Thursday, January 26, 2017

ಆಟೋ ರಾಜನಿಗೆ ಸಿನೆಮಾ ವೇ ಮುಖ್ಯವಾಯಿತು!

ಅರೆ ಇದ್ಯಾವ ಸಿನೆಮಾ ದ ಬಗ್ಗೆ ವಿಮರ್ಶೆ ಅಂತ ತಲೆ ಕೆಡಿಸುಕೊಳ್ಳುವುದು ಬೇಡ."ಅವಸರವೇ ಅಪಘಾತಕ್ಕೆ ಕಾರಣ" ಇದು ಎಲ್ಲಾ ಕಡೆ ಕೇಳಿ ಬರುವ ಮಾತು. ಅವಸರದಿಂದ ಅವಾಂತರವೂ ಆದ ಸಂದರ್ಭ! ನಾನು ಮಂಗಳೂರಿನ ಸುತ್ತ ಮುತ್ತ ಆಟೋ ಪ್ರಯಾಣ ಮಾಡಿದ ಅನುಭವ ಮತ್ತು ಗಮನಿಸಿದ ಮೂರು ಸತ್ಯ ಸಂಗತಿಗಳನ್ನು ಹಂಚಿಕೊಳ್ಳುವೆ
ಸತ್ಯ ಸಂಗತಿ-1 
ಇಂದು ಗಣರಾಜೋತ್ಸವದ ಕಾರ್ಯಕ್ರಮ ಮುಗಿಸಿ ಹೆಸರಾಂತ ಶಾಂಪಿಂಗ್ ಮಾಲ್ ಗೆ ಸ್ನೇಹಿತನ ಜೊತೆ ತೆರಲುತ್ತಿದ್ದೆ. ಆ ಶಾಂಪಿಂಗ್ ಮಾಲ್ ನ ಒಳಭಾಗದ ರಸ್ತೆಯಲ್ಲಿ ಬಹಳ ವೇಗದಿಂದ ರಿಕ್ಷಾವೊಂದು ಬಂತು. ಅದು ಕೂಡ ಹಾರ್ನ್ ಹಾಕದೆ. ನಮಗೆ ಒರೆಸಿಕೊಂಡೆ ಮುಂದೆ ಸಾಗಿತು. ಅರೇ ಅದೇನೂ ತುರ್ತು ಸಂದರ್ಭ ಎಂದುಕೊಂಡೆ. ಆದರೂ ನಿಂತ ರಿಕ್ಷಾದ ಬಳಿ ಬೇಗನೇ ಹೋಗಿ ವಿಚಾರಿಸಿದೆವು. ಮಾತಿನ ಚಕಮಕಿಯೂ ಆಯಿತು .ರಿಕ್ಷಾ ಚಾಲಕನ ಉತ್ತರವಂತೂ ಎಲ್ಲರೂ ಅನುಕಣೀಸಬೇಕಾದದ್ದೆ! ಅದು ಏನೆಂದು ಕೇಳ್ತಿರಾ?
ಆತನ ರಿಕ್ಷಾದಲ್ಲಿ ಹುಡುಗಿಯೊಬ್ಬಳನ್ನು ಕೂರಿಸಿಕೊಂಡು ಬಂದಿದ್ದ.ಆಕೆ ಮೊದಲೇ ಆನ್ ಲೈನ್ ನಲ್ಲಿ ಸಿನೆಮಾ ಬುಕ್ ಮಾಡಿದ್ದು., ನಿಗದಿತ ಸಮಯಕ್ಕೆ ತಲುಪಲಿಲ್ಲ .ಸಿನೆಮಾ ತಡವಾದ ಕಾರಣಕ್ಕೆ ಈ ವೇಗದ ಚಾಲನೆ. ಅಬ್ಬಾ... ಎಂಥ ವಿಚಿತ್ರ ಪಾದಚಾರಿಗಳ ಪ್ರಾಣಕ್ಕೆ ಕುತ್ತು ಬಂದರೂ ಪರವಾಗಿಲ್ಲ, ಬುಕ್ ಮಾಡಿದ ಸಿನೆಮಾ ಮಿಸ್ ಆಗಬಾರದು. ಬಹಳ ನಾಜುಕಾಗಿ ಸಮರ್ಥಿ
ಸಿಕೊಳ್ಳುವುದನ್ನು ನೋಡಿದರೆ ಮಂಗಳೂರಿನ ದಿನಚರಿ ಈ ಆಟೋ ಚಾಲನಿಂದಲೇ ಶುರುವಾಗುತ್ತದೆ ಎಂದುಕೊಳ್ಳಬೇಕು.
ಸತ್ಯ ಸಂಗತಿ -2
ಸ್ಟೇಟ್ ಬ್ಯಾಂಕಿನ ಖಾಸಗಿ ಬಸ್ಸು ಬರುವ ಎದುರಿನ ರೋಡಿನ ಸಮೀಪ ಇರುವ ರಿಕ್ಷಾ ಸ್ಟಾಂಡ್ ನಲ್ಲಿ ಕೆಲವರು ಬಾಡಿಗೆಗೆ #ಬಲೆ #ಬಲೆ ...ಓಡೆಗ್ ಪೋವೊಡು ?ಎಲ್ಲಿಗೆ ... ?ಎಂದು ಅತ್ತ ಹೋದವರನ್ನು,ಇತ್ತ ಬಂದವರೆನ್ನೆಲ್ಲ ಕರೆಯುತ್ತಿರುತ್ತಾರೆ. ವಿಶೇಷವೆಂದರೆ ಇವರ ರಿಕ್ಷಾದಲ್ಲಿ ಮೀಟರ್ ಓಡುವುದಿಲ್ಲ.ಸ್ಟೇಟ್ ಬ್ಯಾಂಕ್ ನಿಂದ ಹಂಪನಕಟ್ಟೆಗೆ 50ರೂಪಾಯಿ! ಸ್ಟೇಟ್ ಬ್ಯಾಂಕಿನಿಂದ ಜ್ಯೋತಿ ಸರ್ಕಲ್ ಗೆ 100 ರೂಪಾಯಿ!! ಇದು ಮೊನ್ನೆ ನನಗೆ ಆದ ಅನುಭವ. ಕೊನೆಗೆ ಜಗಳ ಮಾಡಿ ಟ್ರಾಫಿಕ್ ಪೊಲೀಸರಿಗೆ ಆ ಪುಣ್ಯಾತ್ಮನ ನ್ನು ಒಪ್ಪಿಸಬೇಕಾಯಿತು! ನನ್ನಂತೆಯೇ ಅನೇಕರಿಗೆ ಮೋಸ ಮಾಡುತ್ತಿರುತ್ತಾರೆ.ಮೊನ್ನೆ ಆಟೋ ಚಾಲಕನೊಬ್ಬ ಕನ್ನಡದಲ್ಲಿ ಮಾತಿಗೆ ಆರಂಭಿಸಿದ 
ನಾನು ಕನ್ನಡದಲ್ಲಿಯೇ ಮಾತು ಮುಂದುವರೆಸಿದೆ
ಕೊನೆಗೆ ನಿಗದಿತ ಜಾಗ ತಲುಪುವಾಗ ಹೆಚ್ಚುವರಿ ಹಣ ಕೇಳಿದಾಗ ದಾದಯೇ ಊರುದಕ್ಲೆನ್ ಮಂಗೆ ಮಲ್ಪುವರಾ ಎಂದು ಹೇಳಿದ್ದೆ ತಡ sorry ಎಂದು ಹೇಳುತ್ತಾ ನಿಗದಿತ ದರ ತೆಗೆದುಕೊಂಡು ಮುಂದುವರಿದ. ದಿನವೂ ಈ ರೀತಿಯ ಸುಲಿಗೆ ಆಗುತ್ತಲೇ ಇರುತ್ತದೆ. 
ಸತ್ಯ ಸಂಗತಿ-3
ಸಾಮಾನ್ಯವಾಗಿ ಆಟೋ ಚಾಲಕರು ಸಮವಸ್ತ್ರ ಧರಿಸುವುದುಂಡು.ಆದರೆ ಬಹುತೇಕ ಚಾಲಕರು ಸಾಮಾನ್ಯ ಬಟ್ಟೆಯಲ್ಲಿ ಚಾಲನೆ ಮಾಡುತ್ತಾರೆ. ಇದನ್ನು ಗಮನಿಸುವ ಪೊಲೀಸ್ ಸಿಬ್ಬಂದಿಗಳು ಮೌನದಿಂದ ಇರುತ್ತಾರೆ. ಇದರ ನಡುವೆ ಕುಡಿದು ರಿಕ್ಷಾ ಚಲಾಯಿಸಿ ಏಕಮುಖ ಸಂಚಾರವಿರುವ ರಸ್ತೆಯಲ್ಲಿ ಬಂದು ಟ್ರಾಫಿಕ್ ಪೊಲೀಸರೊಂದಿಗೆ ಜಗಳಕ್ಕೆ ಇಳಿಯುವವರು ಕೂಡ ಇದ್ದಾರೆ.ಮೊನ್ನೆ ಶರವು ಮಹಾ ಗಣಪತಿ ರಸ್ತೆಯಲ್ಲಿ ನಾನು ಕಂಡ ಘಟನೆಯಿದು
ಬರಹ ಕೊನೆಗೊಳಿವ ಮುನ್ನ, ಹಂಚಿಕೊಳ್ಳಬೇಕಾದ ಸಂಗತಿ ಅನೇಕ ಇದೆ.ಒಂದು ಮಾತು ಅಟೋ ರಿಕ್ಷಾದಲ್ಲಿ ಪ್ರಾಮಾಣಿಕ ವಾಗಿ ದುಡಿಯುವರು ತುಂಬಾ ಮಂದಿ ಇದ್ದಾರೆ. ಕಾನೂನು ಪಾಲಿಸದ ಮತ್ತು ಹೆಚ್ಚುವರಿ ಹಣ ವಸೂಲಿ ಮಾಡುವ ವರ್ಗದವರಿಂದ ನಿಯತ್ತಿನ ದುಡಿಮೆಗೆ ಬೆಲೆಯೆ ಇಲ್ಲದಂತಾಗಿದೆ.

No comments:

Post a Comment