Showing posts with label ಲೇಖನಗಳು. Show all posts
Showing posts with label ಲೇಖನಗಳು. Show all posts

Thursday, August 01, 2019

ಆದಾಯ ಮೂಲವಿಲ್ಲದ ಮಹಿಳೆಯರು ಸಂಘದ ಕಂತು ಕಟ್ಟಡಲು ಪರದಾಡುವುದನ್ನು ಗಮಸಿಸಿದ್ದೀರಾ?


ಹಲವು  ಉದ್ಯಮಿಗಳು ಸಾಲದ ಸಂಕಷ್ಟದಲ್ಲಿ    ಸಿಲುಕಿಕೊಂಡಿರುವ  ಬಗ್ಗೆ  ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಅಲ್ಲದೆ  ಸಂಕಷ್ಟದಲ್ಲಿರುವ  ಕೆಲ ಕಂಪೆನಿಗಳ ಹೆಸರುಗಳೂ ಹರಿದಾಡುತ್ತಿದೆ. ಇದಕ್ಕೆ ಕಾರಣ ಕೆಫೆ ಕಾಫಿ ಡೇ  ಸಂಸ್ಥಾಪಕ ಸಿದ್ದರ್ಥ್   ಅವರ  ಆತ್ಮಹತ್ಯೆ   ಘಟನೆ.   ಉದ್ಯಮಿಗಳ  ಬಗ್ಗೆ ನಾನು ಹೆಚ್ಚು ವಿವರಿಸಲು ಇಲ್ಲಿ ಹೋಗುತ್ತಿಲ್ಲ , ಬಂಡವಾಳ ಹೂಡಿಕೆ ಮಾಡಿ ಉದ್ಯಮ ನಡೆಸುವವರೇ   ಇಂತ ಪರಿಸ್ಥಿತಿಯಲ್ಲಿ ಇರುವಾಗ   ಸಮರ್ಪಕ ಆದಾಯದ  ಮೂಲವಿಲ್ಲದೆ  ವಿವಿಧ  ಸ್ವಸಹಾಯ  ಸಂಘದಿಂದ ಸಾಲ ತೆಗೆದ  ಗ್ರಾಮೀಣ ಮಹಿಳೆಯರು ಸಂಘದ ಕಂತು ಕಟ್ಟಡಲು ಪರದಾಡುತ್ತಿದ್ದಾರೆ!

ಇಂದು  ಹಳ್ಳಿಗಳಲ್ಲಿ  ವಿವಿಧ ಹೆಸರಿನ  ಸ್ವಸಹಾಯ ಸಂಘಗಳು ರಚನೆಗೊಂಡು ಮಹಿಳೆಯನ್ನು   ಸ್ವಾವಲಭಿಯನ್ನಾಗಿಸಿದೆ.    ಸಾಮಾಜಿಕ , ಆರ್ಥಿಕ ಸುಧಾರಣೆಗೂ  ಕಾರಣವಾಗಿದೆ.   ಹೆಚ್ಚಿನ  ಮಹಿಳೆಯರು   ವಿವಿಧ ಸ್ವಸಹಾಯ ಸಂಘಗಳಲ್ಲಿ ಸದಸ್ಯರಾಗಿದ್ದು, ಹಣಕಾಸು ಸಂಸ್ಥೆಗಳಿಂದ   ಬಡ್ಡಿ ದರದಲ್ಲಿ    ಲಕ್ಷ ರೂಪಾಯಿ ಸಾಲ ಪಡೆದವರಿದ್ದಾರೆ. ಕೆಲ ಮಹಿಳೆಯರು ಎರಡೆರಡು ಸಂಘಗಳಲ್ಲಿ   ಸೇರಿಕೊಂಡು ಮೂಲಭೂತ  ಸೌಕರ್ಯ ಸೇರಿದಂತೆ ಮಕ್ಕಳ ಉನ್ನತ  ಓದಿಗಾಗಿ ಸಾಲ ರೂಪದಲ್ಲಿ  ಹಣವನ್ನು ಪಡೆದುಕೊಂಡಿದ್ದಾರೆ. ಆದರೆ ಕೆಲಸವೇ ಸಿಗದಿರುವುದರಿಂದ   ನಿಯಮಿತವಾಗಿ ವಾರಕ್ಕೆ ಕಟ್ಟಬೇಕಾದ ಸಾಲದ ಕಂತುಗಳನ್ನು ಕಟ್ಟಲು ಸಾಧ್ಯವಾಗದ  ಸ್ಥಿತಿ ಎದುರಾಗಿದೆ.      


 ಜನ ಸಾಮಾನ್ಯರಿಗೆ ಈ ಲಕ್ಷ ರೂಪಾಯಿಗಳ  ಸಾಲ ದೊಡ್ಡ ಮೊತ್ತವೇ ಆಗಿದೆ.  ಸಂಘದ  ಗುಂಪಿನ ಸದಸ್ಯರು ಪ್ರತಿ ವಾರವೂ ೫೦೦ ಅಥವಾ  ೧,೦೦೦  ರೂಪಾಯಿ ಕಂತು ರೂಪದಲ್ಲಿ ಕಟ್ಟಲೇಬೇಕೆನ್ನುವ   ಡೆಡ್ಲೈನ್ ಇದೆ.     ಕಡಿಮೆ ಮಜೂರಿಗೆ ಬೀಡಿ ಕಟ್ಟಿ ಅಥವಾ ದಿನಗೂಲಿ ಕೆಲಸ ಮಾಡಿ ಸಂಘದ  ಸಾಲದ ಕಂತು ಕಟ್ಟುವ  ಅನಿವಾರ್ಯತೆ  ಗ್ರಾಮೀಣ ಭಾಗದ ಬಡ ಮಹಿಳೆಯರದ್ದು.  ಕೆಲ ಸ್ವಸಹಾಯ ಸಂಘಗಳಲ್ಲಿ   ಸದಸ್ಯರು  ವಾರದ  ಸಭೆಗೆ ಹಾಜರಾಗುತ್ತಿಲ್ಲ.  ಅದಕ್ಕೆ  ವೈಯಕ್ತಿಕ ಕಾರಣಳಿದ್ದರೂ  ಹೆಚ್ಚು  ಹಣದ ಕೊರತೆಯೇ ಆಗಿದೆ ಎಂಬುದು ಸತ್ಯ.    ಗುಂಪಿನ ಎಲ್ಲಾ ಸದಸ್ಯರ ಒಪ್ಪಿಗೆ ಮೇರೆಗೆ ವಿಶ್ವಾಸದಿಂದ   ಎಲ್ಲರಿಗೂ ಸಾಲವನ್ನು ನೀಡಿದ್ದರೂ ವಾರದ ಮೀಟಿಂಗ್ ದಿನ ಹಣ ಹೊಂದಾಣಿಕೆಗೆ ಮಹಿಳೆಯರು ಪಡುವ ಸಂಕಷ್ಟ ಹೇಳತೀರದು . ಸಂಘದ ಸದಸ್ಯ ಬಾಕಿ ಮಾಡಿದರೂ   ಹಣ ಕಟ್ಟಿರುವ   ಸದಸ್ಯರು ಉಳಿಕೆ ಹಣವನ್ನು ಭರ್ತಿ ಮಾಡಲೇಬೇಕೆಂಬ ನಿಯಮ ಕೆಲ  ಸಂಘದ ಅಧಿಕಾರಿಗಳೆಂದು ಹೇಳಿಕೊಳ್ಳುವ ಇದೆ. ಮಾತ್ರವಲ್ಲದೆ ಕಂತು ಕಟ್ಟದ ಸದಸ್ಯರ ಮನೆಗೆ ಗುಂಪಿನ ಸದಸ್ಯರು ಸಾಮೂಹಿಕವಾಗಿ ಹೋಗಿ ವಿಚಾರಿಸಿದ ಉದಾಹರಣೆಗಳೂ ಇವೆ  ಗುಂಪಿನ ಮುಖ್ಯಸ್ಥರು ಮತ್ತು ಸಹ ಸದಸ್ಯರ ಒತ್ತಡ  ಕಿರಿಕಿರಿಯನ್ನು ಸಹಿಸಿಕೊಂಡು ತಾಳ್ಮೆಯಿಂದ ಹೊಂದಾಣಿಕೆ ಮಾಡಿಕೊಂಡು  ಸಮಾಜದಲ್ಲಿ ಬದುಕುತ್ತಿದ್ದಾರೆ.  

ವಿಪರ್ಯಾಸವೆಂದರೆ  ಪ್ರತಿಯೊಂದು ಮನೆಯಲ್ಲಿಯೂ  ತಿನ್ನುವ ಕೈಗಗಳ ಸಂಖ್ಯೆ ಹೆಚ್ಚಾಗಿದ್ದು ,  ದುಡಿಯುವ ಕೈಗಳು ಕಡಿಮೆ.   ಕೂಲಿ ಕೆಲಸ  ಮಾಡುವ ಸಾಮಾನ್ಯ   ಜನರಿಗೆ ವಾರ ಪೂರ್ತಿ ಕೆಲಸ ಸಿಗುತ್ತಿಲ್ಲ.  ಮನೆಯ ಕೆಲ ಯುವಕರು ಕೆಲಸಕ್ಕೆ ಹೋಗುತ್ತಿಲ್ಲ. ಮನೆ ಸದಸ್ಯರು ಹಣ ಕಟ್ಟಲು ಸಹಾಯ ಮಾಡುತ್ತಿದ್ದರೂ ಕೆಲಸವಿಲ್ಲದ ಕಾರಣ ಅದೂ ಸಾಧ್ಯವಾಗುತ್ತಿಲ್ಲ.  ಹೀಗಾಗಿ ಜೀವನ ನಿರ್ವಹಣೆ ಜೊತೆಗೆ ಸಂಘದ ಕಂತುಗಳನ್ನು   ಕಟ್ಟಲು ಮಹಿಳೆಯರು   ತಮ್ಮ ಚಿನ್ನಾಭರಣವನ್ನು ಅಡವಿಡುವ ಪರಿಸ್ಥಿತಿ ಬಂದೊದಗಿದೆ.  ಸರ್ಕಾರವು  ಪ್ರತಿಯೊಂದು  ಬಡ ಕುಟುಂಬದ ಸದಸ್ಯರೊಬ್ಬರಿಗೆ ನೊಂದಾಯಿತ ಸ್ವಸಾಹಯ ಸಂಘ, ಸೊಸೈಟಿ, ಗ್ರಾಮೀಣ ಬ್ಯಾಂಕ್ ಗಳ ಮೂಲಕ ಕಡಿಮೆ ಬಡ್ಡಿಗೆ ಸಾಲ ಸಕೊಡಿಸಬಾರದೇಕೆ?  ಈ ಮೂಲಕ ತನ್ನ ಸಾಲವನ್ನು ಆತ್ಮವಿಶ್ವಾಸದಿಂದ ಕಟ್ಟಲು ಸಾಧ್ಯವಾಗುತ್ತದೆ ,ಜೀವನ ಮಟ್ಟವನ್ನೂ ಸುಧಾರಿಸಲು ಸಾಧ್ಯವಿದೆ ಅಲ್ವೇ?

Tuesday, July 30, 2019

ಉಡಲ್ದ ತುಡರ್ ತೆಕ್ಕ್ಂಡ್: ಬೊಳ್ಳಿ ತೋಟದ ಬಯ್ಯಮಲ್ಲಿಗೆ ಬಾಡ್ಂಡ್-ವಿ.ಕೆ ಕಡಬ

ತುಳು ರಂಗಭೂಮಿ ಬೊಕ ತುಳು ಸಿನೆಮಾ  ರಂಗೊಗು ಬೆಂದುದು  ರಂಗಕಲಾಭೂಷಣ , ತುಳು ರತ್ನಪೆರ್ಮೆದ ತುಳುವೆತುಳುಸಿರಿ’ ‘ತುಳು ಸಾಹಿತ್ಯ ರತ್ನಾಕರ’ ‘ತೌಳವ ಪ್ರಶಸ್ತಿಇಂಚಿತ್ತಿ ಮಾನದಿಗೆ ದೆತೊಂದು ನಮ್ಮೊಟ್ಟುಗಿತ್ತಿನ ತುಳು ಸಾಹಿತ್ಯ ಅಕಾಡೆಮಿದ ಮಾಜಿ ಗುರ್ಗಾರೆ ಎಂ.ಕೆ ಸೀತಾರಾಮ ಕುಲಾಲ್  ಕರಿನ ಐತಾರದಾನಿ ಪಂಡ ಜುಲೈ ೨೮ ನೇ ತಾರಿಕ್ ಕಾಂಡೆ  ಲೋಕ  ಬುಡುದು ಅಗತೆರ್.
ತುಳು  ಬಾಸೆಡ್ ಮನಸ್  ಅರಳುನಂಚಿನ  ಬೊಕ ಮೋಕೆ ಉರ್ಕುದು ಬರ್ಪಿನಂಚಿನ ಪದೊಕುಲೆನ್ ಮೊಡೆದ್ ತುಳು ಸಿನೆಮಾ  ಕ್ಷೇತ್ರೊಗು ಕೊರಿನ ಸೀತರಾಮ ಕುಲಾಲೆರ್   ಸಂಗೀತ ಪ್ರೇಮಿಲೆಗ್ ಬಾರೀ ಕೈತಲ್ ಆದಿತ್ತೆರ್.    ಜನಕ್ಲೆನ ಬಾಯಿಡ್ ಅಪಗಪಗ ಕೇಂದ್ ಬರೊಂದಿತ್ತಿನ  ಮೋಕೆದ ಸಿಂಗಾರಿ ಉಂತುದೆ ವಯ್ಯಾರಿ  ಯಾನ್ ಮೂಲೆ ಕಾತೊಂದುಲ್ಲೆ ಮರತೇ ಪೋಪನಾ ಪದ ತುಳುನಾಡ್ದೊರ್ಮೆ ಬಾರೀ ಪುಗರ್ತೆ ಪಡೆದ್ ಇತ್ತುಂಡು.ಅಂಚನೆ ಬೇತೆ ಬೇತೆ ಕೊಡಿಡ್  ನಡಪುನ ಪದಗೊಂಚಿಲ್ ಕಾರ್ಯಕ್ರಮಲೆಡ್ ಪದ ಕೇಂದ್ ಬರೊಂದು ಇತ್ತ್ಂಡ್.  ಪದೊಗು ಸುರುಕು ಸೊರ ಕೊರ್ನಾರ್ ಎಸ್. ಬಿ ಬಾಲಸುಬ್ರಹಣ್ಯಂ ,ಅಯೆರ್ದ್ ಬೊಕ್ಕ ಪೆರ್ಮೆದ ಗಾಯಕೆ  ಪುತ್ತೂರು ನರಸಿಂಹ ನಾಯಕ್ ಮೋಕೆದ ಸಿಂಗಾರಿ ಪದೊತ ಪೊಸ ಸಂಗೀತೊಡು  ಪಂತೆರ್.

ಪದ ಮಾತ್ರ ಅತ್,  ಪಕ್ಕಿಲು ಮೂಜಿ ಒಂಜೇ ಗೂಡುಡು ಬದ್ಕೊಂದುಂಡುಗೆ,  ಪರಶುರಾಮನ ಕೊಡಲಿಗ್ ಪುಟ್ಟಿನ ತುಳುನಾಡ್, ಬ್ರಹ್ಮನ ಬರವು ಮಾಜಂದೆ ಪೊಂಡಾ,  ಅಪ್ಪೆ ಮನಸ್ ಬಂಗಾರ ಅಮ್ಮ ತೆನಸು ಸಿಂಗಾರ, ಡಿಂಗಿರಿ ಮಾಮ ಡಿಂಗಿರಿ ಮಾಮ ಪೊಡಿದ್ ಪಾರಡಾ. ಇಂಚ ಜನಕ್ಲೆನ ನಲಾಯಿದ  ಕೊಡಿಟ್ ನಲಿಪುನ ಪದೊಕುಲೆನ್ ಬರೆದ್   ಸುಮಾರು 11 ತುಳು ಸಿನೆಮೊಲೆಗ್  2 5 ಜಾಸ್ತಿ ಸೂಪರ್ ಹಿಟ್  ಪದೊಕುಲೆನ್  ಬರೆತೆರ್ .  ಪದೊತ  ಮೂಲಕ ಬೇಗ ಜನಕ್ಲೆಗ್ ಗುರ್ತ ಆಯಿನ ಮಾತ್ರ ಅತ್ ಆರ್ ರಂಗಭೂಮಿಡ್ ಬೆಂದ್ ನಾರ್. ಇರ್ವೊನೆ ಒರ್ಸೊಡು ನಾಟಕ ಬರೆವರ ಪಿದಾಡಿನ ಕುಲಾಲೆರ್ ದಾಸಿ  ಪುತ್ರ ಪನ್ಪಿನ ಪುದರ್ ಡ್ ಸುರುತ ನಾಟಕ ಬರೆಯೆರ್. ಅಯೆರ್ದ್ ಬೊಕ್ಕ ತುಳು ಮಣ್ಣ್ ಬಿರ್ಸೆದಿ ಪೊಣ್ಣು ರಾಣಿ ಅಬ್ಬಕ್ಕನ ಬಗೆಟ್ ಬರೆಯ್ನ ಮಣ್ಣಿನ ಮಗಳು ನಾಟಕ ಎಡ್ಡೆ ಪುದರ್ ನ್ ಕನತ್ಂಡ್. ಇಂಚ ಕನ್ನಡೊಡು ಒಟ್ಟು ೨೦ ಸಾಮಾಜಿಕ ನಾಟ ೧೯ ಚಾರಿತ್ರಿಕ ಬೊಕ ಪೌರಾಣಿಕ ಜಾನಪದ ನಾಟಕೊನು ಬರೆಯೆರ್. ಐತ ಒಟ್ಟುಗೆ ೧೦  ತುಳು ಸಾಮಾಜಿಕ ಬೊಕ ಚಾರಿತ್ರಿಕ ನಾಟಕ ತುಳು ನಾಟಕನ್ ಕನ್ನಡಗ್ ತರ್ಜುಮೆ ರೇಡಿಯೋ ನಾಟಕ ದೃಶ್ಯ ರೂಪಕ ಬುಕ ನಾಲ್  ಗೀತ ರೂಪ ರಚನೆ ಮಲ್ದುದು ಕನ್ನಡ ಬುಕ ತುಳು ರಂಗಭೂಮಿಗ್ ಬೆಂದಿನಾರ್.


ಮಲ್ಲ ತುಳು ಚಿತ್ರ ಸಾಹಿತಿಯಾದ್ ಪುದರ್ ಪಡೆಯಿನ ಸೀತರಾಮ ಕುಲಾಲ್ ಪಗೆತ ಪುಗೆ, ಉಡಲ್ದ ತುಡರ್, ಬಯ್ಯ ಮಲ್ಲಿಗೆ ಬದ್ಕ್ ಬಿಲೆ, ನಿರೆಲ್ ಸಿನೆಮಾಗ್ ಪದೊಕುಲೆನ್ ಬರೆದ್ ಕೊರ್ದಿತ್ತೆರ್. ಮೇರ್ ಬರೆಯಿನ ಮೋಕೆದ ಸಿಂಗಾರಿ,ಪಕ್ಕಿಲು ಮೂಜಿ ಒಂಜೇ ಗೂಡುಡು, ಬ್ರಹ್ಮನ ಬರವು ಮಾಜಂದೆ ಪೋಂಡ, ಉಡಲ್ದತುಡರ್ ಗ್ ಮನಸ್ ಉರ್ಕರ್ದ್, ಸಾರ ಒರ್ಸೊಲ ಸುಕೊನೆ ಪಡೆಲ ಇಂಚಿನ ಪದೊಕುಲು ಇತ್ತೆಲಾ ಜನಕ್ಲೆನ ಉಡಲ್ ಡ್ ಉಂಡು . ರಾಮಕಿರೋಡಿಯನ್  ಬುಕ ಕೆ.ಎನ್ ಟೇಲರ್ ಸಂಜೀವ ದಂಡಕೇರಿ ಮುಲ್ಕೆನೊಟ್ಟುಗು ಸೇರೊಂದು ಕಡಲನಾಡ ಕಲಾವಿದರು ಪನ್ಪಿನ ನಾಟಕ ತಂಡೊನು ಕಟ್ಟ್ ದ್ ಬೇತೆ ಬೇತೆ ಕೋಡಿಲೆಡ್ ನಾಟಕ  ಗೊಬ್ಬುದು ಪಾಲ್ ಪಡೆದ್ ದಿಂಜ ಪ್ರಶಸ್ತಿನ್ ಪಡೆದಿತ್ತೆರ್. ಮೇರ್ ಬರೆಯಿನ ನಾಟಕ ಬೆಂಗಳೂರು, ಬೊಂಬಾಯಿ ಬುಕ ಪಿದಾಯಿ ದೇಸೊಡ್ಲಾ ಪ್ರದರ್ಶನ ಆದಿತ್ತುಂಡು.
ವೃತ್ತಿ ಬದ್ ಕ್ ಡ್ ಯುನೈಟೆಡ್ ಇನ್ಸೂರೆನ್ಸ್ ಕಂಪೆನಿಡ್ ಬೇಲೆ ಮಲ್ತೊಂದಿನ ಸೀತಾರಾಮ ಕುಲಾಲ್ ಸುರತ್ಕಲ್ ಡ್ ಹಿರಿಯ ಶಾಖಾದಿಕಾರಿಯಾದ್ ನಿವೃತ್ತಿಯಾಯೆರ್. ತುಳು ಸಾಹಿತ್ಯ ಅಕಾಡೆಮಿಡ್ ೨೦೦೫ ಡ್ದ್ ೨೦೦೮ ಮುಟ್ಟ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿದ ಗುರ್ಕಾರೆಯಾದ್ ಸೇವೆ ಮಲ್ತಿನ ಸಿತಾರಾಮ ಕುಲಾಲೆರ್ ಅಕಾಡೆಮಿದ ಜಾಗೆ ಬೊಕ ತುಳು ಭವನೊದ ನಿರ್ಮಾಣೊಗು ಕಾರಣ ಕರ್ತರೆರ್ ಅಂಚನೆ ತುಳು ಕಲ್ಪುಗ ಕಜ್ಜೊಗು ಕೈ ಜೋಡಿಸಾದ್ ಇತ್ತೆರ್. ಕುಡ್ಲದ ಬಿಜೈ ಕೈತಲ್ ಬಾಳಿಗ ಸ್ಟೋರ್ ಪನ್ಪಿನಲ್ಪ ಇಲ್ಲ್ ಮಲ್ತ್ ದ್  ಇತ್ತಿನ ಮೇರ್  ಇಂಚಿಪ ಅರೋಗ್ಯ ಸಮಸ್ಯೆದಾತ್ರ ಆಸ್ಪತ್ರೆ ಸೇರ್ದಿತ್ತೆರ್. ಮೇರ್ ಲೋಕ ಬುಡುತು ಅಗತಿನ ಸುದ್ದಿ ಕೇಂದ್ ತುಳು ರಂಗಭೂಮಿ ಬೊಕ ಸಿನೆಮಾ ಕ್ಷೇತ್ರದ ಕಲಾವಿದೆರ್ ಕಣ್ಣಿರ್ ಪಾಡ್ತೆರ್.

ತುಳು ರಂಗಭೂಮಿ ಬೊಕ ಸಿನೆಮಾ ಕ್ಷೇತ್ರಗ್ ಮಾಮಾಲ್ಲ ಸಂಪತ್ ಕೊರ್ನ ,ರಂಗಭೂಮಿದ ಬುಲೆಚ್ಚಿಲ್ಗ್  ಕಾರಣ ಆಯಿನ   ಸೀತರಾಮ ಕುಲಾಲ್  ನಮ್ಮೊಟ್ಟುಗು ಇಜ್ಜೆರ್. ಆರ್  ಬರೆಯಿನ ಭ್ರಹ್ಮನ ಬರವು ಮಾಜಿದ್ ಪೋಂಡಾ ಪದ ಕೆಬಿಟ್ ಕುಡ ಕೇಂಡಿಲೆಕ್ಕ ಆಪುಂಡು..ಉಡಲ್ದ ತುಡರ್ ತೆಕ್ಕ್ಂಡ್ ….. ಬೊಳ್ಳಿ ತೋಟದ ಬಯ್ಯಮಲ್ಲಿಗೆ ಬಾಡ್ಂಡ್

Saturday, September 22, 2018

ತರ್ಜುಮೆಯಲ್ಲಿ ಜೀವ ಕಳೆದುಕೊಳ್ಳುತ್ತಿರುವ ಕನ್ನಡ ಶಬ್ದಗಳು: ಇಲ್ಲಿ ಮೂತ್ರ ತೇರ್ಗಡೆ ಹೊಂದಿಲ್ಲ!


ಪ್ರತಿ ವರ್ಷವೂ ಸರಕಾರ ನವೆಂಬರ್ ಮೊದಲ ದಿನ ರಾಜೋತ್ಸವವನ್ನು ವಿಜ್ರಂಭಣೆಯಿಂದ  ಆಚರಣೆ  ಮಾಡುವುದಲ್ಲದೆ  ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತ ಬರುತ್ತಿದೆ.  ಆದರೆ ರಾಜ್ಯದ ಕೆಲ ಗಡಿಭಾಗದಲ್ಲಿ ಕನ್ನಡ ಭಾಷೆ ಕಡ್ಡಾಯ ಮಾಡಿದ್ದರೂ ಪ್ರಯೋಜನಕಾರಿಯಾಗದಿರುವುದು ಸಮಸ್ತ ಕನ್ನಡಿಗರಿಗೆ ಗೊತ್ತಿರುವ ಸಂಗತಿ. ಇಂತಹ ಜಾಗಗಳಲ್ಲಿ  ಅಲ್ಪಸ್ವಲ್ಪ ಕನ್ನಡ ಭಾಷೆ ಮಾತನಾಡುವವರು ನಮಗೆ ಕಾಣ ಸಿಗುತ್ತಾರೆ.  ಅಲ್ಲದೆ ಅಪರೂಪದ ನಾಮಫಲಕಗಳು ಕೂಡ ಕಾಣಸಿಗುವುದುಂಟು.  ಆದರೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ  ತಪ್ಪು ಸಂದೇಶ ನೀಡುವ ನಾಮಫಲಕಗಳು ಕಂಡು ಬರುತ್ತಿರುವುದು ನಮ್ಮ ದುರ್ದೈವಾಗಿದೆ.

ಮುಖ್ಯವಾಗಿ ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಬದಿಯಲ್ಲಿ ಬರೆಸಲಾಗಿರುವ ನಾಮಫಲಕಗಳನ್ನು  ಜನಸಾಮಾನ್ಯರೂ ಗಮನಿಸುತ್ತಾರೆ.   ಈ ಇಲಾಖೆಯ ಬರವಣಿಗೆಯಲ್ಲಿ   ಅಲ್ಲಲ್ಲಿ ಕನ್ನಡ ಭಾಷೆಯನ್ನು ಅಪಭ್ರಂಶಗೊಳಿಸುವ ಉದಾಹರಣೆಗಳು ನಮಗೆ ಕಾಣ ಸಿಗುತ್ತಲೇ ಇವೆ  ಇದಕ್ಕೊಂದು ಸೇರ್ಪಡೆ ಈ ರಸ್ತೆ Do not pass urine ಎಂಬ ಶಬ್ದವನ್ನು ಇಲ್ಲಿ ಮೂತ್ರ ತೇರ್ಗಡೆ ಹೊಂದಿಲ್ಲ ಎಂದು  ಬಿ ಬಿ ಎಂ ಪಿ ಕನ್ನಡಕ್ಕೆ ತರ್ಜುಮೆ ಮಾಡಿರುವುದು. ಇದು ಒಂದು ಉದಾಹರಣೆಯಷ್ಟೆ.


ಬೆಂಗಳೂರಿನಲ್ಲಿ ಮಾತ್ರ ಅಲ್ಲ ಇತ್ತ ಮಂಗಳೂರಿನಿಂದ ಕಾಸರಗೋಡಿಗೆ ಸಾಗುವ ದಾರಿಯಲ್ಲಿ ತಲಪಾಡಿ ಕಳೆದರೆ ಕನ್ನಡವನ್ನು ಅಪ್ಪಚ್ಚಿ ಮಾಡಿರುವುದು ಕಾಣಬಹುದು.  ರಾಜಧಾನಿಯಲ್ಲಿ ಕನ್ನಡ ಕಗ್ಗೊಲೆ  ಹಲವು ರೀತಿಯಲ್ಲಿ ಆಗುತ್ತಿದೆ . ಪ್ರಮುಖವಾಗಿ ಕಂಡು ಬರುವುದು ವಿವಿಧ  ಬಡಾವಣೆಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ಮತ್ತು  ಬಿಎಂಟಿಸಿ ಬಸ್‌ಗಳಿಗೆ ಅಳವಡಿಸಿರುವ ನಾಮ ಫಲಕಗಳಲ್ಲಿ.  ಈ ಮುದ್ರಾರಾಕ್ಷಸನ ಹಾವಳಿಗೆ ಹಲವು ತಪ್ಪುಗಳು ಇರುವುದರಿಂದ  ಈ ನಾಮಫಲಕಗಳು ಜನರಿಗೆ ತಪ್ಪು ಮಾಹಿತಿ ನೀಡುತ್ತವೆ .
ನಾನೊಮ್ಮೆ ಬೆಂಗಳೂರಿಗೆ ಹೋಗಿ  ಎಮ್.ಜಿ ರಸ್ತೆಯಲ್ಲಿ ಬಿ.ಎಂ ಟಿ ಸಿ ಬಸ್ಸ್ ನಲ್ಲಿ ಪ್ರಯಾಣಿಸುವಾಗ  ಚಿನ್ನ ಸ್ವಾಮಿ ಕ್ರೀಡಾಂಗಣದ ಹೆಸರನ್ನು ಕಂಡೆ. chinnaswamy stadium ಎಂದು ಇಂಗ್ಲಿಷ್ ನಲ್ಲಿ ಸ್ಪಷ್ಟವಿದ್ದರೂ ಕನ್ನಡದಲ್ಲಿ ಮಾತ್ರ ಅದು ಚಿನ್ನಸ್ವಾಮಿ ಸ್ತೇಡಿಯಂ ಆಗಿತ್ತು!

ಇಂತಹ ವಿಚಾರಗಳ ಬಗ್ಗೆ ಲೇಖನ ಬರೆಯುವುದರಿಂದ ಸರಿಪಡಿಸಲು ಸಾಧ್ಯವಾಗದು ಇದಕ್ಕೊಂದು  ದೊಡ್ಡ ಮಟ್ಟದ ಆಂದೋಲನವೇ ಬೇಕೆಂದು ಅನಿಸುತ್ತದೆ. ಸರ್ಕಾರ ,ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜೊತೆ  ಪ್ರಾಧ್ಯಾಪಕ ವರ್ಗ,ಕನ್ನಡ ಅಭಿಮಾನಿಗಳು ಕೈಜೋಡಿಸಿದರೆ  ಉತ್ತಮ ಆದೀತೆ?

Sunday, July 22, 2018

ಪ್ರವೀಣ ಹೆಸರಿನ ಬಹುತೇಕ ಸ್ನೇಹಿತರು ಜಾಣರು ,ಆದ್ರೆ ಈ ಪ್ರವೀಣ ಯಾಕೋ ದಡ್ಡನಾದ!


ನಾನು ಪ್ರಾಥಮಿಕ ವಿದ್ಯಾಭ್ಯಾಸ ಮಾಡುತ್ತಿರುವಾಗ ಮೊದಲ ಬೆಂಚಿನಲ್ಲಿ ಪ್ರವೀಣ ಹೆಸರಿನ ಸ್ನೇಹಿತನೊಬ್ಬ ಲೆಕ್ಕದಲ್ಲಿ ಜಾಣನಾಗಿದ್ದ, ಹೈಸ್ಕೂಲಿನಲ್ಲಿ ಕೊನೆಯ ಬೆಂಚಿನ ಮತ್ತೊಬ್ಬ ಪ್ರವೀಣ ಹೆಸರಿನ ಗೆಳೆಯ ಕಂಠ ಪಾಠದಲ್ಲಿ ಎತ್ತಿದ ಕೈ, ಇನ್ನು ಆಕಾಶವಾಣಿಯ ಉದ್ಘೋಷಕರಾಗಿರುವ ಪ್ರವೀಣ ಹೆಸರಿನ ಮತ್ತೋರ್ವ ಸ್ನೇಹಿತ ಮಾತು,ಕೃತಿ ಎರಡರಲ್ಲೂ ಸೈ ಎನಿಸಿಕೊಂಡವರು . ಎಲ್ಲಾ ನೆನಪುಗಳ ಮದ್ಯೆ ಮತ್ತೊಬ್ಬ ಪ್ರವೀಣ ಎಂಬ ಹೆಸರಿನ ಹುಡುಗ ದಡ್ಡನಾಗಿ ಸುದ್ದಿಯಾಗುತ್ತಿದ್ದಾನೆ!
ಈ ದಡ್ಡ ಯಾರೆಂಬ ಕುತೂಹಲ ನಿಮ್ಮಲ್ಲಿ ಇರಬಹುದು.    ಹೌದು, “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು'  ಕೊಡುಗೆ ರಾಮಣ್ಣ ರೈ ಎಂಬ ಚಿತ್ರದಲ್ಲಿ ನಾಯಕನ ಪಾತ್ರದಲ್ಲಿ  ದಡ್ಡ ಪ್ರವೀಣ ಕ್ಲಿಕ್ ಆಗಿದ್ದಾನೆ. ಈ ಹಾಡು ನೋಡಿ...

ಕನ್ನಡ ಚಿತ್ರರಂಗದ ಪ್ರಸಿದ್ಧ ಯುವ ನಿರ್ದೇಶಕ ರಿಷಬ್ ಶೆಟ್ಟಿಯವರ ನಿರ್ದೇಶನದಲ್ಲಿ ಚಿತ್ರೀಕರಣಗೊಳ್ಳಲಿರುವ ಸಿನೆಮಾ   ಗಡಿನಾಡಿನ ಕನ್ನಡ ಸಮಸ್ಯೆಯನ್ನು ಕೇಂದ್ರೀಕರಿಸಿಕೊಂಡು ಪೂರ್ಣವಾಗಿ ಕಾಸರಗೋಡಿನಲ್ಲಿ ಚಿತ್ರೀಕರಣಗೊಂಡ  ಮೊದಲ ಸಿನಿಮಾ ಇದಾಗಿದೆ .ಕಾಸರಗೋಡಿನ ಕನ್ನಡ ಭಾಷೆ, ಕಲೆ, ಸಂಸ್ಕೃತಿಯನ್ನು ವಿಶ್ವದಲ್ಲೇ ಹಬ್ಬಿಸುವುದಲ್ಲದೆ  ಕಾಸರಗೋಡಿನ ಕನ್ನಡವನ್ನು ಉಪಯೋಗಿಸಿರುವುದು ಕಳೆದ ಬಾರಿ ರಿಲೀಸ್ ಆಗಿರುವ ಹಾಡಿನಲ್ಲೇ ಗೊತ್ತಾಗುತ್ತದೆ.

ದಡ್ಡ ದಡ್ಡ ಹಾಡನ್ನು  ತ್ರಿಲೋಕ್ ವಿಕ್ರಮ್ ಪ್ರಾಸಬದ್ದವಾಗಿ   ಬರೆದಿದ್ದಾರೆ. ಹಕ್ಕಿ ಮುಟ್ಟದ ಕಾಳು ಹೊಡೆದ ಟೆನ್ನಿಸ್ ಬಾಲು..  ಎಂದು ಮುಂದುವರೆಸಿ ಹಾಡು ಬಾ ಕೊಗೀಲೆ ವೈ ಆರ್ ಯು ಸೈಲೆಂಟ್... ಅಂತ ವಿವರಿಸುತ್ತಾರೆ. ಇವೆಲ್ಲವನ್ನೂ      ವಾಸುಕಿ ವೈಭವ್ ಸಂಗೀತ ನೀಡಿ  ಧ್ವನಿಯನ್ನೂ ಸೇರಿಸಿ ಎಲ್ಲಾ ವಯೋಮಾನದವರೂ ಕೇಳುವ ಹಾಗೆ ಮಾಡಿದ್ದಾರೆ. ನಮ್ಮ ಬಾಲ್ಯದ ದಿನಗಳು, ಹದಿಹರೆಯದ ಹಂತಗಳು, ಶಾಲಾ ಜೀವನದ ಆನಂದದಾಯಕ ಸಂಗತಿಗಳು,   ಮತ್ತೆ ನಮ್ಮನ್ನು ಹಾಡು ಪ್ರಾಥಮಿಕ ಶಾಲೆಯತ್ತ ಕರೆದೊಯ್ಯುವ ಪ್ರಯತ್ನ ಮಾಡಿದಂತಿದೆ ಈತ ದಡ್ಡ ಆಗಿರುವುದಕ್ಕೆ ನನಗೇನೂ  ಬೇಸರವಿಲ್ಲ ಆತನ ಬಗ್ಗೆ ಹೆಮ್ಮೆ ಅನಿಸುತ್ತದೆ!
ರಿಷಬ್ ಶೆಟ್ಟಿಯವರು ಪ್ರವೀಣನನ್ನು ದಡ್ಡ ಮಾಡಿದ್ದು ಒಳ್ಳೆಯದೇ ಆಯಿತು. ವಿನೂತನ ಶೈಲಿಯಲ್ಲಿ ಸಿನೆಮಾ ಮಾಡುತ್ತಿರುವ ರಿಷಬ್ ಶೆಟ್ಟಿ ಬಳಗಕ್ಕೆ ಬಿಗ್  ಸೆಲ್ಯೂಟ್.