Friday, December 09, 2016

ತುಳು ಚಿತ್ರರಂಗಕ್ಕೆ ಕೋಸ್ಟಲ್ ವುಡ್ ಹೆಸರು ಬಂದದ್ದು ಹೇಗೆ?

ಈಗ ನಮ್ಮ ಕುಡ್ಲದಲ್ಲಿ .ದಿನಕೊಂದರಂತೆ ಹುಟ್ಟಿಕೊಳ್ಳುವ ತುಳು ಸಿನೆಮಾಗಳ ಸುದ್ದಿ ಆಗಾಗ ಕೋಸ್ಟಲ್ ವುಡ್ ಎಂಬ ಪದದೊಂದಿಗೆ ಪ್ರಕಟಗೊಳ್ಳುತ್ತಿದೆ.ಈ ಕೋಸ್ಟಲ್ ವುಡ್ ಪದ ಬಳಕೆ ಶುರು ಮಾಡಿದ್ದು ಯಾರು ಎನ್ನುವುದರ ಬಗ್ಗೆ ಕುತೂಹಲವಿದೆಯೇ? ಹಾಲಿವುಡ್,ಸೆಂಡಲ್ ವುಡ್ ನಂತೆ ನಮ್ಮ ತುಳು ಚಿತ್ರರಂಗಕ್ಕೂ ನಾಮಕರಣ ಮಾಡಿದ್ದು ಸ್ಟೀವನ್ ರೇಗೊ ದಾರಂದಕುಕ್ಕು .ಇವರು ವಿಜಯ ಕರ್ನಾಟಕ ಮಂಗಳೂರು ಆವೃತ್ತಿಯಲ್ಲಿ ಉಪ ಸಂಪಾದಕರಾಗಿ ,ವರದಿಗಾರರಾಗಿ ಎಲ್ಲರಿಗೂ ಚಿರಪರಿಚಿತರು. ಮೂಲತ: ಪುತ್ತೂರು ತಾಲೂಕಿನ ದಾರ೦ದಕುಕ್ಕು ನಿವಾಸಿ ಹಿಲ್ಡಾ ರೇಗೊ ಮತ್ತು ಇಗ್ನೇಶಿಯಸ್ ರೇಗೋ ಇವರ ಪುತ್ರ .ಕನ್ನಡ ಸಿನಿಮಾ ಚಿತ್ರರಂಗಕ್ಕೆ ಈಗಾಗಲೇ  sandalwood ಎಂಬ ಹೆಸರು ಜಗದೆಲ್ಲೆಡೆ ಹಬ್ಬಿದೆ.ಆದರೆ ಸುಮಾರು 40 ಸಿನಿಮಾ ದಾಟಿದರೂ ಕರಾವಳಿ ತೀರದ ಸಿನಿಮಕ್ಕೊಂದು ನಾಮಕರಣ ಬೇಕು ಎನ್ನುವಾಗ ಇವರಿಗೆ ಹೊಳೆದದ್ದೆ “ಕೊಸ್ಟಲ್ ವುಡ್" ಎಂಬ ಶಬ್ದ .ಈಗ coastalwood  ಪದ ದೇಶದೆಲ್ಲೆಡೆ ಹರಡಿದ್ದು ಎಲ್ಲ ಮಾಧ್ಯಮಗಳು ಈಗ ಕೊಸ್ಟಲ್ ವುಡ್ ಎಂದೇ ಇಡೀ ತುಳು ಚಿತ್ರಂಗವನ್ನು ಕರೆಯುತ್ತಿದೆ .ಕರಾವಳಿ ಸಿನಿಮಾ ಸುದ್ದಿಗಳಿಗೆ ಮಸಾಲೆ ಅರೆದು ಓದುಗನನ್ನು ಕುತೂಹಲ ಮೂಡಿಸುವಂತೆ ಮಾಡುವ ಕಲೆ ರೇಗೊರವರದು .ಇತ್ತೇಚೆಗೆ ಕುಡ್ಲ ಗಾಸಿಪ್ ನ್ನು ಪ್ರಕಟಿಸಿ ಪ್ರತಿ ವಾರ ಕಾಯುವಂತೆ ಮಾಡುತ್ತಿರುವುದು ನಿಮಗೆಲ್ಲರಿಗೂ ತಿಳಿದ ಸಂಗತಿ. ಕನ್ನಡ ಪತ್ರಿಕೆಯಲ್ಲಿ ಅದುಕೂಡ ರಾಜ್ಯವ್ಯಾಪ್ತಿಯ ಅವೃತ್ತಿಯಲ್ಲಿ ಮಂಗಳೂರಿನ ಸಿನಿಮಾ ಸುದ್ದಿಗಳ ಬಗ್ಗೆ ವಿಶೇಷವಾಗಿ ‘ಕುಡ್ಲ’ ಎನ್ನುವ ತುಳು ಶಬ್ದವನ್ನು ಪ್ರಯೋಗ ಮಾಡಿದವರಲ್ಲಿ ಇವರು ಮೊದಲಿಗರು.
ಸ್ಟೀವನ್ ರೇಗೊ ದಾರಂದಕುಕ್ಕು
ಬಾಲ್ಯದಲ್ಲಿಯೇ ಪುತ್ತೂರಿನ ಸುದ್ದಿ ಪತ್ರಿಕೆಗೆ   ಸಣ್ಣ ಕವನ,ಲೇಖನಗಳನ್ನು ಬರೆಯುವ ಮೂಲಕ ಶುರುವಾದ ಬರವಣಿಗೆ ಇಂದು ಉಪಸಂಪಾದಕ ಹುದ್ದೆಯ ವರೆಗೆ ತಲುಪಿಸಿದೆ. ರೇಗೊರವರಿಗೆ ತಾನು ಮಾಧ್ಯಮ ವರದಿಗಾರನಾಗಬೇಕೆಂದು ಎಳೆ ವಯಸ್ಸಿನಲ್ಲೆ ಕನಸು ಕಂಡವರಲ್ಲ .ಏನಾದರೊಂದು ಹೊಸ ಲೇಖನ ಬರೆಯಬೇಕು ಎಂದು ಆಲೋಚಿಸಿದಾಗ ಇವರಿಗೆ ನೆನಪಿಗೆ ಬಂದದ್ದು ಪುತ್ತೂರಿನ ಬಿಸಿ ನೀರಿನ ಬುಗ್ಗೆ. ಇದು ದಕ್ಷಿಣ ಭಾರತದ ಏಕೈಕ ಬಿಸಿ ನೀರಿನ ಬುಗ್ಗೆಯಾಗಿದ್ದು ಅಂದು ಪ್ರಜವಾಣಿ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಕರ್ನಾಟಕ ದರ್ಶನ ಅಂಕಣದಲ್ಲಿ ಮುಖಪುಟದಲ್ಲಿ ಲೇಖನ ಪ್ರಕಟವಾಗಿದ್ದೆ ಹೊಸ ತಿರುವನ್ನು ಪಡೆಯಲು ಕಾರಣವಾಯಿತು. ಆಗ ಸ್ಟೀವನ್ ರೇಗೊ ಎಂಬ ಹೆಸರು ಎಲ್ಲೆಡೆ ಹರಡಿತು. ಇನ್ನೊಂದು ವಿಶೇಷವೆಂದರೆ.ಗ್ರಾಮೀಣ ಭಾಗದಿಂದಲೇ ಬೆಳೆದು ಬಂದ ಸ್ಟೀವನ್ ರೇಗೊರವರು ಗ್ರಾಮೀಣ ಜನ ಜೀವನ ಅಲ್ಲಿಯ ಜೀವಂತ ಸಮಸ್ಯೆಗಳನ್ನು ಕಣ್ಣಾರೆ ಕಂಡವರು. ಹಾಗಾಗಿಯೇ ಗ್ರಾಮೀಣ ವರದಿಗಳಿಗೆ ಹೆಚ್ಚು ಮಹತ್ವವನ್ನು ನೀಡುತ್ತಾ ಬಂದಿದ್ದಾರೆ.ಇದರ ಫಲವಾಗಿಯೇಕಡಂದಲೆಪ್ರಶಸ್ತಿಗೆ ಇವರು ಆಯ್ಕೆಯಾದರು .ಜಗತ್ತಿನೆಲ್ಲೆಡೆ ಮಲ್ಲಿಗೆಯ ಕಂಪು ಬೀರಿರುವ ಉಡುಪಿಯ ಶಂಕರಪುರ ಮಲ್ಲಿಗೆ ಬಗ್ಗೆ ನೀವೆಲ್ಲ ತಿಳಿದಿರಬೇಕಲ್ಲವೆ? ಹೆಸರಾಂತ ಮಲ್ಲಿಗೆಯ ಬೆನ್ನು ಹತ್ತಿದಾಗ ಮಲ್ಲಿಗೆಗೆ ಬಳಸುತ್ತಿದದ್ದು ಮಾತ್ರ ವಿಷಕಾರಿ ಕೀಟನಾಶಕ! ಹೌದು ಮಲ್ಲಿಗೆಯ ವರದಿಯನ್ನು ತಯಾರಿಸಿ ಕೃಷಿಗೆ ಮತ್ತು ಕೃಷಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಇವರ ಲೇಖನ ಒಂದು ಆಂದೋಲನವನ್ನೇ ಮಾಡಿತು.

ಇದಕ್ಕಾಗಿ ಕಿನ್ನಿಗೋಳಿಯ ಯುಗ ಪುರುಷ ಮತ್ತು ವಿಜಯ ಕಲಾವಿದರ ಸಹಯೋಗದಲ್ಲಿ ಹಿರಿಯ ಪತ್ರಕರ್ತ ದಿ|| ಕೆ.ಜೆ. ಶೆಟ್ಟಿ ಕಡಂದಲೆ ಇವರ ಸ್ಮರಣಾರ್ಥಕಡಂದಲೆಪ್ರಶಸ್ತಿಯನ್ನು ನೀಡಿ ಗೌರವಿಸಿದ್ದರು.ನಮ್ಮ ದಕ್ಷಿಣ ಕನ್ನಡದಲ್ಲಿಯೇ ಹುಟ್ಟಿ ಇಲ್ಲೇ ಸಾಯುವ ನಂದಿನಿ ನದಿಯ ಬಗ್ಗೆ ಬರೆದ ವಿಮರ್ಶಾತ್ಮಕ ಲೇಖನಕ್ಕೆ .. ಜಿಲ್ಲಾ ಪತ್ರಕರ್ತರ ಸಂಘದಿಂದ ಪಾ.ಗೊ (ಪದ್ಯಾಣ ಗೋಪಾಲಕೃಷ್ಣ) ಪ್ರಶಿಸ್ತಿಗೂ ಇವರು ಅರ್ಹರಾದರು.ಇನ್ನು ಎಲ್ಲ ವಯೋ ಮಾನವವರು ಓದಲೇ ಬೇಕೆನಿಸುತ್ತದೆ. ಇಂತಹ ಕರಾವಳಿ ಸಿನಿಮಾ ಸುದ್ದಿಗಳನ್ನು 4 ವರ್ಷಗಳಿಂದ ಬರೆಯುತ್ತಿದ್ದ ಇವರ ಲೇಖನದ ಗುಣಮಟ್ಟ ಮತ್ತು ಅತೀ ಹೆಚ್ಚು ಸಿನಿಮಾ ಲೇಖನ ಬರೆದ ಫಲವಾಗಿ 2014 ಸಿರಿ ಸಿನಿಮಾ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ಇದೀಗಾ ಇವರ ಎಲ್ಲಾ ಲೇಖನಗಳಿಗೆ ತಮ್ಮ ಪತ್ನಿ ಸಾಥ್ ನೀಡುತ್ತಿದ್ದಾರೆ.

No comments:

Post a Comment