Friday, June 29, 2018
ಮಕ್ಕಳ ಬಾಯಲ್ಲಿ ನಿತ್ಯವೂ ಸ್ವಚ್ಛತಾ ಗೀತೆ
ದಕ್ಷಿಣ ಕನ್ನದ ಜಿಲ್ಲಾ
ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಆರ್. ರವಿ ಅವರು ಜಿಲ್ಲೆಯಲ್ಲಿ ಸ್ವತ್ಛತೆಯ ಅನುಷ್ಠಾನಕ್ಕಾಗಿ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳಲ್ಲಿ ಸ್ವತ್ಛತಾ ಜಾಗೃತಿಯೂ ಒಂದು. ಎಂ.ಆರ್. ರವಿ ರವರು ಸ್ವತ್ಛತೆ ಕುರಿತ ಹಾಡನ್ನೂ ಬರೆದಿದ್ದಾರೆ.
ಮಕ್ಕಳಿಂದಲೇ ಸ್ವತ್ಛತಾ ಜಾಗೃತಿಗಾಗಿ ಕವನ ರಚಿಸಿ, ಹಾಡಿಸುವ ಸೃಜನಾತ್ಮಕ ಮತ್ತು ರಚನಾತ್ಮಕ ಚಟುವಟಿಕೆಯಾಗಿದೆ. ಇದೀಗ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಿಯಾಶೀಲರಾಗಿದ್ದಾರೆ. ಅಕ್ಟೋಬರ್ ನಿಂದಲೇ ಶಾಲೆಗಳಲ್ಲಿ ಸ್ವಚ್ಛತಾ ಚಟುವಟಿಕೆಯನ್ನು ಹಮ್ಮಿಕೊಳ್ಳಲಾಗಿದೆ.
.
ಶಿಕ್ಷಣ ಇಲಾಖೆ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಹಯೋಗದೊಂದಿಗೆ ವೇಳಾಪಟ್ಟಿ ತಯಾರಿಸಿ ಶಾಲೆಗಳಿಗೆ ನೀಡಲಾಗಿದ್ದು, ಅದರಂತೆ ಕಾರ್ಯಕ್ರಮ ಸಂಘಟಿಸಲಾಗುತ್ತಿದೆ. ಪ್ರತೀ ಶನಿವಾರದ ಒಂದು ಅವಧಿಯಲ್ಲಿ ಶಾಲೆಗಳಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ವೇಳಾಪಟ್ಟಿಗೆ ಅನುಸಾರವಾಗಿ ಈಗಾಗಲೇ ತರಗತಿವಾರು ಸ್ವಚ್ಛತಾ ಸ್ಪರ್ಧೆ, ಶಾಲಾ ಸ್ವಚ್ಛತಾ ನೀತಿ ರಚನೆ, ಸ್ವತ್ಛತಾ ಚಿತ್ರಕಲಾ ಸ್ಪರ್ಧೆ, ಹೆತ್ತವರಿಗೆ ಕಾರ್ಯಾಗಾರ, ಮನೆಯಿಂದ ಪ್ಲಾಸ್ಟಿಕ್ ಸಂಗ್ರಹಿಸಿ ಪಂಚಾಯತ್ಗೆ ನೀಡುವ ಕಾರ್ಯಕ್ರಮ, ಸ್ವಚ್ಛತೆಗೆ ಸಂಬಂಧಪಟ್ಟ ನಾಟಕ ಪ್ರದರ್ಶನ, ಕೊಲಾಜ್ ತಯಾರಿಕೆ ಇತ್ಯಾದಿ ಚಾಲ್ತಿಯಲ್ಲಿದೆ. ಮುಂದಿನ ದಿನಗಳಲ್ಲಿ ಪರಿಸರ ಹಾಡು, ಕಸದಿಂದ ರಸ ಕಾರ್ಯಾಗಾರ, ಸ್ವಚ್ಛತಾ ಜಾಥಾ, ಮಳೆ ನೀರು ಕೊಯ್ಲು, ಸ್ವಚ್ಛತೆಯ ಬಗ್ಗೆ ಕವನ ರಚನೆ, ಪ್ರಬಂಧ ಸ್ಪರ್ಧೆ, ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಗ್ರಾಮದ ಸ್ವತ್ಛತೆ ಸಮೀಕ್ಷೆ ಹಾಗೂ ಗ್ರಾ.ಪಂ.ಗಳಲ್ಲಿ ಕಾರ್ಯಕ್ರಮ, ಸೌಲಭ್ಯಗಳ ಬಗ್ಗೆ ತಿಳಿಯಲು ಪಂಚಾಯತ್ಗೆ ಭೇಟಿ ಇತ್ಯಾದಿ ನಡೆಯುತ್ತಿದೆ.
Thursday, June 21, 2018
ಮಳೆಗಾಲದ “ಉಬೇರ್ ಮೀನ್” ಬೇಟೆ: ಮುಗುಡು ಮೀನು ಕೈವಶ!
ಮುಂಗಾರು ಮಳೆ ಚುರುಕುಗೊಂಡಾಗ ಗ್ರಾಮೀಣ ಭಾಗದಲ್ಲಿ ಮೀನು ಬೇಟೆ ಶುರುವಾಗುತ್ತದೆ. ಮಳೆ ಬಂದು ಬಿಟ್ಟಾಗ ಗದ್ದೆ,
ತೋಡುಗಳಲ್ಲಿ ಮೀನು ಹುಡುಕಿಕೊಂಡು ಹೋಗುತ್ತಾರೆ. ನಡುರಾತ್ರಿ ಅಥವಾ ಕೋಳಿ ಕೂಗುವ ಹೊತ್ತಲ್ಲಿಯೂ ಹೋಗುವುದುಂಟು.
ಹರಿಯುವ ನೀರಿನಲ್ಲಿ ಮೀನು ಹಿಡಿಯುವುದೆಂದರೆ ರೋಮಾಂಚನಕಾರಿಯೂ ಹೌದು. ಇನ್ನು ಕೆಂಪು ಮಿಶ್ರಿತ ನೀರು ಬಂದಲ್ಲಿ ಸಣ್ಣ ಹೊಳೆ ಅಥವಾ
ತೋಡಿನಲ್ಲಿ ಬಲೆ ಹಿಡಿಯುತ್ತಾರೆ ಕೂಡ.
ನದಿಭಾಗದಿಂದ ಮೀನುಗಳು ಬಯಲು ಪ್ರದೇಶಕ್ಕೆ ಹಿಂಡು ಹಿಂಡಾಗಿ
ಬರುತ್ತವೆ. ಇದೊಂದು ಗ್ರಾಮೀಣ ಪ್ರದೇಶದ ಜನರ ಹವ್ಯಾಸವಾಗಿದ್ದು, ನಮ್ಮಲ್ಲಿ “ಉಬೇರ್ ಮೀನು ಪತ್ತುನ” ಎಂದು ಕರೆಯುತ್ತಾರೆ.
ಹಿಂದೆ ದೀಪದ ದೊಂದಿ, ತೆಂಗಿನ ಗರಿಯಿಂದ ಮಾಡಿದ ತೂಟೆ ಇವುಗಳನ್ನು ಬಳಸಿ ಮೀನು ಹಿಡಿಯಲು ರಾತ್ರಿ
ಸಂಚರಿಸಿದರೆ, ಈಗ ಆಧುನಿಕವಾಗಿ ಈಗ ಹೆಚ್ಚು ಪ್ರಕಾಶಮಾನವಾದ ಬ್ಯಾಟರಿ ಚಾಲಿತ ಲೈಟ್ ಗಳನ್ನು ಬಳಸಿ
ಮೀನುಬೇಟೆಗೆ ತೆರಳುತ್ತಾರೆ .ಈ ಮೀನು ಬೇಟೆಯಲ್ಲಿ
ನಾನು ಪರಿಣತಿ ಪಡೆಯದಿದ್ದರೂ ಒಡನಾಟವಿದೆ.ನಮ್ಮ ಮನೆ ಸಮೀಪವೆಲ್ಲ ಗದ್ದೆ, ತೋಡುಗಳಿವೆ. ನಾನು ಪ್ರಾಥಮಿಕ
ಶಾಲೆಗೆ ಹೋಗುತ್ತಿದ್ದಾಗ ನನ್ನ ತಂದೆ ಮೀನು ಹಾಕುವ
ಚೀಲ ಹಿಡಿಯಲು ಕರೆದುಕೊಂಡು ಹೋದದ್ದು ನೆನಪಿಗೆ ಬರುತ್ತಿದೆ. ನನಗೆ ರಾತ್ರಿ ಕತ್ತಲೆಯಲ್ಲಿ ತೆರಲು
ತುಂಬಾ ಭಯ ಪಡುತ್ತಿದ್ದೆ. ನನ್ನ ತಂದೆ ವೃತ್ತಿಯಲ್ಲಿ ಪರಿಣತ ಗಾರೆ ಕೆಲಸದವರಾದರೂ ಹವ್ಯಾಸವಾಗಿ ಮೀನು
ಹಿಡಿಯುವ ಕೂರಿ, ಪೂಡಾಯಿ ಇವುಗಳನ್ನು ತಯಾರಿಸಿ ಮೀನು ಹಿಡಿಯಲು ಹೋಗುತ್ತಿದ್ದರು
ರಾತ್ರಿ ತುಂತುರು ಮಳೆಯಲ್ಲಿ ಮಿನುಗಳ ವಲಸೆ ಜಾಸ್ತಿ ಎಂಬುದು ಎಲ್ಲರಿಗೆ
ಗೊತ್ತ್ರುವ ಸಂಗತಿ. ಮೊನ್ನೆ ನಾನು ನನ್ನ ಕುಟುಂಬದ ಸ್ನೇಹಿತರು ಸೇರಿ ರಾತ್ರಿ
ಮೀನು ಬೇಟೆಗಾಗಿ ಹೋದೆವು. ನಾನು ಬರೇ ಎರಡು ಮೀನು ಬೇಟೆಯಾಡಿದೆ. , ಮುಳ್ಳುಬಾಳೆ, ಮುಗುಡು , ಕೀಜನ್, ಚೀರ್ಕಟೆ , ಏಡಿ ಹೀಗೆ ವೈವಿಧ್ಯಮಯ ಜಾತಿಯ ಮೀನುಗಳು ಕಾಣಸಿಕ್ಕರೂ
ಎರಡು ಮುಗುಡು ಹಿಡಿಯುವಲ್ಲಿ ಸಫಲನಾದೆ!
ನೀರಿನೊಳಗೆ ಮೀನಿನ ಸಂಚಾರ ಗೋಚರಿಸಿದ ಕೋಡಲೇ ಹರಿತವಾದ
ಉದ್ದನೆಯ ಕತ್ತಿಯಲ್ಲಿ ಕಡಿದೆ
.ಹಲವು
ಪ್ರಯತ್ನಗಳ ಬಳಿಕ ಮೀನು ಕೈವಶವಾಯಿತು.
ಸಣ್ಣ ಪುಟ್ಟ ಮೀನುಗಳಿಂದ ಹಿಡಿದು ದೊಡ್ಡ ದೊಡ್ಡ ಗಾತ್ರದ ಮೀನುಗಳೂ ಸಿಗುವುದುಂಡು ಆದ್ರೆ
ಅದಕ್ಕೆ ತಾಳ್ಮೆ ಮತ್ತು ಸಮಯ ಬೇಕು. ರಾತ್ರಿ ಮೀನು ಬೇಟೆಯ ಸಮಯದಲ್ಲಿ ಹಾವುಗಳೂ ಇರುವ
ಸಾಧ್ಯತೆಯಿದ್ದು, ಎಚ್ಚರಿಕೆಯೂ ಅಗತ್ಯ.ಈ ಮಳೆಗಾಲದಲ್ಲಿ ಮೀನು ಬೇಟೆ ಒಂದು ಹೊಸ ಅನುಭವೇ ಸರಿ
Friday, June 15, 2018
ಮನೆ ಹತ್ತಿರದ ಸಾಹೇಬರೂ ಮತ್ತು ಮೊದಲು ಸವಿದ ಮಟನ್ ಬಿರಿಯಾನಿಯೂ!
"ನಮ್ಮ ಮನೆಯಲ್ಲಿಯೂ ತೊಂದರೆಗಳು ಆದಾಗ ಸಾಹೇಬರ ಮೂಲಕ ಕೋಡಿಂಬಾಳದ ಮಸೀದಿಗೆ ಹರಕೆ ರೂಪದಲ್ಲಿ
ಚಿಲ್ಲರೆ ಹಣ ನೀಡುತ್ತಿದ್ದೆವು. ಸಾಹೇಬರೂ ಮತ್ತು ಅವರ ಕುಟುಂಬದವರು ನಮ್ಮ ಕುಟುಂಬದಲ್ಲಿ ಆಚರಿಸುತ್ತಿದ್ದ
ಪತ್ತನಾಜೆಯ ಸಮಯದಲ್ಲಿ ಗುಳಿಗ ದೈವಕ್ಕೆ ಹಣ್ಣು ಕಾಯಿ ಮತ್ತು ಹರಕೆ ನೀಡುತ್ತಿದ್ದರು"-ವಿ.ಕೆ ಕಡಬ
ಇಂದು ನಾಡಿನೆಲ್ಲೆಡೆ ಈದು ಉಲ್ ಪಿತರ್ ಹಬ್ಬವನ್ನು ಮುಸ್ಲಿಂ ಬಾಂಧವರು ಸಂಭ್ರಮದಿಂದ ಆಚರಿಸುತ್ತಿರುವುದು ಗೊತ್ತಿರುವ ವಿಚಾರ.
ಈ ಪೆರ್ನಾಲ್ ಹಬ್ಬ ಬಂದಾಗಲೆಲ್ಲ ನನ್ನ ಮನೆ ಸಮೀಪದ ಸಾಹೇಬರು ನನಗೆ ಆಗಾಗ ನೆನಪಾಗುತ್ತಿದೆ.
ನಮ್ಮ ಮನೆಯಿಂದ ಕೂಗಳತೆಯ ದೂರಲ್ಲಿದ್ದ(ಹೆಸರು ಸೂಚಿಸುವುದಿಲ್ಲ) ಅವರ ಮನೆ ಸಮೀಪದಿಂದಲೇ ಶಾಲೆಗೆ ಹೋಗುತ್ತಿದ್ದೆವು. ನಾನಾಗ
ಪ್ರಾಥಮಿಕ ಶಾಲೆಯಲ್ಲಿ ಎರಡನೆ ತರಗತಿಯೋ ಅಥವಾ ಮೂರನೆ ತರಗತಿಯೋ ತಿಳಿಯದು. ಅಂತು ಶಾಲೆಗೆ ಹೋಗುತ್ತಿರುವುದು
ಚೆನ್ನಾಗಿ ನೆನಪಿದೆ. ಸಾಹೇಬರ ಹೆಂಡತಿ ಮತ್ತು ನನ್ನ ದೊಡ್ಡಮ್ಮ ಸ್ನೇಹಿತರು. ನನ್ನ
ದೊಡ್ಡಮ್ಮ ಮತ್ತು ಸಾಹೇಬರ ಹೆಂಡತಿ ಚಿಮಿನಿ ದೀಪದ
ಬೆಳಕಿನಲ್ಲಿ ಬೀಡಿಕಟ್ಟಿದವರು.ಸಾಹೇಬರು ಬೀಡಿಯನ್ನು ಬ್ರಾಂಚ್ ಗೆ ತಗೊಂಡು ಹೋಗುತ್ತಿದ್ದರು. ದಿನ
ಬಳಕೆಯ ವಸ್ತುಗಳಾದ ಸಕ್ಕರೆ, ಚಾಹ ಹುಡಿ, ಕೆಂಪು ಮೆಣಸು,
ಉಪ್ಪು ಕೂಡ ಒಂದು ಮನೆಯಿಂದ ಇನ್ನೊಂದು ಮನೆಗೆ ರವಾನೆಯಾಗುತ್ತಿದ್ದದನ್ನು
ಆಗ ಕಣ್ಣರೆ ಕಂಡಿದ್ದೇನೆ. ಸಾಹೇಬರ ಮನೆಯಲ್ಲಿ ಒಂದು
ದಿನವೂ ಚಹಾ ತಪ್ಪಿದಲ್ಲ. ಸಾಯಂಕಾಲ ಸಾಹೇಬರ ಹೆಂಡತಿ ದೊಡ್ಡಮ್ಮನ ಮನೆಯಲ್ಲಿ ಅಥವಾ ದೊಡ್ಡಮ ಅವರ ಮನೆಯಲ್ಲಿ
ಸಾಯಂಕಾಲದ ಚಹಾಕ್ಕೆ ಪಕ್ಕಾ ಹಾಜರ್!
ಒಮ್ಮೆ ಪೆರ್ನಾಲ್ ಹಬ್ಬ ದ ಸಮಯ ಸಾಹೇಬರ ಮನೆಗೆ ಮದ್ಯಾಹ್ನ ಊಟಕ್ಕೆ ಬರುವಂತೆ
ದೊಡ್ಡಮ್ಮನಲ್ಲಿ ಹೇಳಿದ್ದರು. ಶಾಲೆಗೆ ಆ ದಿನ ರಜೆ ಇದ್ದಕಾರಣ ದೊಡ್ಡಮ್ಮ ನಮ್ಮನೂ ಕರೆದುಕೊಂಡು ಹೋದರು.
ಮಟನ್ ಬಿರಿಯಾನಿ ಎಂದು ಹೇಳಿ ಎಲ್ಲರಿಗೂ ಕೊಟ್ಟರು.
ನನಗೂ ತಟ್ಟೆಯಲ್ಲಿ ಬಡಿಸಿಕೊಟ್ಟಿದ್ದರು. ಆ ಸಮಯದಲ್ಲಿ
ಮಟನ್ ಎಂದರೆ ಏನೋ ಕಲ್ಪಿಸಿಕೊಂಡು ನನಗೆ ಬೇಡವೆಂದು ಹಠ ಹಿಡಿದಿದ್ದೆ. ಕೊನೆಗೆ ಸಾಹೇಬರು ಬಂದು ಅದು
ಆಡಿನ ಮಾಂಸವೆಂದು ತಿಳಿ ಹೇಳಿ ನನ್ನ ಜೊತೆ ಊಟಕ್ಕೆ ಕುಳಿತರು. ಇಲ್ಲೇ ನಾನು ಮೊದಲ ಬಾರಿಗೆ ಮಟನ್ ಬಿರಿಯಾನಿ
ಸವಿದದ್ದು!
ನಮ್ಮ ದೊಡ್ಡಮ್ಮ ಸೇರಿದಂತೆ ನಮ್ಮ ಮನೆಯಲ್ಲಿಯೂ ಆರೋಗ್ಯದಲ್ಲಿ ತೊಂದರೆಗಳು
ಆದಾಗ , ಕಷ್ಟ ಬಂದಾಗ ಸಾಹೇಬರ ಮೂಲಕ ಕೋಡಿಂಬಾಳದ ಮಸೀದಿಗೆ
ಹರಕೆ ರೂಪದಲ್ಲಿ ಚಿಲ್ಲರೆ ಹಣ ನೀಡುತ್ತಿದ್ದೆವು. ಸಾಹೇಬರೂ ಮತ್ತು ಅವರ ಕುಟುಂಬದವರು ನಮ್ಮ ಕುಟುಂಬದಲ್ಲಿ
ಆಚರಿಸುತ್ತಿದ್ದ ಪತ್ತನಾಜೆಯ ಸಮಯದಲ್ಲಿ ಗುಳಿಗ ದೈವಕ್ಕೆ ಹಣ್ಣು ಕಾಯಿ ಮತ್ತು ಹರಕೆ ನೀಡುತ್ತಿದ್ದರು. ಇದೊಂದು ಜಾತೀಮೀರಿದ ಸಂಬಂಧ. ಇನ್ನೂ ವ್ಯಾಖ್ಯಾನಿಸಬಹುದಾದರೆ ಮಾನವ ಪ್ರೀತಿ ಎಂಬುದಷ್ಟೆ ಹೇಳಬಲ್ಲೆ. ಕಾಲ ಕ್ರಮೇಣ ಅವರು ಜಾಗ ಮಾರಿ ಇನ್ನೊಂದು ಊರಿಗೆ ಹೋಗಿದ್ದಾರೆ. ಸಾಹೇಬರು ನಮ್ಮಿಂದ ದೂರವಾದರೂ ಅವರ ಪ್ರೀತಿ, ಮತ್ತು ಸೌಹಾರ್ದ ಬದಕು ಇಂದಿಗೂ ಜೀವಂತ. ಈಗಲೂ ಅವರ ಮಕ್ಕಳು ಸಿಕ್ಕಾಗೆಲ್ಲ ಪರಸ್ಪರ ಮಾತನಾಡುತ್ತೇವೆ.
ನಮಸ್ಕಾರ-ವಿ.ಕೆ ಕಡಬ
Thursday, June 07, 2018
ಲೋಕಲ್ ಬಸ್ಸು, ಎಕ್ಸ್ ಪ್ರೆಸ್ ಟಿಕೆಟು!
ಕಳೆದ
ಸೋಮವಾರ
ಕಡಬದಿಂದ
ಮುಂಜಾನೆ
ಮಂಗಳೂರಿಗೆ
ಬರಬೇಕಿತ್ತು.
ಮೊದಲ
ಸಾಮಾನ್ಯ
ಬಸ್ಸು6:10ರ ಸುಮಾರಿಗೆ ಹೋಗುತ್ತದೆ. ಆ ಬಳಿಕ 6:30 ರದ್ದು ಎಕ್ಸ್ ಪ್ರೆಸ್ ಬಸ್ಸು.ಇವೆರಡೂ ಬಸ್ಸುಗಳು ಹೋದ ಬಳಿಕ ನಾನು ಕಡಬ ಬಸ್ ನಿಲ್ದಾಣಕ್ಕೆ ಬಂದಿದ್ದೆ.
ಇನ್ನೊಂದು
ಬಸ್ಸು
ಬರುತ್ತೆ
ಎಂದು
ಪರಿಚಿತ
ಅಂಗಡಿ
ಮಾಲಕರು
ಹೇಳಿದರು
.ಸುಮಾರು
6:45ರ
ಸುಮಾರಿಗೆ
ಗ್ರಾಮೀಣ
ಸಾರಿಗೆ
ಬಸ್ಸು
ಬಂತು.
ಲೋಕಲ್
ಬಸ್
ಆದಕಾರಣ
ಮಂಗಳೂರು
ತಲುಪಲು
ಹೆಚ್ಚು
ಸಮಯ
ತೆಗೆದುಕೊಳ್ಳುತ್ತದೆ
ಹಾಗಾಗಿ
ಉಪ್ಪಿನಂಗಡಿಗೆ
ಟಿಕೆಟ್
ಮಾಡಿದೆ.
ಟಿಕೆಟ್
ನೋಡಿದ
ಬಳಿಕ
ದಿನ
28 ರೂ
ಇದ್ದದ್ದು
33 ಆಗಿದ್ದು
ಆಶ್ಚರ್ಯದಿಂದಲೇ
ಕಂಡಕ್ಟರ್
ಬಳಿ
ಕೇಳಿದೆ
. ಸರ್...
ಟಿಕೇಟು
ಸರಿ
ನೋಡಿ
ಇದು
ಎಕ್ಸ್
ಪ್ರೆಸ್
ಬಸ್!
x
ನಮ್ಮೂರಿನಲ್ಲಿ ದಿನ ಪೂರ್ತಿ ಧಾರಕಾರ ಮಳೆ ಸುರಿದರೂ ಭೂ ಕುಸಿತವಾಗುವುದಿಲ್ಲ ಆದರೂ ಮೊನ್ನೆ ಆಯಿತು!
ಮೊನ್ನೆ ಇದ್ದಕ್ಕಿಂದಂತೆ ಕಡಬ ಸಮೀಪದ ಹೊಸ್ಮಠ ಸೇತುವೆಯ ಪಕ್ಕ ರಸ್ತೆ ಕುಸಿತವಾಯಿತು. ಬಹು ವರ್ಷಗಳಿಂದ ಸಮರ್ಪಕವಾಗಿದ್ದ ಈ ರಸ್ತೆ ಕುಸಿಯಲು ಕಾರಣವೇನೆಂದರೆ
ಹೊಸ ಸೇತುವೆ ನಿರ್ಮಾಣದ ಸಮಯದಲ್ಲಿ ಪಕ್ಕದಲ್ಲಿ ನದಿಗೆ ಸೇರುತ್ತಿದ್ದ ಕಾಲುವೆಯನ್ನು
ಮುಚ್ಚಿದ್ದು. ಮಳೆ ಬಂದಾಗ ಕಾಲುವೆಯ ನೀರು ತನ್ನ ದಿಕ್ಕಿನಲ್ಲಿ ಹರಿಯಲು ಮುಂದಾಗಿ ರಸ್ತೆಯನ್ನು ಕೊಚ್ಚಿಕೊಂಡು
ಹೋಗಿತ್ತು.
ನಮ್ಮೂರಿನಲ್ಲಿ ಹೊಸದಾಗಿ ಮಾಡಿರುವ ರಸ್ತೆ, ಜೆಸಿಬಿ ಮೂಲಕ ಸಮತಟ್ಟು ಮಾಡಿದ ಜಾಗ, ರೈಲ್ವೇ ಮಾರ್ಗದಲ್ಲಿ ಜೆಸಿಬಿ ತೆಗೆದ ಬರೆ ಇವುಗಳು ಮಾತ್ರ ಮಳೆಗಾಲದ ಸಮಯದಲ್ಲಿ ಜರಿದು ಬಿದ್ದ ಉದಾಹರಣೆಗಳಿವೆ ಹೊರತು ಕೃತಕ ನೆರೆಯಿಂದ ಯಾವುದೇ ಹಾನಿಯಾವುದಿಲ್ಲ. ಅದಕ್ಕೆ ಕಾರಣ ನಮ್ಮಲ್ಲಿ ನೀರು ಬಸಿದು ಹೋಗಲು ಸೂಕ್ತವಾದ ಮತ್ತು ನೈಸರ್ಗಿಕವಾದ ತೋಡುಗಳಿವೆ
ನಮ್ಮ ವ್ಯಾಪ್ತಿಯಲ್ಲಿ ಗದ್ದೆ ತೋಟಗಳಲ್ಲಿ ಮಣ್ಣು ಹಾಕಿ ಮನೆ ,ಕಟ್ಟಡ ಕಟ್ಟಿದವರು ಇಲ್ಲವೇ ಇಲ್ಲ. ಆದರೂ ಇತ್ತೀಚಿಗಿನ ದಿನಗಳಲ್ಲಿ ನಗರವಾಗಿ ಬೆಳೆಯುತ್ತಿರುವ ಕಡಬದಲ್ಲಿ ಗದ್ದೆಗಳಿಗೆ ಮಣ್ಣು ಬೀಳುತ್ತಿದೆ ಕೆಲವು ಕಡೆಗಳಲ್ಲಿ ಕಟ್ಟಡಗಳು ನಿರ್ಮಾಣವಾಗುತ್ತಿದೆ.
ನಮ್ಮ ವ್ಯಾಪ್ತಿಯಲ್ಲಿ ಗದ್ದೆ ತೋಟಗಳಲ್ಲಿ ಮಣ್ಣು ಹಾಕಿ ಮನೆ ,ಕಟ್ಟಡ ಕಟ್ಟಿದವರು ಇಲ್ಲವೇ ಇಲ್ಲ. ಆದರೂ ಇತ್ತೀಚಿಗಿನ ದಿನಗಳಲ್ಲಿ ನಗರವಾಗಿ ಬೆಳೆಯುತ್ತಿರುವ ಕಡಬದಲ್ಲಿ ಗದ್ದೆಗಳಿಗೆ ಮಣ್ಣು ಬೀಳುತ್ತಿದೆ ಕೆಲವು ಕಡೆಗಳಲ್ಲಿ ಕಟ್ಟಡಗಳು ನಿರ್ಮಾಣವಾಗುತ್ತಿದೆ.
ನನ್ನದು ಕಡಬ ಊರು.ಗ್ರಾಮೀಣ ಭಾಗವೆಂದೇ ಗುರುತಿಸಲ್ಪಟ್ಟ ಕಡಬದಿಂದ ಮೂರು ಕಿ.ಮೀ ದೂರದಲ್ಲಿರುವ ಕೋಡಿಂಬಾಳ ಗ್ರಾಮದಲ್ಲಿ ನನ್ನ ಮನೆ.ಕಡಬ ವ್ಯಾಪ್ತಿಯಲ್ಲಿ ಪಂಜ ಅರಣ್ಯ ವಲಯದ ವ್ಯಾಪ್ತಿಗೆ ಒಳಪಟ್ಟ ಕಾಡುಗಳಿವೆ. ಕುಮಾರ ಪರ್ವತದ ತಪ್ಪಲಿನ ವ್ಯಾಪ್ತಿಯಲ್ಲಿರುವ ನನ್ನೂರಿನಲ್ಲಿ ದಿನದ 24 ಗಂಟೆಯೂ ಬಿಡದೆ ಮಳೆ ಸುರಿದ ನಿದರ್ಶನಗಳಿವೆ. ಒಮ್ಮೆಯೂ ನಿರು ಉಕ್ಕಿ ಪ್ರಾಣ ಹಾನಿ,ಆಸ್ತಿ ಹಾನಿ ಸಂಭವಿಸಿಲ್ಲ.ಅಲ್ಲದೆ ಎಲ್ಲೂ ಭೂ ಕುಸಿತ ಉಂಟಾಗುವುದಿಲ್ಲ.ತೋಟದಲ್ಲಿನ ಕಸ ಕಡ್ಡಿಗಳನ್ನು ಕೊಚ್ಚಿಕೊಂಡು ಹೋಗಿದ್ದು ಇದೆ.
ಮೊನ್ನೆ ಮಂಗಳೂರಿನಲ್ಲಿ ಸುರಿದ ಒಂದು ದಿನದ ಮಳೆಗೆ ನಗರವೂ ಸೇರಿದಂತೆ ಬಹುತೇಕ ಕಡೆಗಳಲ್ಲಿ ಭೂ ಕುಸಿತ ಉಂಟಾಗಿದೆ. ಮಾರ್ಗದ ಬದಿಯಲ್ಲಿದ್ದ ಇಂಟರ್ ಲಾಕ್ ಅಪ್ಪಚ್ಚಿಯಾಗಿದೆ. ಅನೇಕ ಮನೆಯೊಳಗೆ ನೀರು ನುಗ್ಗಿದೆ. ನೀರು ಹರಿವ ಜಾಗವನ್ನು ಆಕ್ರಮಿಸಿ ಏನೇ ಮಾಡಿದರೂ ಅದು ನೀರಿನ ಜೊತೆ ವಿಲೀನವಾಗುವುದರಲ್ಲಿ ಎರಡು ಮಾತಿಲ್ಲ. ಮಳೆ ನೀರು ತನ್ನ ನೈಜವಾದ ದಾರಿಯಲ್ಲಿ ಸಾಗಲು ಮುಂದಾಗಿದೆ ಅಲ್ಲವೇ?
Subscribe to:
Posts (Atom)