Saturday, September 22, 2018

ತರ್ಜುಮೆಯಲ್ಲಿ ಜೀವ ಕಳೆದುಕೊಳ್ಳುತ್ತಿರುವ ಕನ್ನಡ ಶಬ್ದಗಳು: ಇಲ್ಲಿ ಮೂತ್ರ ತೇರ್ಗಡೆ ಹೊಂದಿಲ್ಲ!


ಪ್ರತಿ ವರ್ಷವೂ ಸರಕಾರ ನವೆಂಬರ್ ಮೊದಲ ದಿನ ರಾಜೋತ್ಸವವನ್ನು ವಿಜ್ರಂಭಣೆಯಿಂದ  ಆಚರಣೆ  ಮಾಡುವುದಲ್ಲದೆ  ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತ ಬರುತ್ತಿದೆ.  ಆದರೆ ರಾಜ್ಯದ ಕೆಲ ಗಡಿಭಾಗದಲ್ಲಿ ಕನ್ನಡ ಭಾಷೆ ಕಡ್ಡಾಯ ಮಾಡಿದ್ದರೂ ಪ್ರಯೋಜನಕಾರಿಯಾಗದಿರುವುದು ಸಮಸ್ತ ಕನ್ನಡಿಗರಿಗೆ ಗೊತ್ತಿರುವ ಸಂಗತಿ. ಇಂತಹ ಜಾಗಗಳಲ್ಲಿ  ಅಲ್ಪಸ್ವಲ್ಪ ಕನ್ನಡ ಭಾಷೆ ಮಾತನಾಡುವವರು ನಮಗೆ ಕಾಣ ಸಿಗುತ್ತಾರೆ.  ಅಲ್ಲದೆ ಅಪರೂಪದ ನಾಮಫಲಕಗಳು ಕೂಡ ಕಾಣಸಿಗುವುದುಂಟು.  ಆದರೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ  ತಪ್ಪು ಸಂದೇಶ ನೀಡುವ ನಾಮಫಲಕಗಳು ಕಂಡು ಬರುತ್ತಿರುವುದು ನಮ್ಮ ದುರ್ದೈವಾಗಿದೆ.

ಮುಖ್ಯವಾಗಿ ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಬದಿಯಲ್ಲಿ ಬರೆಸಲಾಗಿರುವ ನಾಮಫಲಕಗಳನ್ನು  ಜನಸಾಮಾನ್ಯರೂ ಗಮನಿಸುತ್ತಾರೆ.   ಈ ಇಲಾಖೆಯ ಬರವಣಿಗೆಯಲ್ಲಿ   ಅಲ್ಲಲ್ಲಿ ಕನ್ನಡ ಭಾಷೆಯನ್ನು ಅಪಭ್ರಂಶಗೊಳಿಸುವ ಉದಾಹರಣೆಗಳು ನಮಗೆ ಕಾಣ ಸಿಗುತ್ತಲೇ ಇವೆ  ಇದಕ್ಕೊಂದು ಸೇರ್ಪಡೆ ಈ ರಸ್ತೆ Do not pass urine ಎಂಬ ಶಬ್ದವನ್ನು ಇಲ್ಲಿ ಮೂತ್ರ ತೇರ್ಗಡೆ ಹೊಂದಿಲ್ಲ ಎಂದು  ಬಿ ಬಿ ಎಂ ಪಿ ಕನ್ನಡಕ್ಕೆ ತರ್ಜುಮೆ ಮಾಡಿರುವುದು. ಇದು ಒಂದು ಉದಾಹರಣೆಯಷ್ಟೆ.


ಬೆಂಗಳೂರಿನಲ್ಲಿ ಮಾತ್ರ ಅಲ್ಲ ಇತ್ತ ಮಂಗಳೂರಿನಿಂದ ಕಾಸರಗೋಡಿಗೆ ಸಾಗುವ ದಾರಿಯಲ್ಲಿ ತಲಪಾಡಿ ಕಳೆದರೆ ಕನ್ನಡವನ್ನು ಅಪ್ಪಚ್ಚಿ ಮಾಡಿರುವುದು ಕಾಣಬಹುದು.  ರಾಜಧಾನಿಯಲ್ಲಿ ಕನ್ನಡ ಕಗ್ಗೊಲೆ  ಹಲವು ರೀತಿಯಲ್ಲಿ ಆಗುತ್ತಿದೆ . ಪ್ರಮುಖವಾಗಿ ಕಂಡು ಬರುವುದು ವಿವಿಧ  ಬಡಾವಣೆಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ಮತ್ತು  ಬಿಎಂಟಿಸಿ ಬಸ್‌ಗಳಿಗೆ ಅಳವಡಿಸಿರುವ ನಾಮ ಫಲಕಗಳಲ್ಲಿ.  ಈ ಮುದ್ರಾರಾಕ್ಷಸನ ಹಾವಳಿಗೆ ಹಲವು ತಪ್ಪುಗಳು ಇರುವುದರಿಂದ  ಈ ನಾಮಫಲಕಗಳು ಜನರಿಗೆ ತಪ್ಪು ಮಾಹಿತಿ ನೀಡುತ್ತವೆ .
ನಾನೊಮ್ಮೆ ಬೆಂಗಳೂರಿಗೆ ಹೋಗಿ  ಎಮ್.ಜಿ ರಸ್ತೆಯಲ್ಲಿ ಬಿ.ಎಂ ಟಿ ಸಿ ಬಸ್ಸ್ ನಲ್ಲಿ ಪ್ರಯಾಣಿಸುವಾಗ  ಚಿನ್ನ ಸ್ವಾಮಿ ಕ್ರೀಡಾಂಗಣದ ಹೆಸರನ್ನು ಕಂಡೆ. chinnaswamy stadium ಎಂದು ಇಂಗ್ಲಿಷ್ ನಲ್ಲಿ ಸ್ಪಷ್ಟವಿದ್ದರೂ ಕನ್ನಡದಲ್ಲಿ ಮಾತ್ರ ಅದು ಚಿನ್ನಸ್ವಾಮಿ ಸ್ತೇಡಿಯಂ ಆಗಿತ್ತು!

ಇಂತಹ ವಿಚಾರಗಳ ಬಗ್ಗೆ ಲೇಖನ ಬರೆಯುವುದರಿಂದ ಸರಿಪಡಿಸಲು ಸಾಧ್ಯವಾಗದು ಇದಕ್ಕೊಂದು  ದೊಡ್ಡ ಮಟ್ಟದ ಆಂದೋಲನವೇ ಬೇಕೆಂದು ಅನಿಸುತ್ತದೆ. ಸರ್ಕಾರ ,ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜೊತೆ  ಪ್ರಾಧ್ಯಾಪಕ ವರ್ಗ,ಕನ್ನಡ ಅಭಿಮಾನಿಗಳು ಕೈಜೋಡಿಸಿದರೆ  ಉತ್ತಮ ಆದೀತೆ?

No comments:

Post a Comment