Sunday, August 21, 2016

ಮಿತಿ ಮೀರಿದ ಧ್ವನಿಯಲ್ಲಿ ಕರ್ಕಶ ಸೈರನ್‌

ನಗರದ ಆಸ್ಪತ್ರೆ, ಕೋರ್ಟ್‌ ಶಾಲಾ ವಠಾರ ಇತ್ಯಾದಿ ಪ್ರದೇಶದಲ್ಲಿ ಕರ್ಕಶ ಹಾರ್ನ್ ಹಾಕಬಾರದೆಂಬ ನಿಯಮವಿದೆ . ನಿಯಮ ಪಾಲಿಸದೆ ಇದ್ದರೆ ಹಾರ್ನ್ ಗಳನ್ನು ತೆಗೆಯುವ ಹಾಗೂ ದಂಡ ಹಾಕುವ ಕಾನೂನು ಕ್ರಮವನ್ನು ಕೈಗೊಳ್ಳವ ಅಧಿಕಾರ ಸಂಚಾರಿ ವಿಭಾಗದವರಿಗೆ ಇದೆ . ಕರ್ಕಶ ಹಾರ್ನ್ ಮೊಳಗಿಸಿ ಸಾರ್ವಜನಿಕರಿಗೆ ಕಿರಿ ಕಿರಿ ಉಂಟುಮಾಡುವ ಖಾಸಗಿ ಬಸ್ಸುಗಳಿಗೆ ಎಚ್ಚರಿಕೆ ನೀಡಿದ ಸಂದರ್ಭವನ್ನು ನಾನು ನೋಡಿದ್ದೆನೆ .ಆದರೆ ಇಂದು ಮಧ್ಯಾಹ್ನ ಹಂಪನಕಟ್ಟೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು .ನಾನು ಟ್ರಾಫಿಕ್ ನಲ್ಲಿ ಸಿಲುಕಿಕೊಂಡಿದ್ದೆ. ಆ ಸಮಯದಲ್ಲಿ ಸರ್ಕಾರದ ನಾಮ ಫಲಕವಿದ್ದ ಕೆಂಪು ಗೂಟದ ಕಾರು ನಗರದ ಟೌನ್ ಹಾಲ್ ನಿಂದ ಬಾವುಡಗುಡ್ದೆಯ ವರೆಗೆ ಮಿತಿ ಮೀರಿದ ಧ್ವನಿಯಲ್ಲಿ ಕರ್ಕಶ ಸೈರನ್‌ ಹಾಕುತಿತ್ತು 
.ಟ್ರಾಫಿಕ್ ಜಾಮ್ ಎಂದು ಅದರೊಳಗೆ ಇದ್ದ ಚಾಲಕ ಮತ್ತು ಮಹಾನಿಯರಿಗೂ ಗೊತ್ತಿದೆ .ಇದು ಸಾರ್ವಜನಿಕರಿಗೆ ತೊಂದರೆ ಆಗುವುದಿಲ್ಲವೇ? ರಾಜಕಾರಣಿ ಅಥವಾ ಸರ್ಕಾರಿ ವಾಹನಕ್ಕೆ ಪ್ರತ್ಯೇಕ ನಿಯಮವಿದೆಯೇ? ಬೇಲಿಯೆ ಎದ್ದು ಹೊಲ ಮೇಯುತ್ತಿದೆ...... ಇಂಥ ಸೈರನ್‌ಗಳು ಆ್ಯಂಬುಲೆನ್ಸ್, ಪೊಲೀಸ್, ಅಗ್ನಿಶಾಮಕ ವಾಹನಗಳು ಮತ್ತು ಆರ್ಮಿ ವಾಹನಗಳಲ್ಲಿ ಮಾತ್ರ ಬಳಕೆಯಾಗಬೇಕು . ಕಾರುಗಳಿಂದ ಮೊಳಗುವ ಸೈರನ್ ಬಗ್ಗೆಯೂ ಕೋರ್ಟ್ ಕಿಡಿಕಾರಿದನ್ನು ಇಲ್ಲಿ ಉಲ್ಲೇಖಿಸುತ್ತೆನೆ. ಟ್ರಾಫಿಕ್ ನಿಯಮ ಗಾಳಿಗೆ ತೂರುವ ಅದರಲ್ಲೂ ಅನಗತ್ಯವಾಗಿ ಗೂಟದ ಕಾರು ಬಳಸುವವರ ವಿರುದ್ಧ 10 ಸಾವಿರದ ವರೆಗೆ ದಂಡ ವಿಧಿಸುವ ಸಂಬಂಧ ಕಾನೂನಿಗೆ ತಿದ್ದುಪಡಿ ತರಬೇಕು ಎಂದು ಕೋರ್ಟ್ ಸೂಚನೆ ನೀಡಿರುವುದನ್ನು ಇಲ್ಲಿ ನೆನಪಿಸಿ ಕೊಳ್ಳಬಹುದು.

No comments:

Post a Comment