ತಿಂಡಿ ಕೊಟ್ಟರೆ ತಿನ್ನದೆ ಮನಸು
ಬರುತ್ತಾ? ಇಲ್ಲ ಬಿಡಿ ! ಮೊನ್ನೆ
ನನ್ನ ಸ್ನೇಹಿತ ನ ಜೊತೆ ಕಡಬದಲ್ಲಿರುವ
ಆತ್ಮೀಯ ಮತ್ತೋರ್ವ ಸ್ನೇಹಿತರ ಮನೆಗೆ ಹೋಗಿದ್ದೆವು . ಕೆಲವು
ಕಾರ್ಯಕ್ರಮಗಳ ಬಗ್ಗೆ ವಿವರವಾದ ಚರ್ಚೆ
ಕೂಡ ಆಯ್ತು . ಮಾತಿನ ನಡುವೆ
ಆಗಾಗ ಕಾಫಿ ಹೀರುತ್ತಾ ಮಾತು ಮುಂದುವರೆಸಿದೆವು. ಅದು ಒಂದು ಗಂಟೆಯ
ಮಾತುಕತೆಯಲ್ಲ .ಒಂದು ದಿನದ ಮಾತುಕತೆ
!! ಅಲ್ಲಿ ಕೆಲವು ಕಲಾವಿದರೂ ಕೂಡ ಸೇರಿದ್ದರು .ಅವರ ಅನುಭವ ದ
ಮಾತುಗಳಿಗೆ ನಾವು ಕಿವಿಯಗಿದ್ದೆವು . ಮಧ್ಯಾಹ್ನದ
ಊಟ ಕ್ಕೆ ತೊಂಡೆಕಾಯಿ
ಗೊಜ್ಜು ,ಸಿಂಪಲ್ ಒಂದು ಸಾರು
,ಜೊತೆಗೆ ಮನೆಯಲ್ಲೇ ತಯಾರಿಸಿದ ಮಾವಿನ ಉಪ್ಪಿನಕಾಯಿ ಹೊಟ್ಟೆ
ಪೂರ್ತಿಯಾಯಿತು . ಮತ್ತೆ ಕೆಲವು ಹಾಡುಗಳನ್ನು
ಧ್ವನಿ ಮುದ್ರಣ ಮಾಡುತ್ತಾ ಸಮಯ
ಕಳೆದದ್ದೇ ಗೊತ್ತಾಗಲಿಲ್ಲ .ರಾತ್ರಿ ಒಂಭತ್ತು ಗಂಟೆ . ಅದು ಊಟ
ದ ಸಮಯ ಬೇರೆ
. ಅಷ್ಟರಲ್ಲಿ ಬಂದು
ನೋಡಿ ಬಿಸಿ
ಬಿಸಿ ಸೇಮಗೆ . ಜೊತಗೆ ಬಾಳೆಹಣ್ಣಿನ
ರಸಾಯನ .
ಚಿತ್ರ http://www.tulunadunews.com |
ಈ ಸೇಮಗೆ ಬಗ್ಗೆ ಏನು
ಹೇಳ ಹೊರಟಿರುವೆನೆಂದರೆ ನಮ್ಮ
ತುಳುನಾಡಿನಲ್ಲಿ ಒಂದು ಸಂಪ್ರದಾಯ ಯಾರಾದರೂ ನೆಂಟರು ತುಂಬಾ
ದಿನ ಇದ್ದರೆ ಅವರನ್ನು
ಹೋಗಿ ಎಂದು ಬಾಯಿಬಿಟ್ಟು ಹೇಳಲು ಸಾಧ್ಯವಾಗದು
,ಆದ್ರೆ ಹೋಗಿ ಎನ್ನುವ ಸಂಕೇತವಾಗಿ
ಸೇಮಗೆಯನ್ನು ಮಾಡಿ ಕೊಡುವುದು ರೂಢಿ
. ಅದೇ ಸನ್ನಿವೇಶ ನಿರ್ಮಾಣವಾಯ್ತೆನೊ ಅಂತ
ನಾನು ನನ್ನ ಸ್ನೇಹಿತ ಮುಖ
ಮುಖ ನೋಡಿಕೊಂಡು ಜೋರಾಗಿ ನಕ್ಕು ಬಿಟ್ಟೆವು
. ಆಗ ಸೇಮಗೆ ಮಾಡಿಕೊಟ್ಟ
ಮನೆಯವರು ಇದು ಹೋಗಿ ಎನ್ನುವುದರ
ಸಂಕೇತವಲ್ಲ ಮತ್ತೆ ಮತ್ತೆ ಬನ್ನಿ
ಎನ್ನುವುದಕ್ಕಾಗಿ ಅಂದಾಗ ನಮಗೆ
ಮತ್ತೂ ಜೋರಾದ ನಗು .ಸೇಮಗೆ ತಿಂದರೂ ಮತ್ತೂ ಮಾತುಕತೆಯಲ್ಲಿ ತೊಡಗಿದೆವು
. ಆಗ ನನ್ನ ಸ್ನೇಹಿತ ಹೇಳಿದ
"ದಾದಾ ಮರಯೇರೆ ಸೆಮೆ ಕೊರುಂಡಲಾ
ಪಿದಡುನ ತೋಜುಜಿ ಅತ್ತ
"(ಸೇಮಗೆ ಕೊಟ್ಟರೂ ಹೊರಡುವ ಲಕ್ಷಣ
ಕಾಣುತ್ತಿಲ್ಲ )ಅಂತು ಹೊಟ್ಟೆ ತುಂಬಾ
ಸೇಮಗೆ ತಿಂದು ಮನೆದಾರಿ ಹಿಡಿದೆವು
. ನಾನು
ನನ್ನ ಸ್ನೇಹಿತ ಫೋನಿನಲ್ಲಿ ಮಾತಾಡುವಾಗ
ಪದೇ ಪದೇ ಸೇಮಗೆಯ
ಸುದ್ದಿಯನ್ನು ಹೇಳಿ ನಗುವಿನ ಲೋಕಕ್ಕೆ
ಜಾರಿ ಹೋಗುತ್ತೇವೆ .
No comments:
Post a Comment