Showing posts with label ನಾ ಕಂಡದ್ದು. Show all posts
Showing posts with label ನಾ ಕಂಡದ್ದು. Show all posts

Wednesday, February 13, 2019

ನಾವು ಸಮಯ ನುಂಗದ, ಗಂಟೆಗಟ್ಟಲೆ ಕೊರೆಯದ ನಿರೂಪಕರು: ಬಾನುಲಿಯ ಬಾನಾಡಿಗಳು!


ಸಾಮಾನ್ಯವಾಗಿಆಡಿಯೋಎಂಬ ಶಬ್ದ ಹೆಚ್ಚು  ಬಳಕೆಯಾಗುವುದು ಮತ್ತು ಕೇಳಿ ಬರುವುದು ರೇಡಿಯೋ ಮಾಧ್ಯಮದ ಕಾರ್ಯಕ್ಷೇತ್ರದಲ್ಲಿ ಮಾತ್ರ .ಆದರೆ  ಪ್ರಸ್ತುತ ರಾಷ್ಟ್ರ ಮತ್ತು ರಾಜ್ಯ ರಾಜಕಾರಣದಲ್ಲಿ  ಆಡಿಯೋ ಸುದ್ದಿ ಜೋರಾಗಿ ಕೇಳಿ ಬರುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿ. ನಡುವೆ ವಿಶ್ವ ರೇಡಿಯೋ ದಿನ ಬಂದದ್ದು ಗೊತ್ತೇ ಆಗಿಲ್ಲ ನೋಡಿ!

ಸಾಮಾನ್ಯವಾಗಿ ರೇಡಿಯೋ ನಿರೂಪಕರು ಯಾವುದಾದರು  ಸಾರ್ವಜನಿಕ ಕಾರ್ಯಕ್ರಮಕ್ಕೆ ಹೋದಾಗ ಹಲವು ಜನ ಕುತೂಹಲದಿಂದ ಗಮನಿಸುವುದುಂಟು. ಸ್ವಲ್ಪ ಕಡಿಮೆ ಮಾತನಾಡಿ  ಎನ್ನುವವರೂ ಇದ್ದಾರೆ. ಒಂದು ಸಂತೋಷವೆಂದರೆ ನಾನು ಗಮನಿಸಿದ ಹಾಗೆ  ರೇಡಿಯೋ ಮಾಧ್ಯಮದಲ್ಲಿ ಕೆಲಸ ಮಾಡುವವರಿಗೆ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಭಾಷಣ ಮಾಡುವ ಅಥವಾ ಮಾತನಾಡುವ ಅವಕಾಶ ಸಿಕ್ಕಾಗ ಗಂಟೆಗಟ್ಟಲೆ ಕೊರೆಯುವುದಿಲ್ಲ, ಮತ್ತೊಬ್ಬರ ಸಮಯವನ್ನು ನುಂಗುವುದಿಲ್ಲ,  ವಿಷಯಾಂತರ ಮಾಡುವುದಿಲ್ಲ . ಇದಕ್ಕೆ ಒಂದು  ಕಾರಣವೂ ಇದೆ ಎನ್ನಬಹುದು. ಅದೇನೆಂದರೆ ನಾವು ನಮ್ಮ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ವಿಷಯ ಬರೆಯುವಾಗ ಹೆಚ್ಚಾದಾರೆ ಕತ್ತರಿ ಪ್ರಯೋಗ ಮಾಡುತ್ತೇವೆ. ಕಡಿಮೆಯಾದರೆ ಪೂರಕ ವಿಷಯ ವಿವರಣೆಯೊಂದಿಗೆ ಸಮಯಕ್ಕೆ ಸರಿಯಾಗಿ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ. ಹಾಗಾಗಿ ಮಾತಿನಲ್ಲಿಯೂ ಹಿಡಿತ ಸಾಧಿಸಲು ಪ್ರಯತ್ನಿಸುತ್ತೇವೆ.

 ನಮ್ಮ ಪ್ರತಿಯೊಂದು ಕಾರ್ಯಕ್ರಮಗಳಿಗೆ ನಿರ್ದಿಷ್ಟ  ಸಮಯದ ಮಿತಿ ಇರುವುದರಿಂದ ಅಷ್ಟೇ ಸಮಯದೊಳಗೆ ಕಾರ್ಯಕ್ರಮ ಮುಗಿಸಬೇಕಾಗುತ್ತದೆ . ಗಣ್ಯ ವ್ಯಕ್ತಿ ಇರಲಿ ,ಸಾಮಾನ್ಯ ವ್ಯಕ್ತಿ ಇರಲಿ  ನೇರ ಪ್ರಸಾರ ಅಥವಾ ಧ್ವನಿ ಮುದ್ರಿತ ಪ್ರಸಾರದಲ್ಲಿ ಹಲವು ಬಾರಿ ಮಾತುಗಳಿಗೆ ಕತ್ತರಿ ಪ್ರಯೋಗವನ್ನು ಮಾಡುವ ಮೂಲಕ ನಿಗದಿತ ಸಮಯದೊಳಗೆ ಕಾರ್ಯಕ್ರಮವನ್ನು ಬಿತ್ತರಿಸುತ್ತೆವೆ .




ಸಾಮಾಜಿಕ ಜಾಲತಾಣದಲ್ಲಿ ನಿರೂಪಕರಿಗೆ ಅಭಿಮಮಾನಿಗಳ ಬಳಗ!

 ರೇಡಿಯೋ ನಿರೂಪಕರೆಂದರೆ   ಒಂದು ಕಾಲಕ್ಕೆ ಧ್ವನಿಯಲ್ಲಿಯೇ ಪರಿಚಿತ ಹೊರತು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಿಲ್ಲ,ಜೊತೆಗೆ ಅಂತಹ ವ್ಯವಸ್ಥೆಗಳು ಸಕಾಲದಲ್ಲಿ ಇರಲಿಲ್ಲ. ಬದಲಾದ ಕಾಲಘಟ್ಟದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಯಿಂದ ರೇಡಿಯೋ ನಿರೂಪಕರು ಜನ ಸಾಮಾನ್ಯರಿಗೂ ಕಾಣಸಿಗುತ್ತಾರೆ.ಇಂದು ಫೇಸ್ ಬುಕ್ ನಲ್ಲಿ ಹಲವು ನಿರೂಪಕರು ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ.

ಇಡೀ ದಿನಾ ರೇಡಿಯೋದಲ್ಲಿ ಮಾತನಾಡುತ್ತಿರಾ?!

ರೇಡಿಯೋ ಕ್ಷೇತ್ರದ ಪರಿಚಯ ಇರುವ ಮತ್ತು ಅದರ ಬಗ್ಗೆ ತಿಳಿದಿರುವ ಹಾಗೂ ರೇಡಿಯೋ ಕೇಳುವ ಹವ್ಯಾಸ ಬೆಳೆಸಿಕೊಂಡಿರುವ , ಸದಾ ಒಟನಾಟ ಇರುವ ಜನರಿಗೆ ಇದರ ಸ್ಥೂಲ ಪರಿಚಯ ಇರುತ್ತದೆ.ಹಾಗಾಗಿ ನಮ್ಮ ಕೆಲಸ ಏನು ಎಂಬುದು ತಿಳಿದಿರುತ್ತಾರೆ. ಆದರೆ ಬಹುತೇಕರು ರೇಡಿಯೋ ಒಳಗೆ ಕೆಲಸ ಏನಿದೆ ಎಂದು ಕೇಳಿದರೆ, ಇನ್ನು ಕೆಲವರು ಇಡೀ ದಿನಾ ಮಾತನಾಡುತ್ತಿರಾ?  ಎಂದು ಕೇಳುವವರಿದ್ದಾರೆ.  ಮತ್ತೆ ಕೆಲವರು ರೇಡಿಯೋ ಕೇಳುವವರು ಈಗ ಇದ್ದಾರಾ? ಎಂದು ಪ್ರಶ್ನಿಸಿದರೆ ಮತ್ತೆ ಕೆಲವರು ಏನೆಲ್ಲ ಮಾತನಾಡುತ್ತಿರಾ ಎಂದು ಕೇಳುತ್ತಾರೆ. ಆದರೆ  ನಾವು ಪುಸ್ತಕಗಳನ್ನು ಓದುತ್ತೇವೆ, ಭಾಷಣಗಳನ್ನು ಕೇಳುತ್ತೇವೆ , ಕಾರ್ಯಕ್ರಮಕ್ಕೆ ತಯಾರಿ ಮಾಡುತ್ತೇವೆ, ನಮ್ಮದೇ ಕಾರ್ಯಕ್ರಮವನ್ನು ನಾವೇ ಕೇಳುತ್ತೇವೆ , ರೇಡಿಯೋ ನಿಲಯದ ಒಟ್ಟು ಕಾರ್ಯಕ್ರಮದ ರೂಪುರೇಷೆಯೊಳಗಿನ ಕೆಲಸಲ್ಲಿ ಭಾಗಿಯಾಗಿರುತ್ತೇವೆ ಎಂಬುದು ಹಲವರಿಗೆ ಗೊತ್ತೇ ಇಲ್ಲವೆಂದು ಅನಿಸುತ್ತದೆ.

ಅಪರಿಚಿತ ಕೇಳುಗರ ಜೊತೆ ಜಗಳ!
ಆಕಾಶವಾಣಿ ನನ್ನ ರೇಡಿಯೋ ಜೀವನದ ಮೊದಲ ಪಾಠ ಶಾಲೆ. ಬಳಿಕ ನಾನು ಮಂಗಳೂರಿನ  ರೇಡಿಯೋ ಸಾರಂಗ್ ನಲ್ಲಿ ಸುಮಾರು ಐದು ವರ್ಷ ಕೆಲಸ ಮಾಡಿಡಿದ್ದೆ. ಅಲ್ಲಿ  ತುಳು ಚಾವಡಿ,ಜನದನಿ, ಒಲವಿನಹಾಡು ಇತ್ಯಾದಿ ಜನ ಮೆಚ್ಚುಗೆಯ ಕಾರ್ಯಕಮ ನಡೆಸಿಕೊಟ್ಟಿದ್ದೆ. ಬಹುತೇಕ  ಕೆಳುಗರು ಸಾವಧಾನದಿಂದ ಆಲಿಸಿದರೆ, ಇನ್ನು ಕೆಲ ಕೇಳುಗರು ಕಿರಿಕ್ ಪಾರ್ಟಿಯಾಗಿದ್ದರು! ಲೈನ್ ಸಿಗದಕ್ಕೆ ಹಲವರು ಬೇಸರ ವ್ಯಕ್ತಪಡಿಸಿದರೆ ಇನ್ನು ಕೆಲವರು ನಮ್ಮ ಕರೆ ಮಾತ್ರ ಸ್ವೀಕರಿಸುವುದಿಲ್ಲ ಎಂಬ ವಾದವನ್ನು ಮಾಡಿದ್ದರು.. ಮಂಗಳೂರು ಸಮೀಪದ ಯುವತಿಯೊಬ್ಬರು  ಸುಮಾರು ಎರಡು ವರ್ಷದಷ್ಟು ನನ್ನ ನೇರ ಪ್ರಸಾರ ಕಾರ್ಯಕ್ರಗಳಿಗೆ ಅಡಚಣೆ ಮಾಡಿದ್ದು ಮರೆಯಲು ಅಸಾಧ್ಯ. ಅಪರಿಚಿತ ಕೇಳುಗರು ನಮ್ಮ ಮೇಲೆಯೇ ಸವಾರಿ ಮಾಡಿದಾಗ ನಾನು ಕೋಪಗೊಂಡದ್ದು ಮಾತ್ರವಲ್ಲದೆ ಜಗಳವೂ ಮಾಡಿದ್ದು ಇದೆ!

ಸದ್ಯ ಉಜಿರೆಯಲ್ಲಿ ಮತ್ತೆ ರೇಡಿಯೋ ಜೀವನ ಮುಂದುವರಿಸಿದ್ದು, ಎಸ್.ಡಿ. ಎಂ  ಸಂಸ್ಥೆಯ ಅಧೀನದಲಿರುವ ರೇಡಿಯೋ ನಿನಾದ90.4 FM  ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.   ನಾವು ರೇಡಿಯೋ ನಿರೂಪಕರು. ಸಮಯ ನುಂಗದ, ಗಂಟೆಗಟ್ಟಲೆ  ಕೊರೆಯದ, ಬಾನುಲಿಯ ಬಾನಾಡಿಗಳು!  –ವಿ.ಕೆ ಕಡಬ






Thursday, June 21, 2018

ಮಳೆಗಾಲದ “ಉಬೇರ್ ಮೀನ್” ಬೇಟೆ: ಮುಗುಡು ಮೀನು ಕೈವಶ!

ಮುಂಗಾರು ಮಳೆ  ಚುರುಕುಗೊಂಡಾಗ   ಗ್ರಾಮೀಣ ಭಾಗದಲ್ಲಿ  ಮೀನು ಬೇಟೆ ಶುರುವಾಗುತ್ತದೆ. ಮಳೆ ಬಂದು ಬಿಟ್ಟಾಗ  ಗದ್ದೆ, ತೋಡುಗಳಲ್ಲಿ ಮೀನು ಹುಡುಕಿಕೊಂಡು ಹೋಗುತ್ತಾರೆ. ನಡುರಾತ್ರಿ ಅಥವಾ ಕೋಳಿ ಕೂಗುವ ಹೊತ್ತಲ್ಲಿಯೂ ಹೋಗುವುದುಂಟು.  ಹರಿಯುವ ನೀರಿನಲ್ಲಿ ಮೀನು ಹಿಡಿಯುವುದೆಂದರೆ  ರೋಮಾಂಚನಕಾರಿಯೂ ಹೌದು.  ಇನ್ನು ಕೆಂಪು ಮಿಶ್ರಿತ ನೀರು ಬಂದಲ್ಲಿ ಸಣ್ಣ ಹೊಳೆ ಅಥವಾ ತೋಡಿನಲ್ಲಿ ಬಲೆ ಹಿಡಿಯುತ್ತಾರೆ ಕೂಡ. 
ನದಿಭಾಗದಿಂದ ಮೀನುಗಳು ಬಯಲು ಪ್ರದೇಶಕ್ಕೆ ಹಿಂಡು ಹಿಂಡಾಗಿ ಬರುತ್ತವೆ.  ಇದೊಂದು ಗ್ರಾಮೀಣ ಪ್ರದೇಶದ ಜನರ ಹವ್ಯಾಸವಾಗಿದ್ದು,  ನಮ್ಮಲ್ಲಿ “ಉಬೇರ್ ಮೀನು ಪತ್ತುನ” ಎಂದು ಕರೆಯುತ್ತಾರೆ.



ಹಿಂದೆ ದೀಪದ ದೊಂದಿ, ತೆಂಗಿನ ಗರಿಯಿಂದ ಮಾಡಿದ ತೂಟೆ ಇವುಗಳನ್ನು ಬಳಸಿ ಮೀನು ಹಿಡಿಯಲು ರಾತ್ರಿ ಸಂಚರಿಸಿದರೆ, ಈಗ ಆಧುನಿಕವಾಗಿ ಈಗ ಹೆಚ್ಚು ಪ್ರಕಾಶಮಾನವಾದ ಬ್ಯಾಟರಿ ಚಾಲಿತ ಲೈಟ್ ಗಳನ್ನು ಬಳಸಿ ಮೀನುಬೇಟೆಗೆ ತೆರಳುತ್ತಾರೆ .ಈ  ಮೀನು ಬೇಟೆಯಲ್ಲಿ ನಾನು ಪರಿಣತಿ ಪಡೆಯದಿದ್ದರೂ ಒಡನಾಟವಿದೆ.ನಮ್ಮ ಮನೆ ಸಮೀಪವೆಲ್ಲ ಗದ್ದೆ, ತೋಡುಗಳಿವೆ.   ನಾನು ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದಾಗ ನನ್ನ ತಂದೆ  ಮೀನು ಹಾಕುವ ಚೀಲ ಹಿಡಿಯಲು ಕರೆದುಕೊಂಡು ಹೋದದ್ದು ನೆನಪಿಗೆ ಬರುತ್ತಿದೆ. ನನಗೆ ರಾತ್ರಿ ಕತ್ತಲೆಯಲ್ಲಿ ತೆರಲು ತುಂಬಾ ಭಯ ಪಡುತ್ತಿದ್ದೆ. ನನ್ನ ತಂದೆ ವೃತ್ತಿಯಲ್ಲಿ ಪರಿಣತ ಗಾರೆ ಕೆಲಸದವರಾದರೂ ಹವ್ಯಾಸವಾಗಿ ಮೀನು ಹಿಡಿಯುವ ಕೂರಿ, ಪೂಡಾಯಿ ಇವುಗಳನ್ನು ತಯಾರಿಸಿ ಮೀನು ಹಿಡಿಯಲು ಹೋಗುತ್ತಿದ್ದರು


ರಾತ್ರಿ ತುಂತುರು ಮಳೆಯಲ್ಲಿ ಮಿನುಗಳ ವಲಸೆ ಜಾಸ್ತಿ ಎಂಬುದು ಎಲ್ಲರಿಗೆ ಗೊತ್ತ್ರುವ ಸಂಗತಿ. ಮೊನ್ನೆ ನಾನು ನನ್ನ ಕುಟುಂಬದ  ಸ್ನೇಹಿತರು ಸೇರಿ  ರಾತ್ರಿ  ಮೀನು ಬೇಟೆಗಾಗಿ ಹೋದೆವು. ನಾನು ಬರೇ ಎರಡು ಮೀನು ಬೇಟೆಯಾಡಿದೆ.  , ಮುಳ್ಳುಬಾಳೆ, ಮುಗುಡು , ಕೀಜನ್, ಚೀರ್ಕಟೆ  , ಏಡಿ ಹೀಗೆ ವೈವಿಧ್ಯಮಯ ಜಾತಿಯ ಮೀನುಗಳು ಕಾಣಸಿಕ್ಕರೂ ಎರಡು ಮುಗುಡು ಹಿಡಿಯುವಲ್ಲಿ ಸಫಲನಾದೆ!
ನೀರಿನೊಳಗೆ ಮೀನಿನ ಸಂಚಾರ ಗೋಚರಿಸಿದ ಕೋಡಲೇ ಹರಿತವಾದ ಉದ್ದನೆಯ ಕತ್ತಿಯಲ್ಲಿ  ಕಡಿದೆ .ಹಲವು ಪ್ರಯತ್ನಗಳ ಬಳಿಕ  ಮೀನು ಕೈವಶವಾಯಿತು.

ಸಣ್ಣ ಪುಟ್ಟ ಮೀನುಗಳಿಂದ ಹಿಡಿದು ದೊಡ್ಡ ದೊಡ್ಡ ಗಾತ್ರದ ಮೀನುಗಳೂ ಸಿಗುವುದುಂಡು ಆದ್ರೆ ಅದಕ್ಕೆ ತಾಳ್ಮೆ ಮತ್ತು ಸಮಯ ಬೇಕು. ರಾತ್ರಿ ಮೀನು ಬೇಟೆಯ ಸಮಯದಲ್ಲಿ ಹಾವುಗಳೂ ಇರುವ ಸಾಧ್ಯತೆಯಿದ್ದು, ಎಚ್ಚರಿಕೆಯೂ ಅಗತ್ಯ.ಈ ಮಳೆಗಾಲದಲ್ಲಿ ಮೀನು ಬೇಟೆ ಒಂದು ಹೊಸ ಅನುಭವೇ ಸರಿ

Thursday, June 07, 2018

ಲೋಕಲ್ ಬಸ್ಸು, ಎಕ್ಸ್ ಪ್ರೆಸ್ ಟಿಕೆಟು!

ಕಳೆದ ಸೋಮವಾರ ಕಡಬದಿಂದ ಮುಂಜಾನೆ ಮಂಗಳೂರಿಗೆ ಬರಬೇಕಿತ್ತು. ಮೊದಲ ಸಾಮಾನ್ಯ ಬಸ್ಸು6:10 ಸುಮಾರಿಗೆ ಹೋಗುತ್ತದೆ. ಬಳಿಕ 6:30 ರದ್ದು ಎಕ್ಸ್ ಪ್ರೆಸ್ ಬಸ್ಸು.ಇವೆರಡೂ ಬಸ್ಸುಗಳು ಹೋದ ಬಳಿಕ ನಾನು ಕಡಬ ಬಸ್ ನಿಲ್ದಾಣಕ್ಕೆ ಬಂದಿದ್ದೆ.

ಇನ್ನೊಂದು ಬಸ್ಸು ಬರುತ್ತೆ ಎಂದು ಪರಿಚಿತ ಅಂಗಡಿ ಮಾಲಕರು ಹೇಳಿದರು .ಸುಮಾರು 6:45 ಸುಮಾರಿಗೆ ಗ್ರಾಮೀಣ ಸಾರಿಗೆ ಬಸ್ಸು ಬಂತು. ಲೋಕಲ್ ಬಸ್ ಆದಕಾರಣ ಮಂಗಳೂರು ತಲುಪಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಹಾಗಾಗಿ ಉಪ್ಪಿನಂಗಡಿಗೆ ಟಿಕೆಟ್ ಮಾಡಿದೆ. ಟಿಕೆಟ್ ನೋಡಿದ ಬಳಿಕ ದಿನ 28 ರೂ ಇದ್ದದ್ದು 33 ಆಗಿದ್ದು ಆಶ್ಚರ್ಯದಿಂದಲೇ ಕಂಡಕ್ಟರ್ ಬಳಿ ಕೇಳಿದೆ . ಸರ್... ಟಿಕೇಟು ಸರಿ ನೋಡಿ ಇದು ಎಕ್ಸ್ ಪ್ರೆಸ್ ಬಸ್!

 ಹಳೆಯ ಸೀಟುಗಳು, ಕೈ ತೋರಿಸಿದ ಜನರಿಗೆ ಅಲ್ಲಲ್ಲಿ ನಿಲ್ಲಿಸುವುದನ್ನು ಕಂಡು ಕಂಡಕ್ಟರ್ ಬಳಿ ವಾದ ಮಾಡಬೇಕಾಯಿತು. ನನ್ನ ಜೊತೆಗೆ ಅನೇಕ ಸಹ ಪ್ರಯಾಣಿಕರು ಧ್ವನಿ ಗೂಡಿಸಿದರು.ಜೊತೆಗೆ ಮಂಗಳೂರಿಗೆ ಟಿಕೆಟು ಮಾಡಿದವರೂ ಎಚ್ಚೆತ್ತುಕೊಂಡರು. ಬಳಿಕ ಡಿಪೋ ಮ್ಯಾನೆಜರ್ ಗೆ ಕರೆ ಆಗಲೇ ಕರೆ ಮಾಡಿದೆ. ಒಂದೇ ಪೋನು ಆದರೂ ಹಲವಾರು ಅಧಿಕಾರಿಗಳಿಗೆ ವರ್ಗಾವಣೆಯಾಯಿತು. ಕೊನೆಗೆ ಒಬ್ಬರು ಮಾತಿಗೆ ಸಿಕ್ಕರು. ಸಾಮಾನ್ಯ ಬಸ್ಸಿನಲ್ಲಿ ಎಕ್ಸ್ ಪ್ರೆಸ್ ಟಿಕೆಟ್ ಕೊಟ್ಟು ಯಾಕೆ ಸಾರ್ವಜನಿಕರನ್ನು ಸತಾಯಿಸುತ್ತಿರಿ ಕೇಳಿದರೆ, ಬಸ್ ಸಮಸ್ಯೆ ಸಾರ್ ಅಂದರು. ಅಲ್ಲಲ್ಲಿ ನಿಲ್ಲಿಸುವುದು ಯಾಕೆ ಎಂದಿದ್ದಕ್ಕೆ ಎಲ್ಲ ಜನರು ಹೋಗಬೇಕಲ್ವಾ ಸರ್ ಎಂದು ಹಾರಿಕೆಯ ಉತ್ತರ ನೀಡಿದ್ದರು. ಸುಬ್ರಹ್ಮಣ್ಯದಿಂದ ಕಡಬ ಮೂಲಕ ನಿತ್ಯ ಬರುವ ಬಸ್ ಗಳನ್ನು ಕಡಿತ ಮಾಡಿ ಲೋಕಲ್ ಬಸ್ಸಿನಲ್ಲಿ ಎಕ್ಸ್ ಪ್ರೆಸ್ ಟಿಕೆಟ್ ಕೊಟ್ಟು ಜನರನ್ನು ಮೋಸ ಮಾಡುವ ಇಂಥ ಅಧಿಕಾರಿಗಳಿಗೆ ಏನು ಹೇಳಬೇಕು ಗೊತ್ತಾಗುವುದಿಲ್ಲ. ಕುರಿತಂತೆ ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿದೆ.

x