗಳನ್ನು ಕೇಳುತ್ತೇವೆ , ಕಾರ್ಯಕ್ರಮಕ್ಕೆ ತಯಾರಿ ಮಾಡುತ್ತೇವೆ, ನಮ್ಮದೇ ಕಾರ್ಯಕ್ರಮವನ್ನು ನಾವೇ ಕೇಳುತ್ತೇವೆ , ರೇಡಿಯೋ ನಿಲಯದ ಒಟ್ಟು ಕಾರ್ಯಕ್ರಮದ ರೂಪುರೇಷೆಯೊಳಗಿನ ಕೆಲಸಲ್ಲಿ ಭಾಗಿಯಾಗಿರುತ್ತೇವೆ ಎಂಬುದು ಹಲವರಿಗೆ ಗೊತ್ತೇ ಇಲ್ಲವೆಂದು ಅನಿಸುತ್ತದೆ.

ಅಪರಿಚಿತ ಕೇಳುಗರ ಜೊತೆ ಜಗಳ!
ಆಕಾಶವಾಣಿ ನನ್ನ ರೇಡಿಯೋ ಜೀವನದ ಮೊದಲ ಪಾಠ ಶಾಲೆ. ಬಳಿಕ ನಾನು ಮಂಗಳೂರಿನ  ರೇಡಿಯೋ ಸಾರಂಗ್ ನಲ್ಲಿ ಸುಮಾರು ಐದು ವರ್ಷ ಕೆಲಸ ಮಾಡಿಡಿದ್ದೆ. ಅಲ್ಲಿ  ತುಳು ಚಾವಡಿ,ಜನದನಿ, ಒಲವಿನಹಾಡು ಇತ್ಯಾದಿ ಜನ ಮೆಚ್ಚುಗೆಯ ಕಾರ್ಯಕಮ ನಡೆಸಿಕೊಟ್ಟಿದ್ದೆ. ಬಹುತೇಕ  ಕೆಳುಗರು ಸಾವಧಾನದಿಂದ ಆಲಿಸಿದರೆ, ಇನ್ನು ಕೆಲ ಕೇಳುಗರು ಕಿರಿಕ್ ಪಾರ್ಟಿಯಾಗಿದ್ದರು! ಲೈನ್ ಸಿಗದಕ್ಕೆ ಹಲವರು ಬೇಸರ ವ್ಯಕ್ತಪಡಿಸಿದರೆ ಇನ್ನು ಕೆಲವರು ನಮ್ಮ ಕರೆ ಮಾತ್ರ ಸ್ವೀಕರಿಸುವುದಿಲ್ಲ ಎಂಬ ವಾದವನ್ನು ಮಾಡಿದ್ದರು.. ಮಂಗಳೂರು ಸಮೀಪದ ಯುವತಿಯೊಬ್ಬರು  ಸುಮಾರು ಎರಡು ವರ್ಷದಷ್ಟು ನನ್ನ ನೇರ ಪ್ರಸಾರ ಕಾರ್ಯಕ್ರಗಳಿಗೆ ಅಡಚಣೆ ಮಾಡಿದ್ದು ಮರೆಯಲು ಅಸಾಧ್ಯ. ಅಪರಿಚಿತ ಕೇಳುಗರು ನಮ್ಮ ಮೇಲೆಯೇ ಸವಾರಿ ಮಾಡಿದಾಗ ನಾನು ಕೋಪಗೊಂಡದ್ದು ಮಾತ್ರವಲ್ಲದೆ ಜಗಳವೂ ಮಾಡಿದ್ದು ಇದೆ!

ಸದ್ಯ ಉಜಿರೆಯಲ್ಲಿ ಮತ್ತೆ ರೇಡಿಯೋ ಜೀವನ ಮುಂದುವರಿಸಿದ್ದು, ಎಸ್.ಡಿ. ಎಂ  ಸಂಸ್ಥೆಯ ಅಧೀನದಲಿರುವ ರೇಡಿಯೋ ನಿನಾದ90.4 FM  ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.   ನಾವು ರೇಡಿಯೋ ನಿರೂಪಕರು. ಸಮಯ ನುಂಗದ, ಗಂಟೆಗಟ್ಟಲೆ  ಕೊರೆಯದ, ಬಾನುಲಿಯ ಬಾನಾಡಿಗಳು!  –ವಿ.ಕೆ ಕಡಬ