Wednesday, January 25, 2017

ಕಿದರೆ ಬಯ್ಯಾ..ಜಲ್ದಿ ಜಲ್ದಿ...!

ಬಸ್ಸಿನಲ್ಲಿ ಕಂಡಕ್ಟರ್ ಗಳ ಜವಾಬ್ದಾರಿ ಮುಖ್ಯವಾದುದು.ಸಮಯ ಪಾಲನೆಯ ಜೊತೆಗೆ ವ್ಯವಸ್ಥಿತ ರೀತಿಯಲ್ಲಿ ಪ್ರಯಾಣಿಕರನ್ನು ಹತ್ತಿಸಿ ಕೊಳ್ಳುವುದು ಮತ್ತು ಇಳಿಸುವುಸು.ಆದರೆ ಮಂಗಳೂರು ನಗರದಲ್ಲಿ ಓಡಾಡುವ ಸಿಟಿ ಬಸ್ಸುಗಳಲ್ಲಿ ಕೆಲವು ಕಂಡೆಕ್ಟರ್ ಗಳ ವರ್ತನೆ ಒಮ್ಮೊಮ್ಮೆ ವಿಚಿತ್ರವಾಗಿರುತ್ತದೆ.ಪ್ರಯಾಣಿಕರ ಎದುರಿನಲ್ಲಿಯೇ ಗುಟ್ಕಾ ತಿನ್ನೋದು.ತಂಬಾಕು ಉತ್ಪನ್ನವನ್ನು ಬಸ್ಸಿನ ಡೋರಿನಲ್ಲಿ ನಿಂತು ಕೈಯಲ್ಲಿ ಉಜ್ಜಿ ತುಟಿಯೊಳಗೆ ಇಟ್ಟುಕೊಳ್ಳುವುದು.ಇದೆಲ್ಲ ಅಸಹ್ಯವೆನಿಸುತ್ತದೆ.ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮತ್ತು ಮಧ್ಯಪಾನ ಮಾಡಬಾರದೆಂಬ ಕನಿಷ್ಠ ಅರಿವು ಇಲ್ಲದಂತೆ ವರ್ತಿಸುತ್ತಾರೆ.ಇದರ ಜೊತೆಗೆ ಪ್ರಯಾಣಿಕರೊಂದಿಗೆ ಗೌರವದ ಶಬ್ದಗಳನ್ನು ಬಳಸುವ ಬದಲು ಏಕವಚನದಲ್ಲಿಯೇ ಸಂಭಾಷಿಸುತ್ತಾರೆ. ಇನ್ನೊಂದು ನಂಬರಿನ ಬಸ್ಸು ಓವರ್ ಟೇಕ್ ಮಾಡಿದರೆ ಸೈತೆ ಮೂಜಿಕಾಸ್ದಯೆ...ಬ್ಯಾ....ಇತ್ಯಾದಿ ಶಬ್ದ ಉಪಯೋಗಿಸುವವರೂ ಇದ್ದಾರೆ ಹೊರರಾಜ್ಯದಿಂದ ಕಾರ್ಮಿಕರು ವಲಸೆ ಬಂದ ಕಾರಣ ತುಳು ಮರೆತು ಹಿಂದಿಯಲ್ಲಿಯೇ ಬಹುತೇಕರಲ್ಲಿ ಟಿಕೇಟು ಕೇಳುತ್ತಾರೆ.ತುಳುವರನ್ನೂ ಕಿದರೆ ಬಯ್ಯ ಎಂದು ಮುಖ ನೋಡುತ್ತಾರೆ! ತುಳುವನ್ನೆ ಮರೆಯುತ್ತಾರೆ!!

ಶಾಲಾ ಮಕ್ಕಳ ಜೊತೆ ಸಲುಗೆಯಿಂದ ವರ್ತಿಸುವಾಗ ವಿಚಿತ್ರ ಅನಿಸುತ್ತದೆ(ಬಸ್ಸಿನಲ್ಲಿ ದಿನಾ ಬರುವವರು ಆಪ್ತರಾಗಿದ್ದರೂ ಅದನ್ನು ಸಾರ್ವಜನಿಕವಾಗಿ ಸ್ನೇಹಿತರೆಂದು ಗುರುತಿಸಬೇಕೆಂದೆನೂ ಇಲ್ಲ) ಭಾಷೆಗೊತ್ತಿಲ್ಲದ ಪ್ರಯಾಣಿಕರು ಬಂದರೆ ಅವರನ್ನು ತುಳುವಿನಲ್ಲಿ ತಮಾಷೆಯ ವಸ್ತುವಿನಂತೆ ಪರಿಗಣಿಸಿ ಜೊತೆಗೆ ಚಿಲ್ಲರೆ ಕೊಡದೆ ಸತಾಯಿಸುತ್ತಾರೆ. ಕೆಲವೊಮ್ಮೆ ತಮ್ಮ ಬಳಗದ ಸ್ನೇಹಿರೆಂದುಕೊಂಡವರು ಬಸ್ಸಿನ ಎರಡೂ ಬಾಗಿಲಿನಲ್ಲಿ ನೇತಾಡಿಕೊಂಡು ಬೊಬ್ಬೆ ಹೊಡೆಯುತ್ತಾರೆ. ನಾನು ಎಲ್ಲಾ ಕಂಡಕ್ಟರ್ ಗಳನ್ನು ದೂರುವುದಿಲ್ಲ. ಅನುಭವಿಗಳು ಶಿಸ್ತುಬದ್ದವಾಗಿ ಇರುತ್ತಾರೆ. ಹೊಸದಾಗಿ ಸೇರಿಕೊಳ್ಳುವ ಕಂಡಕ್ಟರ್ ಗಳಿಗೆ ತರಬೇತಿಯ ಅವಶ್ಯಕತೆ ಇದೆ ಎಂದು ತೋರುತ್ತಿದೆ.ಸಾರ್ವಜನಿಕವಾಗಿ ಬಳಸುವ ಭಾಷೆ ಮತ್ತು ನಡೆದುಕೊಳ್ಳುವ ರೀತಿ ಇತರರಿಗೆ ಮಾದರಿಯಾದರೆ ಒಳ್ಳೆಯದಲ್ಲವೆ? ಪ್ರಯಾಣಿಕರ ಬಗ್ಗೆ ಮುಂದಿನವಾರ ಬರೆಯುವೆ. ನಮಸ್ಕಾರ

No comments:

Post a Comment