ಕಡಬದಿಂದ
:- VK KADABA
ಖಾಲಿ ಕ್ವಾಟ್ರು ಬಾಟ್ಲಿಯಂಗೆ ಲೈಪು....ಅಂತ ಯೋಗರಾಜ
ಭಟ್ಟರ ಹಾಡು ನೀವೆಲ್ಲ ಕೇಳಿದ್ದಿರಿ
ಮತ್ತು ಹಾಡಿಗೆ ಕೆಲವರು ಹೆಜ್ಜೆಯೂ
ಹಾಕಿದ್ದಿರಿ ಆದ್ರೆ ಈ ಹಾಡಿನ ಕುರಿತಾಗಿ ನಾನು ಬರೆಯುತ್ತಿಲ್ಲ. ನಾನು
ಬರೆಯೊ ಸಂಗತಿಯೇ ಬೇರೆ. ನಿಮಗೆಲ್ಲ ಗೊತ್ತಿರುವ ಹಾಗೇ
ನಮ್ಮ ಸುತ್ತಮುತ್ತ ಯಾವುದಾದರೂ
ಒಂದು ನಮೂನೆಯ ಪಾರ್ಟಿಗಳು ಆಗಾಗ
ನಡೆಯುತ್ತ ಇರುತ್ತದೆ .ಹೈ-ಫೈ ಗುಂಡು
ಪಾರ್ಟಿ ಸುದ್ದಿಯಾಗದೆ
ಎಲ್ಲಾ ಕಡೆ ನಡೆಯುತ್ತಲೇ ಇರುತ್ತದೆ. ಮೊನ್ನೆ
ವಾಮಂಜೂರು ವ್ಯಾಪ್ತಿಯ ಗುಡ್ಡದಲ್ಲಿ ಸಂಭ್ರಮಕ್ಕಾಗಿಯೋ ಅಥವಾ
ಬೇರೆ ಕಾರಣಕ್ಕಾಗಿಯೋ ಒಟ್ಟಿನಲ್ಲಿ
ಭರ್ಜರಿ ಪಾರ್ಟಿಯೊಂದು ನಡೆದಿದೆ. ಅದು
ಕಿರಿಕ್ ಪಾರ್ಟಿ ಅಲ್ಲದಿದ್ದರೂ
ಅನುಮತಿ ರಹಿತ ಮದ್ಯದ ಪಾರ್ಟಿ . ಸಾಕ್ಷಿಗಾಗಿ
ಉಳಿದಿರುವುದು ಮರ್ವಯಿ
ಗಸಿ ಮತ್ತು ಲೆಕ್ಕಕ್ಕೆ ಸಿಗದ
ಖಾಲಿ ಬೀರು ಬಾಟಲಿಗಳು!
ಖಾಲಿ ಬೀರು ಬಾಟಲಿಗಳು ಚಿತ್ರ :-ಸಿಂಚನಾ ಶ್ಯಾಂ |
ಗಮನಿಸಿದ
ಬೇಕಾದ ವಿಚಾರವೆಂದರೆ ಮಂಗಳೂರಿನ
ಪಡೀಲ್ ಹೋಮ್ ಸ್ಟೇ ದಾಳಿಯ
ನಂತರ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ರಾಜ್ಯದಲ್ಲಿ
ವೀಕೆಂಡ್ ಪಾರ್ಟಿಗಳ ಮೇಲೆ ಕಡಿವಾಣ ಹಾಕಿದೆ.
ಅದರಲ್ಲೂ ಕರಾವಳಿ ಭಾಗದಲ್ಲಿ ಇಂತಹ
ಪಾರ್ಟಿಗಳ ಆಯೋಜನೆಗೆ ನಿರ್ಬಂಧ ಹೇರಿದೆ . ಇಲಾಖೆ
ಹೊರಡಿಸಿರುವ ಆದೇಶದಲ್ಲಿ ಪಣಂಬೂರ್ ಬೀಚ್, ಪಿಲಿಕುಳ
ನಿಸರ್ಗಧಾಮ ಸೇರಿದಂತೆ ಹೋಮ್ ಸ್ಟೇಗಳಲ್ಲಿ ಪಾರ್ಟಿಗಳನ್ನು
ನಡೆಸದಂತೆ ನಿರ್ಬಂಧ ಹೇರಿದೆ. ಜೊತೆಗೆ
ಮನೆ ಹೊರತುಪಡಿಸಿ ಬೇರೆಡೆ ಪಾರ್ಟಿ ಮಾಡವುದಾದರೆ
ಪೊಲೀಸರಿಂದ ಪೂರ್ವಾನುಮತಿ ಪಡೆಯುವುದು ಈಗ ಕಡ್ಡಾಯ. ಅಪಾರ್ಟ್ಮೆಂಟ್, ರೆಸಾರ್ಟ್, ಪಬ್ ಹಾಗೂ ರೆಸ್ಟೊರೆಂಟ್
ಅಥವಾ ಹೋಟೆಲ್ ಗಳಲ್ಲಿ ಪಾರ್ಟಿ
ಮಾಡಲು ಪೊಲೀಸ್ ಅನುಮತಿ ಅಗತ್ಯವಾಗಿದೆ. ಪಾರ್ಟಿಯಲ್ಲಿ
ಭಾಗವಹಿಸುವ ಒಟ್ಟು ಜನರ ಸಂಖ್ಯೆ,
ವಿವರ, ಬಳಸುವ ಧ್ವನಿವರ್ಧಕ ವ್ಯವಸ್ಥೆ
,ಡಿಜೆ ಡ್ಯಾನ್ಸ್ , ಅಲ್ಕೋಹಾಲ್ ನೀಡಲಾಗುತ್ತದೆಯೇ ಮುಂತಾದ ವಿಷಯಗಳನ್ನು ಮೊದಲೇ ಅರ್ಜಿಯಲ್ಲಿ
ತಿಳಿಸಬೇಕಾದುದು ಅಗತ್ಯ. ಆ
ಬಳಿಕ ಅರ್ಜಿಯನ್ನು ಪರೀಶಿಲಿಸಿ
ಪುರಸ್ಕರಿಸುವುದು ಅಥವಾ ಅನುಮತಿ ನೀಡದೆ
ತಿರಸ್ಕರಿಸುವ ಅಧಿಕಾರ ಪೊಲೀಸರಿಗೆ ಇರುತ್ತದೆ.
ಜೊತೆಗೆ ಪಾರ್ಟಿ
ಮಾಡುವ ಸ್ಥಳದ ನೆರೆ
ಹೊರೆಯವರಿಂದ NOC ಕೂಡಾ ಬೇಕಾಗುತ್ತದೆ.
15 ಕ್ಕಿಂತ
ಅಧಿಕ ಮಂದಿ ಒಂದೆಡೆ ಸೇರಿ
ಪಾರ್ಟಿ ಮಾಡುವುದಿರಲಿ ಅಥವಾ ಕಡಿಮೆ ಬಜೆಟ್
ನಲ್ಲಿ ಒಟ್ಟಿಗೆ ಕುಳಿತು ಮದ್ಯ
ಸೇವನೆ ಮಾಡುವುದಿರಲಿ ನಿಯಮ ಮೀರಿದರೆ ಕಠಿಣ
ಕ್ರಮ ಎದುರಿಸಬೇಕಾಗುತ್ತದೆ .ನಿಜವಾಗಿ ಪಾರ್ಟಿ ಆಯೋಜಿಸುವವರು ಕಾನೂನು ಪಾಲನೆ ಮಾಡುತ್ತಾರೆಯೆ? ಈಗೀಗ ಅನುಮತಿ
ರಹಿತ ಮದ್ಯ ಪಾರ್ಟಿಗಳಲ್ಲಿ ಹಲವು ಯುವಕರು
ಹಾಗೂ ಯುವತಿಯರು ಭಾಗವಹಿಸುತ್ತಿರುವುದು
ಆತಂಕದ ವಿಷಯ. ಅದರಲ್ಲೂ ಕಾಲೇಜು ಓದುವ ಮಕ್ಕಳ ಸಂಖ್ಯೆಯೂ ಹೆಚ್ಚಿದೆ ಎನ್ನುವ ಸತ್ಯ ಸಂಗತಿಯನ್ನು ಬಹುತೇಕರು ನಂಬುವುದಿಲ್ಲ. ಸಮಸ್ಯೆಗಳು ಆದಾಗ
ಮಾತ್ರ ಇಲಾಖೆ
ಮತ್ತು ಜನರು ಎಚ್ಚೆತ್ತುಕೊಳ್ಳುತ್ತಾರೆ.
ಯುವ ಸಮುದಾಯಕ್ಕೆ ಪಾರ್ಟಿಗೆ ಹೋಗಬೇಡಿ ಎಂದು ಉಪದೇಶಿಸಲಾಗದು.ಯಾಕೆಂದರೆ "ಈ ದುಡ್ಡು ಕೊರ್ಪಾನ " ಅಥವಾ "ಈ ಪಾರ್ಟಿ ಕೊರ್ಪನಾ" ಎಂದು ಸಾಮೂಹಿಕ ಉತ್ತರ ಸಿಗುತ್ತದೆ. ಕುಡಿಯುವುದರಿಂದ ಮತ್ತು ಕೆಲವೊಮ್ಮೆ ಮದ್ಯ ಪಾರ್ಟಿಯಿಂದ ಆಗುವ ತೊಂದರೆಗಳ ಬಗ್ಗೆ ತಿಳಿ ಹೇಳುವ ಪ್ರಯತ್ನ ಮಾಡಬೇಕಷ್ಟೆ. ಮೊನ್ನೆಯ ಪಾರ್ಟಿಯಲ್ಲಿ ಒಂದು ಮಾಹಿತಿಯ ಪ್ರಕಾರ ಪಾರ್ಟಿಯಲ್ಲಿ ಮೀಸೆ ಚಿಗುರುವ ಯುವಕರ ಸಂಖ್ಯೆ ಯೇ ಹೆಚ್ಚಿತ್ತು . ಯಾವುದೇ ಪಾರ್ಟಿಗೆ ಹೆತ್ತವರು ಮಕ್ಕಳನ್ನು ರಾತ್ರಿ ಹೊತ್ತು ಕಳುಹಿಸುವುದೇ ಇಲ್ಲ. ಆಪ್ತ ಸ್ನೇಹಿತನ ಮನೆಯಲ್ಲಿ ಕಾರ್ಯಕ್ರಮವಿದೆ ಎಂದು ಸುಳ್ಳು ನೆಪ ಹೇಳಿದರೆ ಮಾತ್ರ ಮನೆಯಲ್ಲಿ ಹೊರಗಡೆ ಹೋಗಲು ಗ್ರೀನ್ ಸಿಗ್ನಲ್ ಸಿಗುತ್ತದೆ. ಬಹುತೇಕರು ಮನೆಯಲ್ಲಿ ಸುಳ್ಳು ಹೇಳಿಯೆ ಪಾರ್ಟಿಗಳಿಗೆ ಹಾಜರಾಗುತ್ತಾರೆ. ಮೋಜು ಮಸ್ತಿ ಮನಸ್ಸಿಗೆ ಖುಷಿ ಕೊಡುತ್ತದೆ ನಿಜ ಆದ್ರೆ ಅದು ಒಂದು ಕವಲು ದಾರಿಗೆ ಪ್ರೇರೇಪಿಸಲು ಸಾಧ್ಯವಿದೆ ಎಂಬುದನ್ನು ಮರೆಯಬಾರದು. ಪಾರ್ಟಿಗಳಲ್ಲಿ ಪಾಲ್ಗೊಂಡು ಆಗುವ ಅನಾಹುತಗಳನ್ನು ತಪ್ಪಿಸಬೇಕು .ಈ ಬಗ್ಗೆ ಹೆತ್ತವರೂ ಮಕ್ಕಳ ಬಗ್ಗೆ ಗಮನಹರಿಸಬೇಕು. ಒಮ್ಮೆ ನಿಜ ಹೇಳಿ ಪಾರ್ಟಿ ಮಾಡಿದ್ದು ನೀವೆನಾ?!
ಯುವ ಸಮುದಾಯಕ್ಕೆ ಪಾರ್ಟಿಗೆ ಹೋಗಬೇಡಿ ಎಂದು ಉಪದೇಶಿಸಲಾಗದು.ಯಾಕೆಂದರೆ "ಈ ದುಡ್ಡು ಕೊರ್ಪಾನ " ಅಥವಾ "ಈ ಪಾರ್ಟಿ ಕೊರ್ಪನಾ" ಎಂದು ಸಾಮೂಹಿಕ ಉತ್ತರ ಸಿಗುತ್ತದೆ. ಕುಡಿಯುವುದರಿಂದ ಮತ್ತು ಕೆಲವೊಮ್ಮೆ ಮದ್ಯ ಪಾರ್ಟಿಯಿಂದ ಆಗುವ ತೊಂದರೆಗಳ ಬಗ್ಗೆ ತಿಳಿ ಹೇಳುವ ಪ್ರಯತ್ನ ಮಾಡಬೇಕಷ್ಟೆ. ಮೊನ್ನೆಯ ಪಾರ್ಟಿಯಲ್ಲಿ ಒಂದು ಮಾಹಿತಿಯ ಪ್ರಕಾರ ಪಾರ್ಟಿಯಲ್ಲಿ ಮೀಸೆ ಚಿಗುರುವ ಯುವಕರ ಸಂಖ್ಯೆ ಯೇ ಹೆಚ್ಚಿತ್ತು . ಯಾವುದೇ ಪಾರ್ಟಿಗೆ ಹೆತ್ತವರು ಮಕ್ಕಳನ್ನು ರಾತ್ರಿ ಹೊತ್ತು ಕಳುಹಿಸುವುದೇ ಇಲ್ಲ. ಆಪ್ತ ಸ್ನೇಹಿತನ ಮನೆಯಲ್ಲಿ ಕಾರ್ಯಕ್ರಮವಿದೆ ಎಂದು ಸುಳ್ಳು ನೆಪ ಹೇಳಿದರೆ ಮಾತ್ರ ಮನೆಯಲ್ಲಿ ಹೊರಗಡೆ ಹೋಗಲು ಗ್ರೀನ್ ಸಿಗ್ನಲ್ ಸಿಗುತ್ತದೆ. ಬಹುತೇಕರು ಮನೆಯಲ್ಲಿ ಸುಳ್ಳು ಹೇಳಿಯೆ ಪಾರ್ಟಿಗಳಿಗೆ ಹಾಜರಾಗುತ್ತಾರೆ. ಮೋಜು ಮಸ್ತಿ ಮನಸ್ಸಿಗೆ ಖುಷಿ ಕೊಡುತ್ತದೆ ನಿಜ ಆದ್ರೆ ಅದು ಒಂದು ಕವಲು ದಾರಿಗೆ ಪ್ರೇರೇಪಿಸಲು ಸಾಧ್ಯವಿದೆ ಎಂಬುದನ್ನು ಮರೆಯಬಾರದು. ಪಾರ್ಟಿಗಳಲ್ಲಿ ಪಾಲ್ಗೊಂಡು ಆಗುವ ಅನಾಹುತಗಳನ್ನು ತಪ್ಪಿಸಬೇಕು .ಈ ಬಗ್ಗೆ ಹೆತ್ತವರೂ ಮಕ್ಕಳ ಬಗ್ಗೆ ಗಮನಹರಿಸಬೇಕು. ಒಮ್ಮೆ ನಿಜ ಹೇಳಿ ಪಾರ್ಟಿ ಮಾಡಿದ್ದು ನೀವೆನಾ?!