Tuesday, December 06, 2016

ಮೊದಲ ಶಾಲೆಯ ಮಧುರ ನೆನಪುಗಳು

ಮನೆಯೇ ಮೊದಲ ಪಾಠ ಶಾಲೆ ,ತಾಯಿಯೇ ಮೊದಲ ಗುರು ಇದೆಲ್ಲವೂ  ಸತ್ಯ ಆದರೆ ,ಮಕ್ಕಳ ಜೊತೆ ಬೆರೆತು ಕಲಿಯಲು ಮೊದಲ ಶಾಲೆ ಕೂಡ  ಬೇಕಾಗುತ್ತೆ ಅಲ್ವೇ
ನನ್ನ ಮನೆಯಿಂದ ಕೇವಲ ಹತ್ತು ನಿಮಿಷ ನಡೆದರೆ ಸಾಕು ನನ್ನ ಶಾಲೆ  ಸಿಗುತ್ತದೆ. ಸ್ಲೇಟು ಬಳಪ ದೊಂದಿಗೆ ಚಡ್ಡಿ ಹಾಕಿಕೊಂಡು ಓ೦ತ್ರಡ್ಕ ಶಾಲೆಗೆ  ಹೋಗಿದ್ದೆ  .ನಾನು ಕಲಿಯುತ್ತಿರುವ ಸಂದರ್ಭದಲ್ಲಿ 1 ರಿಂದ 7ನೇ  ತರಗತಿ ವೆರೆಗೆ ಇತ್ತು . ಈಗ 8 ನೇ ತರಗತಿಯನ್ನು ಹೊಂದಿದೆ . ನಾನು 2 ನೇ  ತರಗತಿಯಲ್ಲಿ ಇದ್ದಾಗ ನನ್ನ ದೊಡ್ಡಮ್ಮನ ಮಗಳುಕ್ಲಾಸು ಓದುತಿದ್ದರು . ಆಗ ಎಲ್ಲ ಮಕ್ಕಳಿಗೂ ಬಿಸಿ ಬಿಸಿ ಹಾಲು  ಸಿಗುತ್ತಿತ್ತು . ನನ್ನ ಅಕ್ಕ ಹಾಲು ಹಂಚಲು ಇರುತ್ತಿದ್ದರು . ಕೆಲವೊಮ್ಮೆ ನನಗೆ ಸಲ್ಪ ಹೆಚ್ಚು ಅಂದರೆ ಮುಕ್ಕಾಲು ಗ್ಲಾಸು ಹಾಲು ಸಿಗುತಿತ್ತು .ಈಗಿನ ಭಾಷೆಯಲ್ಲಿ ಹೇಳುವುದಾದರೆ ಇಂಪ್ಲೆನ್ಸ್!
ನನಗೆ ಬಳಪ ವನ್ನು ಕೈಯಲ್ಲಿ ಹಿಡಿದು ಬರೆಸಿದ್ದು ವೀಣಾ ಟೀಚರ್ . ನನ್ನ ಪ್ರಾಥಮಿಕ ಶಿಕ್ಷಣ ಮುಗಿದು ಸುಮಾರು 13ವರ್ಷ ಕಳೆದರೂ  ಟೀಚರ್ ಇದೇ ಶಾಲೆಯಲ್ಲಿ ಈಗಲೂ ಇದ್ದಾರೆ. ನನಗೆ ಗಣಿತ ವೆಂದರೆ ಕಬ್ಬಿಣದ ಕಡಲೆ ! ಆಗ ಯಮುನಾ ಟೀಚರ್ ಇದ್ದರು .ಅವರ ಒಂದೊಂದು ಗಾಳಿ ಬೆತ್ತದ ಪೆಟ್ಟಿಗೆ ಏಷ್ಟೋ  ಬಾರಿ ಶಾಲೆಗೇ ಚಕ್ಕರ್ ಹಾಕಿದ್ದು ಉಂಟು . ಜೊತೆಗೆ ಲೆಕ್ಕಗಗಳೆಲ್ಲ ಬೇಗನೆ ತಲೆಗೆ ಹೋಗುತ್ತಿತ್ತು !  ಟೀಚರ್ ಮಾತ್ರ ಹೋದಾಗ ಕ್ಲಾಸಿನಲ್ಲಿ ನಾವೆಲ್ಲರೂ ಅಳುತಿದ್ದದನ್ನು ನೋಡಿ  ಶಾಲೆಯ ಮುಖ್ಯ ಶಿಕ್ಷಕರು ಕ್ಲಾಸಿಗೆ ಬಂದು ಜೋಕು ಹೇಳಿ ನಮ್ಮೆರನ್ನು ನಗಿಸಿದ್ದು ಈಗಲೂ ನೆನಪಿದೆ . ನನ್ನ ಅಕ್ಕ ಕುಸುಮ .ನನ್ನ ಅಕ್ಕನನ್ನು ಮತ್ತು ನನ್ನನ್ನು ಒಂದೇ ಸಮಯದಲ್ಲಿ ಶಾಲೆಗೆ  ಸೇರಿಸಿದ ಕಾರಣ 1ರಿಂದ 6 ತನಕ ಒಟ್ಟಿಗೆ ಇದ್ದೆವು . ಅಕ್ಕ 6 ನೇ  ಕ್ಲಾಸಲ್ಲಿ ಫೈಲ್ಆಗ ನನಗೆ ಕೊಡು ಬಂದದ್ದು ಮಾತ್ರ ಅಷ್ಟಿಷ್ಟಲ್ಲ . ಆರ್ಥಿಕ ಕಾರಣದಿಂದ ಮತ್ತೆ ಅಕ್ಕನ ಓದು ಮುಂದುವರಿಯಲಿಲ್ಲ .
ನಾನು ನೀರಾವರಿ ಮಂತ್ರಿಯಾಗಿ
ಶಾಲೆಯಲ್ಲಿ ನನಗೆ ನೀರಾವರಿ ಮಂತ್ರಿ ಮಂತ್ರಿ ಸ್ಥಾನವೂ ಸಿಕ್ಕಿತ್ತು . ಶಾಲೆಯ ಬಾವಿಯಿಂದ ನೀರು ಎಳೆದು ನಾನೇ ಕೊಡುತ್ತಿದ್ದೆ. ಮತ್ತೆ ಶಾಲೆಯ ಮುಂದೆ ಇದ್ದ ತೆಂಗಿನ ಮರಗಳಿಗೆ ನೀರು ಹಾಕಲು ಇತ್ತು . ಮಣ್ಣಿನ ಮಡಕೆಅದಕ್ಕೆ ಒಂದು ಸಣ್ಣ ತೂತು ಅದಕ್ಕೆ ಮೂರು ಕೊಡಪಾನ ನೀರು ಹಾಕಲು ಇತ್ತು .ಸ್ನೇಹಿತರೆಲ್ಲ  ಸೇರಿ ಕೆಲಸವನ್ನು ಮಾಡುತ್ತಿದ್ದೆವು . ಅನೇಕ ಕೊಡಪಾನ ಬಾವಿಯಲ್ಲಿ ಬಾಕಿ ಆಗಿದ್ದು ಇದೆ .ಮತ್ತೆ ಮಧ್ಯಾಹ್ನದ ಸಮಯದಲ್ಲಿ ಬುತ್ತಿ ತೊಳೆಯಲು ಹೋಗಿ ಅದರ ಮುಚ್ಚಳ ಬಾವಿಗೆ ಬಿದ್ದಾಗ  ಅದನ್ನು ತೆಗೆಯಲು ದೊಡ್ದ ಸಹಾಸವನ್ನೇ ಮಾಡುತ್ತಿದ್ದೆವು . ಸಮಯದಲ್ಲಿ ಹೆಚ್ಚಾಗಿ ಅಲ್ಯುಮಿನಿಯಂ ಬುತ್ತಿಗಳೇ  ಇರುತಿತ್ತು . ನನ್ನ ಮತೊರ್ವ ಸ್ನೇಹಿತ ಜನಾರ್ಧನ . ಸಾಯಂಕಾಲ ಆತ ನನ್ನ ಮನೆಗೆ ಬಂದು ಹಾಡು ಕೇಳುತಿದ್ದ . ಆಗ ನಮ್ಮ ಮನೆಯಲ್ಲಿ ಕ್ಯಾಸೆಟ್ ಹಾಕುವ ಟೇಪ್  ರೆಕಾರ್ಡರ್  ಇತ್ತು ."ಇಲ್ಲದ ಯಾಜಮಾನ ಪೋದು ಬರ್ಕ ಇಲ್ಲಗ್ 'ಹಾಡನ್ನು ಜತೆಸೇರಿ ಕೇಳುತ್ತಿದ್ದದ್ದು ಈಗ ನೆನಪು ಮಾತ್ರ.
ತಿಂದ ನೆಲ್ಲಿಕಾಯಿ ವಾಪಾಸು ಬಂದಾಗ !
 ಇದೊಂದು ಮಾತ್ರ ಮರೆಯಲಾಗದ ಅನುಭವ . ಆಗಷ್ಟೆ 7ನೇ  ಕ್ಲಾಸಿಗೆ ತೇರ್ಗಡೆ ಗೊಂಡ ಸ೦ಭ್ರಮ  .ನಾವೇ ಹಿರಿಯರೆಂಬ ಜಂಬ ಬೇರೆ!! . ಮಧ್ಯಾಹ್ನ ಊಟದ ಸಮಯದಲ್ಲಿ  ಸ್ನೇಹಿತರು ಸೇರಿ ಪಕ್ಕದ ಗುಡ್ದದಲ್ಲಿದ್ದ ನೆಲ್ಲಿಕಾಯಿ ಮರಕ್ಕೆ ಏರಿದೆವು . ಸಮಯದಲ್ಲಿ ಅಲ್ಲಿಯ ಕೆಲಸದವರು ಓಡಿಸಿಕೊಂಡು ಬಂದರು . ಸಿಕ್ಕ ನೆಲ್ಲಿಕಾಯಿ ಹಿಡಿದುಕೊಂಡು ಹೇಗೋ ಬೇಲಿ ಹಾರಿ ಬಂದೆವು . ವಿಷಯವನ್ನು ಮನೆಯವರು ಶಾಲೆಗೆ ಫೋನ್ ಮಾಡಿ ಹೇಳಿದರು .ನಾವು ಬರುವ ದಾರಿಯಲ್ಲಿ ನಮ್ಮ ಹೆಡ್  ಮಾಸ್ತರ್ ಸಿಪ್ಪೆ ತೆಗೆದ ಗಾಳಿಯ ಬೆತ್ತ ಹಿಡಿದು ಕಾಯುತ್ತಿದ್ದರು . ಕೈಗೆ.ಬೆನ್ನಿಗೆ ಬಿಸಿ ಬಿಸಿ ಪೆಟ್ಟು ಬಿದ್ದ ಆಗಿನ ಅನುಭವ ಈಗಲೂ  ಬೆನ್ನು ತುರಿಸುವಂತೆ ಮಾಡುತ್ತದೆ !ಕೊನೆಗೆ ನೆಲ್ಲಿಕಾಯಿಯನ್ನು ಕಿಸೆಯಿಂದ ಕೈ ಹಾಕಿ ಮತ್ತೋ ರ್ವ  ಶಿಕ್ಷಕರು ತೆಗೆದರು . ಅಂದಿನಿಂದ ಇಂದಿನವರೆಗೂ  ನೆಲ್ಲಿಕಾಯಿ ಕದ್ದು ತಿಂದಿಲ್ಲ . ಆಗಿನ ಪೆಟ್ಟು ನಿಜಕ್ಕೂ ಮರೆಯಲಾಗದು ಉದ್ದನೆಯ ಗಾಳಿಯ ಬೆತ್ತ ತರಲು  ನನ್ನಲ್ಲೇ  ಹೇಳುತ್ತಿದ್ದರು ,ಮತ್ತೆ ತಪ್ಪು ಮಾಡಿದಾಗ ಅದೇ ಬೆತ್ತದಿಂದ  ಬಿಸಿ ಏಟು . ಬೀಳುವ ಪೆಟ್ಟು ಕಡಿಮೆಯಾಗಲೆಂದು ನಾನೇ  ಬೆತ್ತ  ತರುತ್ತಿದ್ದೆ ಆದ್ರೆ ಏನ್ ಮಾಡೋದು ಹೇಳಿ  ವೇದ ಸುಳ್ಳಾದರು ಗಾದೆ ಸುಳ್ಳಲ್ಲ !
ಕ್ರೀಡಾ ಪಟುವಾಗಿ
ನಾನು ಓರ್ವ ಕ್ರೀಡಾ ಪಟು ಅಂತ ಹೇಳೋದಕ್ಕೆ ಹೆಮ್ಮೆ ಆಗುತ್ತಿದೆ . ಖೋ ಖೋ  ಕಲಿತದ್ದೇ ಓ೦ತ್ರಡ್ಕ ಶಾಲೆಯಲ್ಲಿ  . ಅನೇಕ ಖೋ ಖೋ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ . ಡೈ  ಬೀಳುವುದರಲ್ಲಿ ನನಗೂ ಒಂದು ಹೆಸರು ಇತ್ತು . ಎಲ್ಲೂ ಪ್ರಕಟ ಪಡಿಸದ ನನ್ನ ಮನದಾಳಾದ  ಮಾತುಗಳಿಗೆ ನನ್ನ ಬ್ಲಾಗ್ ಅವಕಾಶ ಮಾಡಿಕೊಟ್ಟಿತು .ಆಗಿದ್ದ ಈಗ ನನ್ನ ಶಾಲೆ ತುಂಬಾ ಬೆಳೆದಿದೆ ಬಹಳ ವಿಸ್ತಾರವಾದ ಆಟದ ಮೈದಾನವಿದೆ . ಶೌಚಾಲಯ ವಿದೆ .ಉತ್ತಮ ಶಿಕ್ಷಕ ವರ್ಗ ವಿದೆ .

No comments:

Post a Comment