ಕವಿಯ ಸೃಜನೆ ನಿಂತಲ್ಲಿಯೇ ನಿಲ್ಲುವುದಿಲ್ಲ ಇದು ಇತ್ಯಾತ್ಮಕ ಅಂಶ ಎಂಬುದನ್ನು ಹಾಡು ಹುಟ್ಟುವ ಸಮಯ ಕಾರ್ಯಕ್ರಮ ಮಗದೊಮ್ಮೆ ಸಾಬೀತುಪಡಿಸಿದೆ. ನಿನ್ನೆ ಮಂಗಳೂರಿನ ಪುರಭವನದಲ್ಲಿ ಸಹೊದ್ಯೋಗಿ ಮಿತ್ರ ಅಭಿಷೇಕ್ (Abhishek Shetty)ಅವರ ನಾಯಕತ್ವದಲ್ಲಿ Team Black & White ತಂಡದಿಂದ ಹಮ್ಮಿಕೊಂಡ ಕಾರ್ಯಕ್ರಮವಿದು. ಭಾವಗೀತೆಗಳ ಸಾಗರದಲ್ಲಿ ಮಿಂದೆದ್ದ ಜನರು ಖ್ಯಾತ ಕವಿಗಳಾದ Dr HS Venkatesh Murthy ಮತ್ತು BR Lakshman Rao ಅವರು ಬರೆದ ಭಾವಗೀತೆಗಳಲ್ಲಿ ಬಂಧಿಯಾದರು. ಬುದ್ದಿ-ಭಾವಗಳ ಸರಿಸಮಾನವಾದ ಹೊಂದಾಣಿಕೆಯ ಪ್ರೇಕ್ಷಕರು, ಅಬ್ಬರವಿಲ್ಲದ ಸಂಗೀತ,ಆಡಂಬರವಿಲ್ಲದ ವೇದಿಕೆ ಕಾರ್ಯಕ್ರಮ್ಮಕ್ಕೆ ಹೊಸ ಆಯಾಮ ನೀಡಿತ್ತು.
ಗಾಯಕರಾದ Ravi muroor, Dr Nitin Acharya, Shruti, Rashmi, Mahesh ರವರ ಇಂಪು ದನಿಗೆ ಮನಸುಗಳು ಅರಳಿ ಭಾವಸಂಗಮವಾಗಿತ್ತು .ನಿರೂಪಣೆಯಲ್ಲಿ ಭಾವ ಗೀತೆಗಳಲ್ಲಿನ ಶಬ್ಡ ದ ವಿಶಾಲ ಅರ್ಥವನ್ನು ವಿವರಿಸುತ್ತಾ Manohar Prasad ರವರು ಕವಿ ಮೂಖ ಬ್ರಹ್ಮನಲ್ಲ ಶಬ್ದ ಬ್ರಹ್ಮ ಎಂಬುದನ್ನು ಗೊತ್ತುಪಡಿಸಿದ್ದು ಹೊಸ ಬಗೆಯೆ ಸರಿ.ಇದು ಕರಾವಳಿ ಭಾಗಕ್ಕೆ ವಿನೂತನ ಕಾರ್ಯಕ್ರಮ.ಮೊದಲ ಪ್ರಯತ್ನದಲ್ಲೆ ಯಶಸ್ಸುಕಂಡದ್ದು ಹೆಮ್ಮೆಯ ವಿಷಯ,
ಗಾಯಕರಾದ Ravi muroor, Dr Nitin Acharya, Shruti, Rashmi, Mahesh ರವರ ಇಂಪು ದನಿಗೆ ಮನಸುಗಳು ಅರಳಿ ಭಾವಸಂಗಮವಾಗಿತ್ತು .ನಿರೂಪಣೆಯಲ್ಲಿ ಭಾವ ಗೀತೆಗಳಲ್ಲಿನ ಶಬ್ಡ ದ ವಿಶಾಲ ಅರ್ಥವನ್ನು ವಿವರಿಸುತ್ತಾ Manohar Prasad ರವರು ಕವಿ ಮೂಖ ಬ್ರಹ್ಮನಲ್ಲ ಶಬ್ದ ಬ್ರಹ್ಮ ಎಂಬುದನ್ನು ಗೊತ್ತುಪಡಿಸಿದ್ದು ಹೊಸ ಬಗೆಯೆ ಸರಿ.ಇದು ಕರಾವಳಿ ಭಾಗಕ್ಕೆ ವಿನೂತನ ಕಾರ್ಯಕ್ರಮ.ಮೊದಲ ಪ್ರಯತ್ನದಲ್ಲೆ ಯಶಸ್ಸುಕಂಡದ್ದು ಹೆಮ್ಮೆಯ ವಿಷಯ,
No comments:
Post a Comment