Friday, March 17, 2017

ನಮ್ಮ ಮನೆಯ ಕೆರೆ-ಅಕ್ಷಯ ಪಾತ್ರೆ:- ಆದರೆ ಈಗ ಬತ್ತಲು ಸಿದ್ದವಾಗಿದೆ!

ಮಂಗಳೂರು ಸೇರಿದಂತೆ ತುಳುನಾಡಿನ ಬಹುತೇಕ ಕಡೆಗಳಲ್ಲಿ  ಈಗ  ನೀರು ಪೂರ್ಣ ಪ್ರಮಾಣದಲ್ಲಿ ಇಲ್ಲ ಎನ್ನುವ ಸುದ್ದಿ ಕೇಳಿ ಬರುತ್ತಿದೆನೀರಿಲ್ಲದೆ ಪರದಾಡುವುದನ್ನುಕಣ್ಣಾರೆ ನೋಡುತ್ತಿದ್ದೇವೆ ಕೂಡ . ನಾನು ನಮ್ಮ ಮನೆಗೆ ಬಳಸುವ ನೀರಿನ ಮೂಲದ ಬಗ್ಗೆ ಹೇಳಬೇಕೆಂದಿರುವೆ. ನಮ್ಮ ಮನೆಯಲ್ಲಿ ಬಾವಿ ಇಲ್ಲ,ಬದಲಾಗಿ ಒಂದು ಸಣ್ಣ ಕೆರೆ ಇದೆ . ನಮ್ಮ ತೋಟದಲ್ಲಿನ ಕೆರೆಗೆ 18 ಮನೆಯವರು ನೀರಿಗೆ ಬರುತ್ತಿದ್ದರು. ಮಂಜಾನೆ 5 ಘಂಟೆಗೆ ಕಿರ್ಕಿರ್ಅಂತ ರಾಟೆಯ ಶಬ್ದ ಕೇಳುತ್ತಿತ್ತು .ಬಟ್ಟೆ ಹೊಗೆಯಲು ,ಯಾವುದೇ ಶುಭ ಸಮಾರಂಭಗಳಿಗೆ ,ದಿನದ ದಿನಚರಿಗೆ ನಮ್ಮ ಮನೆಯ ಕೆರೆಯ ನೀರೆ ಬಳಕೆಯಾಗುತ್ತಿತ್ತು . ಈಗ ಗ್ರಾಮ ಪಂಚಾಯತ್ ನಿಂದ ನೀರಿನ ಸೌಲಭ್ಯ ಬಂದರೂ ಕುಡಿಯುವುದಕ್ಕೆ ನಮ್ಮ ಕೆರೆಯ ನೀರೆ ಬೇಕು .ಎರಡು ವರ್ಷಗಳ  ಹಿಂದೆ ನಮ್ಮ ಕೆರೆಯ ಹತ್ತಿರ ಸಾಯಂಕಾಲದ ಹೊತ್ತಿನಲ್ಲಿ ಜನ ಸಮೂಹ ಇರುತ್ತಿತ್ತು . ನಮ್ಮ ಮನೆಯ ಎದುರು ಭಾಗದಲ್ಲಿ ಕೆರೆ ಇದ್ದ ಕಾರಣ ಎಲ್ಲರೂ ಕರೆದು ಮಾತಾಡುತ್ತಿದ್ದರು.ಕೆಲವೊಮ್ಮೆ ಕಿರಿ ಕಿರಿ ಆದಾಗ ನಾವು ಮನೆಯೊಳಗೆ ಬಾಗಿಲು ಹಾಕಿ ಕೂತದ್ದು ಉಂಟು! . ಪಂಚಾಯತ್ ಕುಡಿಯುವ ನೀರಿನ ಯೋಜನೆ ಬಂದ ಮೇಲೆ ಸರದಿ ಸಾಲಲ್ಲಿ ಬಂದು ನೀರು ಕೊಂಡುಹೋಗುವ ಪ್ರಮೇಯ ಇಲ್ಲ. ಕೆರೆಯನ್ನು ನನ್ನ ತಂದೆ ಪರಿಶ್ರಮದಿಂದ ಮಾಡಿದ್ದಾರೆ( ಈಗ ನಮ್ಮ ಜೊತೆ ಇಲ್ಲ).ಯಾವುದೇ ತಂತ್ರಜ್ಞಾನ ಬಳಸಿಲ್ಲ .ಮೊದಲು ಇಲ್ಲಿ ಸಣ್ಣದಾಗಿ ವರತೆ ಬಂದು ನೀರು ನಿಲ್ಲುತ್ತಿತ್ತು ಬಳಿಕ ಮಾಯವಾಯಿತಂತೆಅದಕ್ಕಾಗಿ ಗುಂಡಿ ಮಾಡಬೇಕಾಯಿತು ಎಂದು ತಂದೆ ಹೇಳಿದ ನೆನಪು.   


ನಮ್ಮ ಮನೆಯಿಂದ ಕುಮಾರಧಾರ ನದಿ 4 ಕಿಲೋ ಮೀಟರ್ ದೂರದಲ್ಲಿದೆ. .ಮಳೆಗಾಳದಲ್ಲಿ ನದಿಯಲ್ಲಿ ಮಣ್ಣು ಮಿಶ್ರಿತ ಕೆಂಪು ನೀರು ಬಂದಾಗ ಮನೆಯ ಕೆರೆಯ ನೀರಿನ ಬಣ್ಣ ಸ್ವಲ್ಪ ಬದಲಾಗುತ್ತದೆ.ನಮ್ಮ ಮನೆ ಇರುವುದು ಇಳಿಜಾರು ಜಾಗದಲ್ಲಿ, ಸುತ್ತ ಮುತ್ತ  ಸ್ವಲ್ಪ ಅಡಕೆ ತೋಟ,ನೆರೆಮನೆಯವರ ರಬ್ಬರ್ ತೋಟವೂ ಇದೆ.ನಮ್ಮ ದೊಡ್ಡಪ್ಪನ ಮನೆ ಕೂಗಳತೆಯ ದೂರದಲ್ಲಿದೆ . ಅಲ್ಲಿ ಅವರು ಎರಡುಕೆರೆಗಳನ್ನು ನಿರ್ಮಿಸಿದ್ದಾರೆ. ಆದರೆ ಮಳೆಗಾಲ ಹೊರತು ಪಡಿಸಿ ಉಳಿದ ಸಮಯದಲ್ಲಿ ಎರಡು ಕೆರೆಗಳಲ್ಲಿ ನೀರು ಇರುವುದಿಲ್ಲ! ನಮ್ಮ ಕೆರೆಯ ನೂರು ಮೀಟರ್ ದೂರದಲ್ಲಿ ಎರಡು ಸರ್ಕಾರಿ ಕೊಳವೆ ಬಾವಿ ಇದ್ದು ಒಂದರಲ್ಲಿ ಮಾತ್ರ ನೀರು ಲಭ್ಯವಿದೆ.ಯಾವತ್ತು ವರ್ಷಪೂರ್ತಿ ನೀರು ಕೊಡುತ್ತಿದ್ದ ನಮ್ಮ ಕೆರೆ ಬಾರಿ ಮಾತ್ರ ಕೆಸರು ನೀರು ಕೊಡಲು ಸಿದ್ದವಾಗಿದೆ . ನಲ್ವತ್ತು  ವರ್ಷ ಹಳೆಯದಾದ ಕೆರೆಯಲ್ಲಿ ನೀರು ಬತ್ತುತ್ತಿರುವುದು ಇದು ಎರಡನೇ ಸಲ .
2015 ಮೇ ತಿಂಗಳಿನಲ್ಲಿ
 

ಬಾರಿ ಒಂದೇ ಕೆರೆಯಲ್ಲಿ ಎರಡು ಪಂಪ್ ಸೆಟ್ ಜೋಡಿಸಲಾಗಿದೆ . ಕೆರೆಯಿಂದ ಯಾರೆಲ್ಲ ನೀರು ತೆಗೆದುಕೊಂಡು ಹೋಗುತ್ತಾರೊ ಅವರೆಲ್ಲರೂ ಬಾರದಿದ್ದರೂ ಕೆಲವರು ಕೈ ಜೋಡಿಸಿ ಹೂಳೆತ್ತುವ ಮಾಡುತ್ತೆವೆ ಕಳೆದ ಬಾರಿ ಕೆಸರಿನಡಿಯಲ್ಲಿ ಐದು ಕೊಡಪಾನ ಬೇರೆ ಸಿಕ್ಕಿದೆ!! ವರ್ಷ ಯಾವುದೇ ಕೆಸರು ತೆಗೆಯುವ ಕಾರ್ಯಕ್ಕೆ ಮುಂದಾಗಲಿಲ್ಲ . ವರ್ಷದಿಂದ ಕೆರೆಯ ಸುತ್ತಮುತ್ತ ಇಂಗು ಗುಂಡಿ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ . ಊರಿಗೆಲ್ಲ ಪಂಚಾಯತ್ ಒದಗಿಸಿದ ನೀರು ಬಂದರೂ ನಾವು ನಳ್ಳಿ ಹಾಕಿಸಿಕೊಂಡಿಲ್ಲ . ಆದರೆ ಮನೆಯ ಕೆರೆ ವರ್ಷಪೂರ್ತಿ ನೀರು ಕೊಡುವ ಅಕ್ಷಯ ಪಾತ್ರೆ ಯಾಗಿದೆ  

Wednesday, March 08, 2017

ಯಶೋಗಾಥೆ… ಇದು ಯಶೋಧೆಯ ಕತೆ

 ಇಂದು ವಿಶ್ವ ಮಹಿಳೆಯರ ದಿನ. ಇದು ಮಹಿಳೆಯರ ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮತ್ತು ಹೆಣ್ಣಿನ ಜೀವನ ಪಥ ಬದಲಾದ ಸಂಕೇತ ದಿನವೂ ಕೂಡ. ಸಬಲ, ವಿದ್ಯಾವಂತ, ಅಭಿವೃದ್ಧಿಶೀಲ ಮಹಿಳಾ ಸಮಾಜದಿಂದ ಮಾತ್ರ ಸಮಾಜದ ಉನ್ನತಿ ಸಾಧ್ಯವಾಗದು. ಬದುಕನ್ನು ಸವಾಲಾಗಿ ಸ್ವೀಕರಿಸಿ  ಮಾದರಿಯಾದ  ಹೆಣ್ಣಿನಿಂದಲೂ ಸಮಾಜ ಬದಲಾಗಬಹುದು ಮತ್ತು ಜೀವನ   ಪಾಠವನ್ನು ಕಲಿಯಬಹುದು
  ಈ ಹಿನ್ನೆಲೆಯಲ್ಲಿ ನನ್ನ ಬರಹ   ➤➤ವಿ.ಕೆ ಕಡಬ