Sunday, August 21, 2016

ಹೊರ ಜಿಲ್ಲೆಯ ಪೋಲಿಸರ ಜೊತೆ ತುಳುವಿನಲ್ಲಿ ಮಾತುಕತೆ

 ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಸಿಬ್ಬಂದಿಗಳಿಗೆ ಸುಲಲಿತವಾಗಿ ಕರ್ತವ್ಯ ನಿರ್ವಹಿಸಲು ತುಳು ಭಾಷೆ ಕಲಿಕಾ ತರಬೇತಿಯನ್ನು ಮಂಗಳೂರು ನಗರ ಪೊಲೀಸ್ ಆಯುಕ್ತರ ಕಛೇರಿ ಸಭಾಂಗಣದಲ್ಲಿ ಮೊನ್ನೆ 10 ದಿನಗಳ ಕಾಲ ಆಯೋಜಿಸಲಾಗಿತ್ತು. .ಸದ್ರಿ ಕಾರ್ಯಾಗಾರದಲ್ಲಿ ಮಂಗಳೂರು ನಗರದ 22 ಸಿಬ್ಬಂದಿಗಳು ಭಾಗವಹಿಸಿದ್ದರು. ತುಳು ಕಲಿಕೆ ಕಾರ್ಯಗಾರದಲ್ಲಿ ಭಾಗವಹಿಸಿದ ಕೆಲವು ಪೊಲೀಸರನ್ನು ನಾನು ಮಾತಾಡಿಸಿದೆ.ಯಾವುದೇ ಸಂಕೊಚವಿಲ್ಲದೆ ಆಪ್ತವಾಗಿ ತುಳುವಿನಲ್ಲಿ ಮಾತಿಗೆ ಆರಂಭಿಸಿದರು. ಇನ್ನು ಕೆಲವರು ಆಲೋಚಿಸಿ ಮಾತಾಡಿದರು. ಓರ್ವ ಸಿಬ್ಬಂದಿಗೆ ಕುಡ್ಲದಲ್ಲಿ ಪೊಲೀಸ್ ಸೇವೆಗೆ ಸೇರಿದಾಗ ತುಳು ಭಾಷೆ ಬಾರದೆ ಕೆಲಸವೇ ಬೇಡ ಎನ್ನುವ ನಿರ್ಧಾರಕ್ಕೆ ಬಂದಿದ್ದರಂತೆ!.ಈಗ ಸುಧಾರಿಸಿಕೊಂಡಿದ್ದಾರೆ.

ಹೊರ ಜಿಲ್ಲೆಯಿಂದ ಬಂದಿರುವ ಪೊಲೀಸರು ತುಳು ಭಾಷೆಯ ಬಗ್ಗೆ ಅಭಿಮಾನ ಮಾತ್ರವಲ್ಲದೆ,ಭಾಷೆಯನ್ನು ಕಲಿಯಲು ಆಸಕ್ತಿಯನ್ನು ಹೊಂದಿದ್ದಾರೆ.ತುಳುವಿನಲ್ಲಿ ದಾನೆಂಬೆ,ಮಂಡೆ ಸಮ ಇಜ್ಜ,ವನಸ್ ಆಂಡಾ?,ಶಬ್ಧಗಳು ಇವರಿಗೆ ಬಹಳ ಇಷ್ಟ.ತಮ್ಮ ತಮ್ಮ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳ ಜೊತೆ ಮಾತನಾಡಿ ಅಭ್ಯಾಸ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಜೊತೆಗೆ ವಾಟ್ಸಪ್ ನಲ್ಲಿ ಗ್ರೂಪ್ ಮಾಡಿಕೊಂಡು ಮಾತು ಕತೆ ವಿನಿಮಯ ಮಾಡಿಕೊಳ್ಳುತ್ತಾರೆ.
ಪೊಲೀಸರು ಜನ ಸ್ನೇಹಿಯಾಗಲು ಸ್ಥಳೀಯ ಭಾಷೆಯೂ ಕಾರಣವಾಗುತ್ತದೆ ಎಂಬುದನ್ನು ಮನಗಂಡು ತುಳು ಕಲಿಕೆಯ ಬಗೆಗೆ ಮನಸು ಮಾಡಿದ Chandra sekhar M IPS
Commissioner of Police,K M Shantharaju KSPS
DCP (L & O)ಹಾಗೂ ಎಲ್ಲಾ ಅಧಿಕಾರಿಗಳಿಗೆ ಅಭಿನಂದನೆಗಳು.
ಇದು ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಮಾತ್ರ ಸೀಮಿತವಾಗಿರದೆ, ಹೊರ ಜಿಲ್ಲೆಗಳಿಂದ ಬಂದಿರುವ ಇತರ ಇಲಾಖೆಗಳಲ್ಲಿ ಇರುವವರು ತುಳು ಕಲಿತರೆ ಅನುಕೂಲವಾಗುತ್ತದೆ.ಉದಾ:-ಮಂಗಳೂರಿನ ಸೆಂಟ್ರಲ್ ರೈಲು ನಿಲ್ಧಾಣದ ಸಿಬ್ಬಂದಿಗಳಿಗೆ ತರಬೇತಿ ನೀಡಿದರೆ ಮಲಯಾಲಂ ದಬ್ಬಾಲಿಕೆ ಕಮ್ಮಿಯಾಗಬಹುದು!
ಬಲೆ ತುಳು ಕಲ್ಪಾಗ ತುಳು ಭಾಷೆ ಒರಿಪ್ಪಗಾ!!

No comments:

Post a Comment